ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಖಿನ್ನತೆಯಿಂದ ದೂರವಿರಲು ನಗು ಸಹಕಾರಿ…

Share Below Link

ಶಿವಮೊಗ್ಗ: ನಗು ಸಂತೋಷ ನಮ್ಮ ಮನಸ್ಸನ್ನು ಹಗುರ ಗೊಳಿ ಸುವುದರ ಜತೆಗೆ ಖಿನ್ನತೆ ದೂರವಾ ಗಿಸುತ್ತದೆ. ನಗು ಒಂದು ದಿವ್ಯ ಸಂ ಜೀವಿನಿ ಎಂದು ರಂಗಭೂಮಿ ಕಲಾವಿದ ಅಣ್ಣಪ್ಪ ಒಂಟಿಮಾಳಿಗಿ ಹೇಳಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವ ಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕೌಟುಂಬಿಕ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮಾತ ನಾಡಿ, ನಗುವಿಗೆ ವಿಶೇಷ ಶಕ್ತಿ ಇದೆ. ಹಾಸ್ಯ ನಮ್ಮೊಳಗೆ ಹುದುಗಿರು ತ್ತದೆ. ಆದರೆ ನಮ್ಮಲ್ಲಿ ಹಾಸ್ಯ ಪ್ರe ಇರಬೇಕು. ಇನ್ನೂ ಹಾಸ್ಯ ಕಲಾವಿ ದರ ಸಂಖ್ಯೆಯು ಕ್ಷೀಣಿಸುತ್ತಿದೆ ಎಂದು ತಿಳಿಸಿದರು.


ಪ್ರತಿನಿತ್ಯ ನಮ್ಮ ನಿಜ ಜೀವನ ದಲ್ಲಿ ಸಾಕಷ್ಟು ಹಾಸ್ಯ ಪ್ರಸಂಗಗಳು ನಡೆಯುತ್ತಿರುತ್ತವೆ. ಅವುಗಳನ್ನು ಸ್ವೀಕರಿಸುವ ಪ್ರe ನಮ್ಮೆಲ್ಲರಲ್ಲಿ ಇರಬೇಕು ಎಂದರು. ಅನೇಕ ಹಾಸ್ಯ ಪ್ರಸಂಗಗಳು ಹಾಸ್ಯ ಕವನಗಳು, ಹಾಸ್ಯ ಗೀತೆಗಳನ್ನು ಹಾಡಿ ರಂಜಿಸಿ ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವಅಧ್ಯಕ್ಷೆ ಸುಮತಿ ಕುಮಾರ ಸ್ವಾಮಿ ಮಾತನಾಡಿ, ರೋಟರಿ ಸಂಸ್ಥೆ ಸೇವಾ ಕಾರ್ಯಗಳ ಜತೆ ಯಲ್ಲಿ ಸಾಧಕರನ್ನು ಕಲಾವಿದರನ್ನು ಗುರುತಿಸಿ ಗೌರವಿಸುವ ಸಾರ್ಥಕ ಕೆಲಸವನ್ನು ನಿರಂತರವಾಗಿ ಮಾಡಿ ಕೊಂಡು ಬರುತ್ತಿದೆ ಎಂದು ಹೇಳಿ ದರು.
ಹಾಸ್ಯ ನಮ್ಮಲ್ಲಿ ವಿಶೇಷ ಚೈತನ್ಯವನ್ನು ಮೂಡಿಸುತ್ತದೆ. ಸದಾ ಆರೋಗ್ಯದಿಂದ ಇರುವಂತೆ ಸಹಕಾರಿ ಆಗಿಸುತ್ತದೆ. ಹಾಸ್ಯ ಮನೋಭಾವ, ಹಾಸ್ಯ ಪ್ರe ನಮ್ಮಲ್ಲಿ ಸದಾಜಗೃತರಾಗಿರ ಬೇಕು ಎಂದು ತಿಳಿಸಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ. ವಿಜಯ್ ಕುಮಾರ್, ಚಂದ್ರಹಾಸ ಪಿ ರಾಯ್ಕರ್, ಮಾಜಿಗವರ್ನರ್ ಎಚ್.ಎಲ್.ರವಿ, ಮ್ಯಾನೇಜಿಂಗ್ ಟ್ರಸ್ಟಿ ಚಂದ್ರಶೇಖರಯ್ಯ, ಮಾಜಿ ಅಧ್ಯಕ್ಷ ಆದಿಮೂರ್ತಿ, ಕಡಿದಾಳ್ ಗೋಪಾಲ್, ಡಾ. ಪರಮೇಶ್ವರ ಶಿಗ್ಗಾವ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕುಮಾರಸ್ವಾಮಿ, ಗಣೇಶ್, ಡಾ. ಅರುಣ್, ಹುಲಿರಾಜ್, ನಾಗವೇಣಿ, ಇನ್ನರ್‌ವ್ಹೀಲ್ ಮಾಜಿಅಧ್ಯಕ್ಷೆ ಬಿಂದು ವಿಜಯ್ ಕುಮಾರ್, ವಿಜಯ ರಾಯ್ಕರ್ ಉಪಸ್ಥಿತರಿದ್ದರು.