ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಭೋಧನೋಪಕರಣದಿಂದ ಕಲಿಕೆ ಉತ್ತಮ…

Share Below Link

ಶಿವಮೊಗ್ಗ : ಬೋಧನೋಪಕ ರಣದಿಂದ ಮಕ್ಕಳಿಗೆ ಮಾಡುವ ಪಾಠ ಅತ್ಯಂತ ಉಪಯುಕ್ತವಾಗಿ ರುತ್ತದೆ ಎಂದು ಶಿಕ್ಷಣ ತe ಹಾಗೂ ಖ್ಯಾತ ವಾಗ್ಮಿ ಅಕ್ಷತಾ ಗೋಖಲೆ ಅಭಿಪ್ರಾಯಪಟ್ಟರು.
ನಗರದ ಶರಾವತಿ ನಗರ ಬಡಾವಣೆಯಲ್ಲಿರುವ ಆದಿಚುಂಚ ನಗಿರಿ ಶಿಕ್ಷಣ ಸಂಸ್ಥೆ ವತಿಯಿಂದ ಬಿಜಿಎಸ್ ವಸತಿಯುತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗೆ ಏರ್ಪಡಿಸಿದ್ದ ಪುನಶ್ಚೇತನ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾ ಡಿದ ಅವರು, ಮಕ್ಕಳು ಸಹ ಜವಾಗಿ ಬೋಧನೋಪಕರಣದ ಕಡೆ ಆಸಕ್ತಿಯನ್ನು ವಹಿಸುತ್ತಾರೆ. ಇದನ್ನು ಉಪಯೋಗಿಸಿ ಮಾಡು ವಂತಹ ಪಾಠ ಮಕ್ಕಳ eನವನ್ನು ಹೆಚ್ಚಿಸುತ್ತದೆ ಎಂದರು.
ಶಿಕ್ಷಕರೂ ಕೂಡ ಪ್ರತಿನಿತ್ಯ ವಿದ್ಯಾರ್ಥಿಗಳೇ, ದಿನದ ೨೪ ಗಂಟೆ ಯೂ ಕೂಡ ನಿಮ್ಮಲ್ಲಿ ಕಲಿಕೆಯ ತುಡಿತವಿರಬೇಕು.ನಾನು ಎಲ್ಲವ ನ್ನು ಕಲಿತಿದ್ದೇನೆ, ನಾನು ಓದುವ ಸಂದರ್ಭದಲ್ಲಿ ಎಲ್ಲವನ್ನೂ ಅರಿತಿ ದ್ದೇನೆ ಎಂದುಕೊಂಡರೆ ನಿಮ್ಮ eನ ಮಟ್ಟ ಅಂದೇ ಕುಸಿಯಲಾರಂಭಿ ಸುತ್ತದೆ. ೩೬೫ ದಿನವೂ ನೀವು ಕಲಿಕೆಯನ್ನು ಮುಂದುವರಿಸಿದ್ದೇ ಆದರೆ ಮಾದರಿ ಶಿಕ್ಷಕರಾಗುವುದ ರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಪಾಠ ಮಾಡು ವುದು ಒಂದು ಕಲೆ, ಯಾವುದೋ ಒಂದು ಪರೀಕ್ಷೆಯಲ್ಲಿ ಮಗು ಶೂನ್ಯ ಅಂಕವನ್ನು ಪಡೆಯಿತು ಎಂದರೆ ಅದರ ಭವಿಷ್ಯವೇ ಮುಗಿ ದಂತೆ ಅಲ್ಲ. ಇದನ್ನು ಅರ್ಥ ಮಾಡಿ ಕೊಂಡು ಶಿಕ್ಷಕರು ಮಗುವನ್ನು ಹುರಿದುಂಬಿಸುವಂತಹ ಕಾರ್ಯ ವನ್ನು ಮಾಡಬೇಕು. ಪ್ರತಿಯೊಂ ದು ಮಗುವಿನಲ್ಲಿಯೂ ಕೂಡ ಅದರದ್ದೇ ಆದ eನ ಮಟ್ಟವಿರು ತ್ತದೆ. ಅದನ್ನು ಪುನಶ್ಚೇತನಗೊ ಳಿಸುವ ಕಾರ್ಯ ನಿಮ್ಮದಾಗಿರು ತ್ತದೆ ಎಂದು ಶಿಕ್ಷಕರಿಗೆ ತಿಳಿಸಿದರು.
ಮನೆಯ ಸಮಸ್ಯೆಯನ್ನು ಮನೆಯಲ್ಲಿಯೇ ಬಿಟ್ಟು ಬರ ಬೇಕು. ಆಟದ ಲೆಕ್ಕ ಆಟಕ್ಕೆ, ಊಟ ದ ಲೆಕ್ಕ ಊಟಕ್ಕೆ, ಪಾಠದ ಲೆಕ್ಕ ಪಾಠಕ್ಕೆ ಇದನ್ನು ಅರಿತು ಶಿಕ್ಷಕರು ತಮ್ಮ ಕರ್ತವ್ಯ ನಿರ್ವಹಿಸಬೇಕು. ಪ್ರತಿಯೊಬ್ಬ ಮನುಷ್ಯರಿಗೂ ತನ್ನ ದೇ ಆದ ವೈಯಕ್ತಿಕ ಸಮಸ್ಯೆಗಳಿ ರುತ್ತವೆ.
ಶಾಲೆಗೆ ಬರುವಾಗ ಅವು ಗಳನ್ನು ಮನೆಯಲ್ಲಿಯೇ ಬಿಟ್ಟು, ಬಂದರೆ ನಿಮ್ಮ ಅಂದಿನ ಪಾಠ ಯಶ ಸ್ವಿಯಾಗಿ ನೆರವೇರುತ್ತದೆ ಎಂದ ಅವರು, ಮಕ್ಕಳನ್ನು ತಮ್ಮದೇ ಮಕ್ಕಳು ಎಂಬಂತೆ ನೋಡಿಕೊಂ ಡಾಗ ಮಾತ್ರ ಆ ಮಗುವಿನ ಶ್ರೇಯಸ್ಸು ಹೆಚ್ಚಾಗಲು ಸಾಧ್ಯ ಎಂದು ಹೇಳಿದರು.
ಅಬ್ದುಲ್ ಕಲಾಂ ರಾಷ್ಟ್ರಪತಿ ಗಳು ಆಗಿದ್ದರೂ ಸಹ ಮಕ್ಕಳಲ್ಲಿ ಮಕ್ಕಳಾಗಿ ಅವರುಗಳಿಗೆ eನ ವನ್ನು ಧಾರೆಯೆರೆಯುತ್ತಿದ್ದರು ಎಂದ ಅವರು, ಅನೇಕ ಉದಾಹ ರಣೆಗಳ ಮೂಲಕ ಮಕ್ಕಳಿಗೆ ವಿಷ ಯವನ್ನು ಮನನ ಮಾಡಿಸುತ್ತಿ ದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆದಿಚುಂ ಚನಗಿರಿ ಸಂಯುಕ್ತ ಪ್ರೌಢ ಶಾಲೆಯ ಹಾಗೂ ಬಿಜಿಎಸ್ ವಸತಿ ಶಾಲೆಯ ಪ್ರಾಂಶುಪಾಲೆ ಹೇಮಾ. ಎಸ್.ಆರ್, ವ್ಯವಸ್ಥಾಪಕ ಅಮಿಷ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.