ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಹೊಳಲೂರು- ಬೂದಿಗೆರೆ ಕೆರೆಗೆ ನೀರು ತುಂಬಿಸುವ ಯೋಜನೆ: ಇಂಜಿನಿಯರ್ ಅಮಾನತ್‌ಗೆ ಜೆಡಿಎಸ್‌ನ ಕಾಂತರಾಜ್ ಆಗ್ರಹ

Share Below Link

ಶಿವಮೊಗ್ಗ: ತಾಲೂಕಿನ ಹೊಳ ಲೂರು-ಬೂದಿಗೆರೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದರೂ ಸಹ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಅಶೋಕ್ ನಾಯ್ಕ ಸದರೀ ಕಾಮಗಾರಿಯ ಸ್ಥಳ ಪರಿಶೀಲನೆ ಮತ್ತು ಪರೀಕ್ಷಾರ್ಥ ಚಾಲನೆ ನೀಡಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಗಳಿಗೆ ಒತ್ತಡ ತಂದು ಸ್ಥಳ ಭೇಟಿ ಮಾಡಲು ಯೋಜನೆ ರೂಪಿಸುತ್ತಿದ್ದಾರೆ ಎಂದು ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಾಧ್ಯಕ್ಷ ಪಿ.ಆರ್. ಕಾಂತರಾಜ್ ಸುದ್ದಿಗೋಷ್ಟಿಯಲ್ಲಿ ಗಂಭೀರ ಆರೋಪ ಮಾಡಿದರು.
ಈ ಯೋಜನೆಗೆ ಚಾಲನೆ ನೀಡಲು ಶಿವಮೊಗ್ಗದ ಸಣ್ಣ ನೀರಾ ವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ಕಾರ್ಯಪಾಲಕ ಇಂಜಿನಿ ಯರ್ ಅವರು ಶಾಸಕರಿಗೆ ಅನು ಕೂಲ ಮಾಡಿಕೊಡಲು ಚುನಾ ವಣಾ ನೀತಿಸಂಹಿತೆ ಜರಿ ಯಲ್ಲಿದ್ದರೂ ಸಹ ಯತ್ನಿಸುತ್ತಿದ್ದಾರೆ ಎಂದು ದೂರಿದರು.


ಚುನಾವಣಾ ನೀತಿಸಂಹಿತೆ ಜರಿ ಯಲ್ಲಿದ್ದರೂ ಸಹ ಕಾರ್ಯ ಪಾಲಕ ಇಂಜಿನಿಯರ್ ಅವರು ಸದರಿ ಕಾಮಗಾರಿಯು ಪ್ರಗತಿಯ ಲ್ಲಿದ್ದು, ಇನ್ನೂ ಪೂರ್ಣಗೊಳ್ಳದ ಕಾರಣ ಮತ್ತು ಯಾವುದೇ ಪರೀ ಕ್ಷಾರ್ಥ ಚಾಲನೆ ಮಾಡಿ ಕೆರೆಗೆ ನೀರು ಹರಿಸಿರುವುದಿಲ್ಲ. ಆದ್ದ ರಿಂದ ಸದರೀ ಕಾಮಗಾರಿಯನ್ನು ಕೈ ಬಿಡುವಂತೆ ಜಿಪಂ ಸಿಇಒ ಅವರಿಗೆ ಕೋರಿದ್ದರು.
ಆದರೂ ಸಹ ಶಾಸಕರ ಒತ್ತಡ ದಿಂದ ಯಾವ ರಾಜಕಾರಣಿಗಳೂ ಸ್ಥಳಕ್ಕೆ ಹೋಗಲು ಅನುಮತಿ ಇಲ್ಲ ದಿದ್ದರೂ ಸಹ ಸ್ಥಳ ಪರಿಶೀಲನೆಗೆ ಮತ್ತು ಪರೀಕ್ಷಾರ್ಥ ಚಾಲನೆಗೆ ನೀರಾವರಿ ಅಧಿಕಾರಿಗಳು ಪ್ರಯತ್ನಿ ಸುತ್ತಿದ್ದಾರೆ. ಈ ಕುರಿತಂತೆ ಅವರು ಹಿರಿಯ ಅಧಿಕಾರಿಗಳಿಗೆ ಮತ್ತು ಚುನಾವಣಾ ಅಧಿಕಾರಿಗಳಿಗೂ ಕೂಡ ಪತ್ರ ಬರೆದು ಒಪ್ಪಿಗೆ ಪಡೆಯಲು ಹವಣಿಸುತ್ತಿದ್ದಾರೆ. ಇದು ನೀತಿಸಂಹಿತೆಗೆ ವಿರೋಧ ವಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಇದಕ್ಕೆ ಅನುಮತಿ ನೀಡಬಾರದೆಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ನಾವು ಮನವಿ ಮಾಡಿದ್ದೇವೆ ಎಂದರು.
ನೀತಿ ಸಂಹಿತೆ ಜರಿಯ ಲ್ಲಿದ್ದರೂ ಕೂಡ ಒಂದು ಪಕ್ಷದ ಹಿತಕ್ಕಾಗಿ ಅನುಕೂಲ ಮಾಡಿಕೊ ಡಲು ಹೊರ ಟಿರುವ ಕಾರ್ಯ ಪಾಲಕ ಇಂಜಿನಿಯರ್‌ರನ್ನು ಅಮಾನತಿನಲ್ಲಿ ಡಬೇಕು ಹಾಗೂ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಒಳಪಡಿಸಬೇಕು ಇಲ್ಲದಿದ್ದರೆ ಜೆಡಿಎಸ್‌ನಿಂದ ಉಗ್ರ ಹೋ ರಾಟವನ್ನು ಹಮ್ಮಿಕೊಳ್ಳಲಾಗು ವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮು ಖರಾದ ಬೂದಿಗೆರೆ ಬಸವರಾಜ್, ಎಂ.ಆರ್. ನರಸಿಂಹಮೂರ್ತಿ, ರಮೇಶ್, ಶಿವಣ್ಣ ಗೌಡ, ರವಿ, ಪ್ರಸನ್ನಗೌಡ ಇನ್ನಿತರರು ಇದ್ದರು.