ಜಿಲ್ಲಾ ಸುದ್ದಿತಾಜಾ ಸುದ್ದಿ

ಜನರ ನಂಬಿಕೆಗೆ ಪಾತ್ರವಾಗಿ ಸಂಸ್ಥೆ ಮುನ್ನಡೆಸುವುದು ಮುಖ್ಯ…

Share Below Link

ಶಿವಮೊಗ್ಗ : ಜನರ ನಂಬಿಕೆಗೆ ಪಾತ್ರವಾಗಿ ಸಂಸ್ಥೆ ಯನ್ನು ಮುನ್ನಡೆಸುವುದು ಅತ್ಯಂತ ಮುಖ್ಯ ಎಂದು ಜಿ ವಾಣಿಜ್ಯ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.

ಸಹ್ಯಾದ್ರಿ ಚಿಟ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಹ್ಯಾದ್ರಿ ಚಿಟ್ಸ್ ಸಂಸ್ಥೆಯು ೨೬ ವರ್ಷಗಳಿಂದ ಜನರ ನಂಬಿಕೆಗೆ ಪಾತ್ರವಾಗಿ, ಮಾಸಿಕ ೫.೫೦ ಕೋಟಿ ರೂ. ಗಿಂತ ಹೆಚ್ಚು. ವಹಿವಾಟು ನಡೆಸುತ್ತಿರುವುದು ಶ್ಲಾಘನೀಯ ಸಂಗತಿ ಎಂದು ತಿಳಿಸಿದರು.
ಸಹ್ಯಾದ್ರಿ ಚಿಟ್ಸ್ ಸಂಸ್ಥೆಯ ಚೇರ್ಮನ್ ಬದ್ರಿನಾಥ್ ಮಾತ ನಾಡಿ, ೨೫ ವರ್ಷದ ಉದ್ಯಮದ ಅನುಭವ ಹೊಂದಿರುವ ಗೋಪಿನಾಥ್ ಅವರು ಅತ್ಯುತ್ತಮ ಆಡಳಿತಗಾರರು. ೧೮ ವರ್ಷಗಳಿಂದ ಚೇಂಬರ್ ಆಫ್ ಕಾಮರ್ಸ್ ಸದಸ್ಯ ಸ್ಥಾನದಿಂದ ಎಲ್ಲ ರೀತಿ ಜವಾಬ್ದಾರಿಯನ್ನು ನಿಭಾಯಿಸುತ್ತಾ ಬಂದಿದ್ದು, ಈಗ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ನಿಜಕ್ಕೂ ಅವರ ಸೇವೆಗೆ ಸಂದ ಪ್ರತಿಫಲ. ಶಿವಮೊಗ್ಗ ಹಬ್ಬ ಮತ್ತು ಈ-ವೇಸ್ಟ್ ಮ್ಯಾನೇಜ್‌ಮೆಂಟ್ ಗುರಿ ತಲುಪಬೇಕು ಎಂದರು.
ಸನ್ಮಾನ ಸ್ವೀಕರಿಸಿದ ಜಿ. ವಿಜಯಕುಮಾರ್ ಮಾತನಾಡಿ, ಶಿವಮೊಗ್ಗ ನಗರದ ಹತ್ತಾರು ಸಂಘ ಸಂಸ್ಥೆಗಳಲ್ಲಿ ನಾನು ತೊಡಗಿಸಿ ಕೊಂಡಿದ್ದು, ನನಗೆ ಅತ್ಯುತ್ತಮ ಎನಿಸಿದ ಸಂಸ್ಥೆ ಎಂದರೆ ಅದು ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘ. ಏಕೆಂದರೆ, ಇದು ಎಲ್ಲ ಸಂಘಗಳಿಗೂ ಮಾತೃ ಸಂಸ್ಥೆ ಯಾಗಿದ್ದು, ಉದ್ಯಮಿಗಳು ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತದೆ. ಇದರಿಂದ ನಮಗೆ ಕೆಲಸ ಮಾಡಲು ಸ್ಪೂರ್ತಿ ಸಿಗುವುದರ ಜತೆಗೆ ಮುಂದಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು. ಪ್ರಮುಖರಾದ ರಮೇಶ್ ಭಟ್ ಶಿವರಾಜ್ ಉಡುಗಣಿ ಇನ್ನಿತರರಿದ್ದರು.

Leave a Reply

Your email address will not be published. Required fields are marked *