ತಾಜಾ ಸುದ್ದಿಲೇಖನಗಳು

ಕಾವೇರಿ ಕಿಚ್ಚು : ಶತಮಾನದ ಹಿಂದೆ ಆರಂಭವಾದ ಜಲ ವಿವಾದದ ಇತಿಹಾಸ !

Share Below Link

ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಮತ್ತೆ ಕಾವೇರಿ ನದಿ ನೀರು ಹಂಚಿಕೆಯ ವಿವಾದ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಾ ಇದೆ. ದಕ್ಷಿಣ ಭಾರತದ ಜಲವಿವಾದಗಳ ಪೈಕಿ ಹೆಚ್ಚು ಸುದ್ದಿಯಾಗುವುದು ಕಾವೇರಿ ನೀರಿನ ಹಂಚಿಕೆ ವಿವಾದ.
ತಮಿಳುನಾಡು ಹಾಗೂ ಕರ್ನಾಟಕ ಎರಡು ರಾಜ್ಯಗಳಿಗೂ ಕಾವೇರಿ ಜೀವನದಿಯಾಗಿದೆ ಹಾಗೂ ಈ ಜೀವ ನದಿಗಾಗಿ ಎರಡು ರಾಜ್ಯಗಳ ನಡುವೆ ಶತಮಾನಗಳಿಂದ ಸಂಘರ್ಷ ಏರ್ಪಡುತ್ತಿದೆ. ಎರಡು ರಾಜ್ಯಗಳು ಸೇರಿ ಕಾವೇರಿ ಜಲ ವಿವಾದವನ್ನು ಸುಪ್ರೀಂ ಕೋರ್ಟಿನ ಬಾಗಿಲಿಗೆ ತಂದು ನಿಲ್ಲಿಸಿzರೆ.
ಕರ್ನಾಟಕದಲ್ಲಿ ಪ್ರತಿಭಟನೆಗಳು ಭುಗಿಲಿದ್ದಿದೆ, ಅನ್ನದಾತರು ಬೀದಿಗಿಳಿದಿzರೆ, ಅಷ್ಟಕ್ಕೂ ವಿವಾದ ಆರಂಭವಾಗಿದ್ದೇಕೆ, ಬ್ರಿಟಿಷರ ಕಾಲದಲ್ಲಿ ಶುರುವಾದ ಈ ವಿವಾದದಲ್ಲಿ ಬಿದ್ದವರ್‍ಯಾರು, ಗೆದ್ದವರ್‍ಯಾರು?
ಭಾರತೀಯ ಹಿಂದೂ ಪುರಾಣ ಗಳಲ್ಲಿ ಪ್ರಾರ್ಥಿಸಲಾಗಿರುವ ಏಳು ಪುಣ್ಯ ನದಿಗಳಲ್ಲಿ ಕಾವೇರಿಯೂ ಒಂದು, ಭಾರತವೆಂದಾಕ್ಷಣ ಗಂಗಾನದಿಯನ್ನು ಹೇಗೆ ವರ್ಣಿಸಲಾಗುತ್ತದೆಯೂ ಹಾಗೆಯೇ ದಕ್ಷಿಣ ಭಾರತದಲ್ಲಿ ಕಾವೇರಿಯನ್ನು ಪುಣ್ಯ ನದಿಯನ್ನಾಗಿ ವರ್ಣಿಸಲಾಗಿದ್ದು ದಕ್ಷಿಣ ಗಂಗೆ ಎಂದು ಪ್ರತೀತಿ ಇದೆ. ಎರಡು ರಾಜ್ಯಗಳ ಜೀವನದಿ ಎಂದು ಕರೆಯಲ್ಪಡುವ ಕಾವೇರಿ ನದಿಯು ದಕ್ಷಿಣ ಭಾರತದ ಪ್ರಮುಖ ಮತ್ತು ಪೂಜ್ಯನದಿಗಳಲ್ಲಿ ಒಂದಾಗಿದೆ. ದಕ್ಷಿಣ ಗಂಗೆ ಎಂದು ಕರೆಯಲ್ಪಡುವ ಕಾವೇರಿ ನದಿಯು ಭಾರತದ ದಕ್ಷಿಣ ರಾಜ್ಯಗಳಿಗೆ ಪ್ರಾಥಮಿಕವಾಗಿ ಕರ್ನಾಟಕ ಮತ್ತು ತಮಿಳುನಡಿಗೆ ಅಪಾರ ಸಂಸ್ಕೃತಿ, ಪರಿಸರ ಮತ್ತು ಮಹತ್ವವನ್ನು ಹೊಂದಿದೆ.


ಕೊಡಗಿನ ಬ್ರಹ್ಮಗಿರಿಯ ಪವಿತ್ರಕ್ಷೇತ್ರ ತಲಕಾವೇರಿಯಲ್ಲಿ ಉಗಮವಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸುಮಾರು ೮೦೦೦ ಉದ್ದ ಹರಿದು, ಸುಮಾರು ೮೧,೧೫೫ ಚದರ ಕಿ.ಮೀ. ಜಲಾನಯನ ಪ್ರದೇಶದ ವಿಸ್ತಾರವನ್ನು ಹೊಂದಿರುವ ಕಾವೇರಿ ಈ ಎರಡು ರಾಜ್ಯಗಳ ಜೀವನದಿಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು ೩೨೦ಕಿ.ಮೀ. ತಮಿಳುನಾಡಿನಲ್ಲಿ ೪೧೬ ಕಿ.ಮೀ. ಮತ್ತು ಎರಡು ರಾಜ್ಯಗಳ ಗಡಿನಾಡು ಪ್ರದೇಶದಲ್ಲೂ ೬೪ ಕಿ.ಮೀ. ಕಾವೇರಿ ಹರಿಯುತ್ತಿದೆ. ಹೀಗೆ ಹರಿಯುವಾಗ ತಲಾಕಾವೇರಿಯಲ್ಲಿ ಕಾವೇರಿಗೆ ಮಾರ್ಗ ಮಧ್ಯೆ ಹಾರಂಗಿ, ಹೇಮಾವತಿ, ಕಬಿನಿ, ಸಿಂಶ, ಲಕ್ಷ್ಮಣತೀರ್ಥ, ಹತ್ತಾರು ಉಪನದಿಗಳು ಹಳ್ಳ ಕೊಳ್ಳಗಳು ಸೇರಿಕೊಳ್ಳುತ್ತವೆ, ಎಲ್ಲವನ್ನು ತುಂಬಿಕೊಂಡು ಬೋರ್ಗೆರೆದು ಕಾವೇರಿ ತಮಿಳುನಾಡಿನ ಕಡೆಗೆ ಹರಿಯುತ್ತಾಳೆ. ತಮಿಳು ನಾಡಿನ ಕಡೆಗೆ ಹರಿಯುವಾಗ ಭವಾನಿ, ನೋಯ್ಯರ್, ಒಂದಷ್ಟು ಸಣ್ಣ ಸಣ್ಣ ನದಿಗಳು ಸೇರಿಕೊಳ್ಳುತ್ತವೆ.
ಹರಿಯುತ್ತಾ ಹೋದಂತೆ ಕಾವೇರಿ ರುದ್ರ ರಮಣೀಯವಾದ ಜಲಪಾತಗಳನ್ನು ನಿರ್ಮಿಸುತ್ತಾ, ಕರ್ನಾಟಕದ ೩೪,೨೭೩ ಚದರ ಕಿ.ಮೀ. ಕೇರಳದ ೨,೮೬೬ ಚದರ ಕಿ.ಮೀ. ಮತ್ತು ತಮಿಳುನಾಡಿನ ೪೪,೦೧೬ ಚದರ ಕಿ.ಮೀ. ಪ್ರದೇಶವನ್ನು ಫಲವತ್ತಾಗಿಸಿ ಜನರ ಆರ್ಥಿಕ ಮತ್ತು ಸಾಮಾಜಿಕ ಜೀವನವನ್ನು ಉತ್ತಮಪಡಿಸಿ ತನ್ನ ಓಡಿಲಿನಲ್ಲಿ ಕೋಟ್ಯಂತರ ಜೀವಸಂಕಲುಗಳನ್ನು ಸಾಕಿ ಸಲಹುತ್ತಾ ಹರಿಯುವ ಕಾವೇರಿ ಕರ್ನಾಟಕ ಮತ್ತು ತಮಿಳುನಾಡು ನಮ್ಮದೇ ಸಂಘರ್ಷದ ವಸ್ತುವಾಗಿ ಬಿಟ್ಟಿದೆ.
ಯಾಕಿಷ್ಟು ವಿವಾದ ? ಕಾರಣ ಏನು ?
ಕಾವೇರಿ ನದಿ ನೀರು ಹಂಚಿಕೆ ವಿವಾದ ೧೫೦ ವರ್ಷಗಳಷ್ಟು ಹಳೆಯದು. ಮೊದಲಬಾರಿಗೆ ದಾಖಲೆಗಳಲ್ಲಿ ಕಂಡುಬರುವಂತೆ ೧೮೯೨ರಲ್ಲಿ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಮದ್ರಾಸ್ ಪಾಂತ್ಯದ ಸರ್ಕಾರವು ತನ್ನ ಪೂರ್ವಾನುಮತಿ ಇಲ್ಲದೆ ಕರ್ನಾಟಕ ಯಾವುದೇ ಹೊಸ ನೀರಾವರಿ ಜಲಾಶಯಗಳನ್ನು ನಿರ್ಮಿಸಬಾರದು ಎಂಬ ಷರತ್ತನ್ನು ವಿಧಿಸಿ ಮೈಸೂರು ರಾಜ್ಯದ ಆಡಳಿತಗಾರರ ಜೊತೆ ಒಪ್ಪಂದವನ್ನು ಮಾಡಿಕೊಂಡಿತು. ಆದರೂ ೧೯೧೦ರಲ್ಲಿ ಅಂದಿನ ಮೈಸೂರು ರಾಜ್ಯ ಸರ್ಕಾರವು ಕೃಷ್ಣರಾಜಸಾಗರ ಜಲಾಶಯವನ್ನು ನಿರ್ಮಿಸಲು ಮದ್ರಾಸ್ ಸರ್ಕಾರದ ಅನುಮತಿಯನ್ನು ಕೋರಿತು. ಇದನ್ನು ಒಪ್ಪದ ಮದ್ರಾಸ್ ಸರ್ಕಾರ ತಕರಾರು ತೆಗೆದು ಈ ಯೋಜನೆಯನ್ನು ವಿರೋಧಿಸಿತು. ಈ ಎರಡು ರಾಜ್ಯಗಳ ಭಿನ್ನಾಬಿಪ್ರಾಯ ಹಾಗೂ ತಕರಾರನ್ನು ಅಂದಿನ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ ಸರ್ ಹೆಚ್.ಡಿ ಗ್ರಿಫಿನ್ ಅವರಿಗೆ ಸಂಧಾನ ಮಾಡಲು ಒಪ್ಪಿಸಿ ಅವರು ೧೯೧೪ರಲ್ಲಿ ತೀರ್ಪು ನೀಡಿದರು. ಈ ತೀರ್ಪನ್ನು ಒಪ್ಪದ ಮದ್ರಾಸ್ ಸರ್ಕಾರವು ಮತ್ತೆ ಕೃಷ್ಣರಾಜಸಾಗರ ಜಲಾಶಯದ ನಿರ್ಮಾಣವನ್ನು ವಿರೋಧಿಸಿತು. ಆ ನಂತರ ಸುಮಾರು ೧೦ ವರ್ಷಗಳವರೆಗೆ ಎರಡು ರಾಜ್ಯಗಳ ವಾದ ಪ್ರತಿವಾದ ಮತ್ತು ಅವಶ್ಯಕತೆ ಗಳನ್ನು ಪರಿಗಣಿಸಿ ೧೯೨೪ರಲ್ಲಿ ಅಂದಿನ ಮದ್ರಾಸ್ ಸರ್ಕಾರ ಮತ್ತು ಮೈಸೂರು ರಾಜ್ಯಗಳು ಕೆಲವು ಷರತ್ತುಗಳೊಡನೆ ಒಪ್ಪಂದ ಮಾಡಿಕೊಂಡವು. ಈ ಒಪ್ಪಂದ ಅನುಸಾರ ಮೈಸೂರು ಸರ್ಕಾರವು ಕನ್ನಾಂಬಾಡಿಯಲ್ಲಿ ಕೃಷ್ಣರಾಜಸಾಗರ ಜಲಾಶಯವನ್ನು ನಿರ್ಮಿಸಿ ಒಟ್ಟು ನೀರಾವರಿ ಪ್ರದೇಶವನ್ನು ೧,೧೦,೦೦೦ ಎಕರೆಗೆ ಸೀಮಿತಗೊಳಿಸುವುದು ಹಾಗೂ ಮದ್ರಾಸ್ ಸರ್ಕಾರವು ತನ್ನ ವ್ಯಾಪ್ತಿಯಲ್ಲಿ ಬರುವ ಕಾವೇರಿ ನದಿಯ ಉಪನದಿಗಳಾದ ಭವಾನಿ ಮತ್ತು ಅಮರಾವತಿ ನದಿಗಳಿಗೆ ಅಣೆಕಟ್ಟು ನಿರ್ಮಿಸಲು ಅವಕಾಶ ನೀಡುವುದು. ಈ ಒಪ್ಪಂದವು ೧೯೨೪ ರಿಂದ ೫೦ ವರ್ಷಗಳು ಜರಿಯಲ್ಲಿದ್ದು, ಆ ನಂತರ ಈ ಒಪ್ಪಂದ ಪುನರ್ ಪರಿಶೀಲನೆಗೆ ಒಳಪಡಿಸುವುದೆಂದು ತಿಳಿಸಲಾಗಿತ್ತು. ಆ ನಂತರ ೧೯೨೯ ಜೂನ್ ೧೭ರ ಒಪ್ಪಂದದಂತೆ ಕೃಷ್ಣರಾಜಸಾಗರ ಅಣೆಕಟ್ಟಿನಿಂದ ಜೂನ್‌ನಿಂದ ನವೆಂಬರ್‌ವರೆಗೆ ಪ್ರತಿ ತಿಂಗಳು ಒಟ್ಟು ೧,೭೪,೮೧೬ ಕ್ಯೂಸೆಕ್ಸ್ ನೀರುಬಿಡಲು ಒಪ್ಪಂದ ಮಾಡಲಾಗಿತ್ತು.
ಮೈಸೂರಿನ ಅಂದಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವವಿಖ್ಯಾತ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯನವರ ಯೋಜನೆಯಂತೆ ಕೃಷ್ಣರಾಜಸಾಗರ ಅಣೆಕಟ್ಟನ್ನು ನಿರ್ಮಾಣ ಮಾಡಿ ಮಂಡ್ಯ ಮತ್ತು ಮೈಸೂರು ಜಿಗಳಿಗೆ ನೀರಾವರಿ ಅನುಕೂಲ ಕಲ್ಪಿಸಿ ಕೊಡಲು ಮುಂದಾದರು.
ಕಾವೇರಿ ನದಿಗೆ ಕನ್ನಾಂಬಾಡಿಯಲ್ಲಿ ಅಣೆಕಟ್ಟು ನಿರ್ಮಾಣ ಮಾಡಿ ನೀರಾವರಿ, ವಿದ್ಯುತ್ ಮತ್ತು ಕುಡಿಯುವ ನೀರಿಗಾಗಿ ಜಲಾಶಯ ದಲ್ಲಿ ನೀರು ಸಂಗ್ರಹ ಮಾಡಲು ನಿರ್ಧರಿಸಲಾಯಿತು. ಅದರಂತೆ ೧೯೧೧ರಲ್ಲಿ ಪ್ರಾರಂಭವಾದ ಕೃಷ್ಣರಾಜಸಾಗರ ಅಣೆಕಟ್ಟು ೧೯೩೧ರಲ್ಲಿ ಪೂರ್ಣಗೊಂಡಿತು.
ವಿಶ್ವೇಶರಯ್ಯ ಮುಖ್ಯ ಕಾಲುವೆ ಮೂಲಕ ಮಂಡ್ಯ ಜಿಗೆ ನೀರಾವರಿ ಸೌಕರ್ಯ ಕಲ್ಪಿಸಲಾಯಿತು. ಮೈಸೂರು ನಗರವು ಸೇರಿದಂತೆ ಅನೇಕ ಗ್ರಾಮಗಳಿಗೆ ಕುಡಿಯುವ ನೀರಿನ ಸೌಕರ್ಯ ಒದಗಿಸಲಾಯಿತು.
ಈ ಹಿಂದೆ ಬೆಂಗಳೂರು ನಗರಕ್ಕೆ ತಿಪ್ಪಗೊಂಡನಹಳ್ಳಿಯಿಂದ ನೀರು ಸರಬರಾಜು ಆಗುತ್ತಿತ್ತು. ಈಗ ವಿಸ್ತಾರಗೊಂಡ ಬೆಂಗಳೂರು ಮಹಾನಗರಕ್ಕೆ ಹೆಚ್ಚುವರಿ ನೀರನ್ನು ಮಳವಳ್ಳಿ ತಾಲ್ಲೂಕಿನ ಸರಹದ್ದಿನ ತೊರೆಕಾಡನ ಹಳ್ಳಿಯ ಹತ್ತಿರದ ಕಾವೇರಿ ನದಿಯಿಂದ ನೀರನ್ನು ತರಲಾಗುತ್ತಿದೆ. ಸ್ವಾತಂತ್ರ್ಯಾನಂತರದ ಅರವತ್ತರ ದಶಕದ ಆದಿ ಭಾಗದಲ್ಲಿ ಕರ್ನಾಟಕ ಸರ್ಕಾರವು ಹಾರಂಗಿ, ಕಬಿನಿ ಮತ್ತು ಹೇಮಾವತಿ ಜಲಾಶಯಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತು.
ಆದರೆ ಈ ಯೋಜನೆಗಳಿಗೆ ತಮಿಳುನಾಡಿನ ತಕರಾರಿನಿಂದಾಗಿ ಕೇಂದ್ರ ಸರ್ಕಾರ ಅನುಮತಿ ನೀಡಲಿಲ್ಲ. ಈ ಯೊಜನೆಗಳಿಗೆ ಬೇಕಾದ ನೂರಾರು ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರವು ನೀಡಲು ಒಪ್ಪಲಿಲ್ಲ, ಆದರೆ ರಾಜ್ಯ ಸರ್ಕಾರವು ದಿಟ್ಟತನದ ಜನಪರ ಕಾಳಜಿಯನ್ನು ತೋರಿ ತನ್ನದೇ ಪರಿಮಿತ ಸಂಪನ್ಮೂಲವನ್ನು ಬಳಸಿಕೊಂಡು ಈ ಮೂರು ಜಲಾಶಯಗಳನ್ನು ನಿರ್ಮಾಣ ಗೊಳಿಸಿತು. ಇದರಿಂದಾಗಿ ಕೊಡಗು ಜಿಯ ಗೋಣಿಕೊಪ್ಪದ ಬಳಿ ಇರುವ ಹಾರಂಗಿ ಜಲಾಶಯ, ಹಾಸನ ಜಿಯ ಅರಕಲಗೂಡು ತಾಲ್ಲೂಕಿನ ಗೊರೂರು ಬಳಿ ಇರುವ ಹೇಮಾವತಿ ಜಲಾಶಯ, ಹೆಗ್ಗಡದೇವನ ಕೋಟೆ ತಾಲ್ಲೂಕಿನ ಕಬಿನಿ ಜಲಾಶಯ ನಿರ್ಮಾಣಗೊಂಡು ಲಕ್ಷಾಂತರ ಎಕರೆಗಳಿಗೆ ನೀರಾವರಿ ಸೌಕರ್ಯ ಸಿಗುವಂತಾಯಿತು.
ಹಾರಂಗಿ ಮತ್ತು ಹೇಮಾವತಿ ಜಲಾಶಯಗಳು ಕೃಷ್ಣರಾಜಸಾಗರದ ಮೇಲ್ಬಾಗದಲ್ಲಿದ್ದು ಅವುಗಳ ಹೊರಹರಿವಿನ ನೀರು ಕೃಷ್ಣರಾಜಸಾಗರಕ್ಕೆ ಬಂದು ಸೇರುತ್ತದೆ. ಆದರೆ ಕಬಿನಿ ಜಲಾಶಯದ ಮೂಲಕ ಬರುವ ಹೊರ ಹರಿವು ತಮಿಳುನಾಡಿಗೆ ಹರಿಯುತ್ತಿದೆ. ಹಾಸನ ಜಿಯ ಬೇಲೂರಿನ ಸಮೀಪ ಇರುವ ಯಗಚಿ ಜಲಾಶಯವು ಹೇಮಾವತಿ ಜಲಾಶಯದ ಮೇಲ್ಬಾಗದಲ್ಲಿರುತ್ತದೆ. ಸುವರ್ಣಾವತಿ ಅಣೆಕಟ್ಟು ಚಾಮರಾಜನಗರ ಜಿಯ ಸುವರ್ಣಾವತಿ ನದಿಗೆ ಕಟ್ಟಲಾಗಿದೆ. ಅರ್ಕಾವತಿ ಜಲಾಶಯವು ಬೆಂಗಳೂರು ನಗರ ಜಿಯ ಕನಕಪುರ ತಾಲ್ಲೂಕಿನಲ್ಲೂ ಹಾಗೂ ಮಂಚನ ಬೆಲೆ, ಗುಂಡ್ಲು ಮುಂತಾದ ಜಲಾಶಯಗಳು ನಿರ್ಮಾಣಗೊಂಡಿದ್ದು ಕಾವೇರಿ ಜಲಾನಯನ ಪ್ರದೇಶದಲ್ಲಿ ಅನೇಕ ಉಪನದಿಗಳಿಗೆ ಈ ರೀತಿ ಅಣೆಕಟ್ಟನ್ನು ನಿರ್ಮಿಸಿ ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಕೃಷ್ಣರಾಜಸಾಗರದ ನಂತರದಲ್ಲಿ ನಿರ್ಮಾಣಗೊಂಡ ಈ ಎಲ್ಲ ಅಣೆಕಟ್ಟುಗಳಿಂದಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಾವರಿ ಮತ್ತು ಅರೆನೀರಾವರಿ ಸೇರಿದಂತೆ ಸುಮಾರು ೧೮ ಲಕ್ಷ ಎಕರೆಗಿಂತಲೂ ಹೆಚ್ಚು ನೀರಾವರಿ ಸೌಕರ್ಯ ಕಲ್ಪಿಸಲಾಗಿದೆ.
ಇತ್ತ ಮಳೆಯ ಕೊರತೆಯಿಂದಾಗಿ ರಾಜ್ಯದ ರೈತರು ತತ್ತರಿಸಿ ಹೋಗಿದ್ದರೆ ತಮಿಳುನಾಡು ಪದೇ ಪದೇ ಕರ್ನಾಟಕದ ಕಾವೇರಿ ಜಲಾಶಯಗಳಿಂದಾಗಿ ನೀರು ಬಿಡುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌ನ ಮೊರೆ ಹೋಗುವುದು ಸಾಮಾನ್ಯವಾಗಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಕರ್ನಾಟಕದ ಜಲಾಶಯಗಳಲ್ಲಿ ಸಂಗ್ರಹವಾಗಿರುವ ಅತ್ಯಲ್ಪ ಪ್ರಮಾಣದ ನೀರನ್ನು ಸುಪ್ರೀಂ ಕೋರ್ಟ್‌ನ ಆದೇಶದಂತೆ ಬಿಡಬೇಕಾದ ಸಂದರ್ಭದಲ್ಲಿ ಕರ್ನಾಟಕದ ರೈತರು ಅತೀವ ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂಬುದು ಸತ್ಯ.

ಲಿಂಗರಾಜ್, ಗಾಡಿಕೊಪ್ಪ,