ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಜು.೯:೧೫೧ ಅಡಿಯ ಶ್ರೀ ಬಾಲಸುಬ್ರಹ್ಮಣ್ಯ ವಿಗ್ರಹದ ಶಿಲಾನ್ಯಾಸ

Share Below Link

ಶಿವಮೊಗ್ಗ: ಪ್ರಪಂಚದ ಲ್ಲಿಯೇ ಅತ್ಯಂತ ಎತ್ತರವಾದ ೧೫೧ ಅಡಿಯ ಶ್ರೀ ಬಾಲಸುಬ್ರಹ್ಮಣ್ಯ ವಿಗ್ರಹದ ಶಿಲಾನ್ಯಾಸ ಕಾರ್‍ಯಕ್ರಮವು ಜು.೯ರ ಬೆಳಿಗ್ಗೆ ೧೦.೩೦ಕ್ಕೆ ನಗರದ ಗುಡ್ಡೇಕಲ್ಲಿನ ದೇವಸ್ಥಾನದ ಆವರ ಣದಲ್ಲಿ ನಡೆಯಲಿದೆ ಎಂದು ಶ್ರೀ ಬಾಲಸುಬ್ರಹ್ಮಣ್ಯ ಟ್ರಸ್ಟ್ ಅಧ್ಯಕ್ಷ ಡಿ.ರಾಜಶೇಖರಪ್ಪ ಹೇಳಿದರು.
ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಗುಡ್ಡೇಕಲ್ಲಿನ ಬಾಲಸುಬ್ರಹ್ಮಣ್ಯ ದೇವಸ್ಥಾನಕ್ಕೆ ತನ್ನದೇ ಆದ ಇತಿ ಹಾಸವಿದೆ. ಇಲ್ಲಿ ನಡೆಯುವ ಜತ್ರೆ ಇಡೀ ನಾಡಿನಲ್ಲಿಯೇ ಹೆಸರಾ ಗಿದೆ. ಪವಿತ್ರ ಕ್ಷೇತ್ರವೂ ಆಗಿದೆ. ಈ ಕ್ಷೇತ್ರವನ್ನುಮತ್ತಷ್ಟು ಅಭಿವೃದ್ಧಿ ಪಡಿಸಬೇಕು. ಪ್ರವಾಸೀ ತಾಣವ ನ್ನಾಗಿ ಮಾಡಬೇಕು ಎಂಬ ಉದ್ದೇ ಶದಿಂದ ಇಲ್ಲಿ ಅತೀ ಎತ್ತರದ ಮತ್ತು ವಿಶೇಷವಾದ ಜಗತ್ತಿನ ಗಮನ ಸೆಳೆಯುವಂತೆ ಮಾಡಲು ಬಾಲ ಸುಬ್ರಹ್ಮಣ್ಯ ಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುವುದು ಎಂದರು.
ಜು.೯ರಂದು ಬೆಳಿಗ್ಗೆ ೧೦-೩೦ಕ್ಕೆ ನಡೆಯಲಿರುವ ಶಿಲಾನ್ಯಾಸ ಕಾರ್‍ಯಕ್ರಮದಲ್ಲಿ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮ ಕ್ಕೂಮುನ್ನ ಅಂದರೆ ಜು.೭ರಂದು ಮಹಾಗಣಪತಿ ಹೋಮ, ಜು.೮ ರಂದು ದೀಪಾರಾಧನೆ, ಯಾಗ ಶಾಲೆ ಪ್ರವೇಶ ಕಾರ್ಯಕ್ರಗಳು ನಡೆಯಲಿವೆ ಎಂದರು.


ಈಗಾಗಲೇ ದೇವಸ್ಥಾನದಲ್ಲಿ ಮೂರು ಸಮುದಾಯಭವನ ಗಳಿದ್ದು, ಅತ್ಯಂತ ಬಡವರಿಗೆ ಕಡಿ ಮೆ ದರದಲ್ಲಿ ಮದುವೆ ಮತ್ತಿತರ ಕಾರ್ಯಗಳಿಗೆ ನೀಡುತ್ತಿದ್ದೇವೆ. ಪ್ರತಿ ಮಂಗಳವಾರ ಷಷ್ಠಿ, ಕೃತಿಕೆ ಮತ್ತು ವಿಶೇಷ ದಿನಗಳಂದು ಅನ್ನದಾಸೋಹ ಇರುತ್ತದೆ. ಈ ಅನ್ನ ದಾಸೋಹವನ್ನು ಪ್ರತಿ ದಿನವೂ ಏರ್ಪಡಿಸಬೇಕು ಎಂಬ ಇಚ್ಛೆ ನಮಗಿದೆ. ಹಾಗೆಯೇ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾ ಖೆಯ ಸಹಕಾರದಲ್ಲಿ ಇಲ್ಲಿ ಮತ್ತಷ್ಟು ಜನೋಪಯೋಗಿ ಕಾರ್ಯಕ್ರಮಗ ಳನ್ನು ನಿರಂತರವಾಗಿ ಏರ್ಪಡಿಸುವ ಉದ್ದೇಶ ಹೊಂದಿದ್ದೇವೆ. ಜೊತೆಗೆ ವೃದ್ಧಾಶ್ರಮ, ಅನಾಥ ಮಕ್ಕಳಿಗೆ ವಸತಿಶಾಲೆ, ವೇದ ಪಾಠಶಾಲೆ ಪ್ರಾ ರಂಭಿಸಲಾಗುವುದು ಎಂದರು.
ಈ ಎ ಕಾರ್ಯಕ್ರಮ ಗಳನ್ನು ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದಲೇ ೧೫೧ ಅಡಿ ಎತ್ತರದ ಬಾಲಸುಬ್ರಹ್ಮಣ್ಯ ವಿಗ್ರ ಹದ ಪ್ರತಿಷ್ಠಾಪನೆಯೂ ಸೇರಿದಂತೆ ಸುಮಾರು ೧೨ ಕೋಟಿ ರೂ. ವೆಚ್ಚ ದಲ್ಲಿಈ ಕ್ಷೇತ್ರವನ್ನು ಅಭಿವೃದ್ಧಿಪಡಿ ಸಲಾಗುವುದು.ಒಂದು ಸುಂದರ ಪ್ರವಾಸೀ ತಾಣವನ್ನಾಗಿ ಮಾಡಲಾ ಗುವುದು ಎಂದ ಅವರು ಈ ವಿಗ್ರಹವನ್ನು ಮಲೇಶಿಯಾದ ಖ್ಯಾತ ಶಿಲ್ಪಿ ಆರ್. ತ್ಯಾಗರಾಜನ್ ನಿರ್ಮಿಸಿಕೊಡುವರು ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ಟ್ರಸ್ಟಿಗೆ ೩ ಎಕರೆ ಜಗ ಕೊಟ್ಟಿzರೆ.ಈ ಜಗದಲ್ಲಿಯೇ ನಾವೀಗ ವಿಗ್ರಹವನ್ನು ಪ್ರತಿಷ್ಠಾ ಪನೆ ಮಾಡುತ್ತಿದ್ದೇವೆ. ಈ ಕಾರ್ಯ ಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಮಾಜಿ ಡಿಸಿಎಂ ಕೆಎಸ್‌ಈ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್ ಚನ್ನಬಸಪ್ಪ, ಶಾರದಾ ಎಸ್. ಪೂರ್‍ಯಾ ನಾಯ್ಕ, ಬಿ.ಕೆ.ಸಂಗ ಮೇಶ್, ಎಸ್. ರುದ್ರೇಗೌಡ, ಡಿ. ಎಸ್ ಅರುಣ್ ಮುಂತಾದ ವರು ಭಾಗವಹಿಸಲಿzರೆ ಎಂದರು.
ಇವರೊಂದಿಗೆ ಮೇಯರ್ ಶಿವಕುಮಾರ್, ಯಮುನಾ ರಂಗೇಗೌಡ, ಎಂ. ಶ್ರೀಕಾಂತ್, ಮೋಹನ್ ರೆಡ್ಡಿ,ಎನ್. ರಮೇಶ್, ಸಿ.ಎಸ್ ಷಡಾಕ್ಷರಿ, ಜಿಧಿಕಾರಿ ಆರ್. ಸೆಲ್ವಮಣಿ, ಜಿ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಮುಂತಾದವರು ಆಗಮಿಸಲಿzರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿನ ಪದಾಧಿಕಾರಿಗಳಾದ ಎಂ.ಪಿ. ಸಂಪತ್, ಟಿ.ರಘುಕುಮಾರ್, ಎಂ.ಪಿ.ಗಣೇಶ್, ಪಿ. ಸುಬ್ರಮಣಿ, ಎಂ. ಸುಬ್ರಮಣಿ, ಎ. ವಿಜಯನ್, ಕೆ. ಸುಬ್ರಮಣಿ, ಲೋಕೇಶ್ ಮುಂತಾದವರಿದ್ದರು.