ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಯಾವ ಪ್ರಾಣಿಯೂ ತಿನ್ನದಂತಹ ವಸ್ತು ತಂಬಾಕನ್ನು ಮನುಷ್ಯರಾದ ನಾವು ಸೇವಿಸುವುದು ಸೂಕ್ತವೇ…

Share Below Link

ಶಿವಮೊಗ್ಗ: ಯಾವ ಪ್ರಾಣಿ ಯೂ ತಿನ್ನದಂತಹ ವಸ್ತು ತಂಬಾ ಕು. ಅಂತಹ ತಂಬಾಕನ್ನು ಮನು ಷ್ಯರು ತಿನ್ನುತ್ತಿದ್ದೇವೆಂದರೆ ನಾವು ಪ್ರಾಣಿಗಳಿಗಿಂತಲೂ ಕೀಳು ಎಂಬು ದನ್ನು ತಿಳಿದುಕೊಳ್ಳಬೇಕಾಗುತ್ತದೆ ಎಂದು ಪ್ರಧಾನ ಜಿ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜು ನ ಗೌಡ ಅಭಿಪ್ರಾಯಪಟ್ಟರು.
ಜಿ ಕಾನೂನು ಸೇವಾ ಪ್ರಾಧಿಕಾರ, ಜಿಡಳಿತ, ಜಿ ಪಂಚಾ ಯಿತಿ, ಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುಬ್ಬಯ್ಯ ವೈದ್ಯಕೀಯ ಮತ್ತು ದಂತ ವೈದ್ಯಕೀಯ ನಸಿರ್ಂಗ್ ಕಾಲೇಜು, ಶರಾವತಿ ದಂತ ವೈದ್ಯಕೀಯ ಕಾಲೇಜು, ಜಿ ಮೆಗ್ಗಾನ್ ಬೋಧನಾ ಆಸ್ಪತ್ರೆ, ಕಿ.ಮ.ಆ.ಸ ತರಬೇತಿ ಶಾಲೆ, ಜಿ ವಕೀಲರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ವೈದ್ಯಕೀಯ ಸಂಘ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಇಂದು ಜಿ ನ್ಯಾಯಾ ಲಯದ ಆವರಣದಿಂದ ಆಯೋ ಜಿಸಲಾಗಿದ್ದ ಜಗೃತಿ ಜಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ತಂಬಾಕು ಸೇವನೆಯಿಂದಾ ಗುವ ತೊಂದರೆಯನ್ನು ತಡೆಗಟ್ಟು ವುದು ಹಾಗೂ ಇದರ ದುಷ್ಪರಿ ಣಾಮಗಳ ಕುರಿತು ಜನರಲ್ಲಿ ಜಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಜೂಜು, ಹವ್ಯಾಸಗಳು ಬಹಳ ಕೆಟ್ಟದ್ದು. ನಾವು ಮೋಜಿಗಾಗಿ ಅದ ನ್ನು ತಿನ್ನುತ್ತೇವೆ. ಆದರೆ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮವೇ ಹೆಚ್ಚು. ಅಂದಾದ ಮೇಲೆ ಮನುಷ್ಯನ ಜೀವಕ್ಕೆ ಹಾನಿ ಉಂಟು ಮಾಡುವ ತಂಬಾಕು ಸೇವನೆಯನ್ನು ಪ್ರತಿಯೊ ಬ್ಬರು ತ್ಯಜಿಸಬೇಕೆಂದು ಹೇಳಿದರು.
ಜಿಧಿಕಾರಿಗಳಾದ ಡಾ. ಸೆಲ್ವಮಣಿ.ಆರ್ ಮಾತನಾಡಿ, ತಂಬಾಕು ಮುಕ್ತ ಶಿವಮೊಗ್ಗ ಮಾಡಬೇಕು ಎಂಬ ನಿಟ್ಟಿನಲ್ಲಿ ಈ ಜಥಾ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದೇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾಧ್ಯಮಗಳಲ್ಲಿ ಜಹೀರಾತುಗಳ ಮುಖಾಂತರ ಜನರಲ್ಲಿ ಜಗೃತಿ ಮೂಡಿಸುತ್ತಿದೆ. ಆದರೂ ಕೂಡ ನಮ್ಮ ಸಮುದಾ ಯದಲ್ಲಿ ತಂಬಾಕು ಉಪಯೋಗ ಕಡಿಮೆ ಆಗಿಲ್ಲ. ತಂಬಾಕು ಸೇವನೆ ಕೇವಲ ಹಾನಿಕಾರಕ ಮಾತ್ರ, ಅದ ರಿಂದ ಯಾವುದೇ ಉಪಯೋಗ ವಿಲ್ಲ. ಹಾಗಾಗಿ ಈ ತಂಬಾಕು ಸೇವನೆ ಮತ್ತು ತಂಬಾಕು ಉಪ ಯೋಗದಿಂದ ಹೊರ ಬರಬೇಕು ಎಂದು ಹೇಳಿದರು.
ಜಿ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿ, ಜಿಯಾದ್ಯಂತ ಪ್ರತಿ ಪೊಲೀಸ್ ಠಾಣೆಯಲ್ಲಿ ೧೦೦ ಕ್ಕೂ ಹೆಚ್ಚು ಕೋಟ್ಪಾ ಕೇಸ್‌ಗಳನ್ನು ಮಾಡಬೇಕು ಎಂದು ಈಗಾಗಲೇ ಆದೇಶ ಮಾಡಲಾಗಿದೆ. ಪಿಯುಸಿ ಮತ್ತು ಕಾಲೇಜ್ ಮಕ್ಕಳು ತಂಬಾ ಕಿನಿಂದ ದೂರ ಇರಬೇಕು. ಶಾಲಾ- ಕಾಲೇಜ್‌ಗಳ ಸುತ್ತಮುತ್ತ ಇರುವ ಪಾನ್ ಶಾಪ್, ಬೀಡಾ ಅಂಗಡಿ, ಟೀ ಅಂಗಡಿ ಇಂತಹ ಕಡೆ ಗಮನ ನೀಡಿ ಕೋಟ್ಪಾ ಕೇಸ್‌ಗಳನ್ನು ಹೆಚ್ಚು ದಾಖಲಿಸಬೇಕು ಎಂದು ತಿಳಿಸಿ ದರು.


ಜಿ ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ ಮಾತ ನಾಡಿ, ತಂಬಾಕು ಉತ್ಪನ್ನದ ಮೇಲೆ ಹಾನಿಕಾರಕ ಎಂದು ಬರೆದಿದ್ದರೂ ಸಹ ಸಾರ್ವಜನಿಕರು ಮತ್ತು ವಿದ್ಯಾ ರ್ಥಿಗಳು ಅದನ್ನು ಬೇರೆ ಬೇರೆ ವಿಧಗಳಲ್ಲಿ ಉಪಯೋಗಿಸುತ್ತಿರು ವುದು ಒಳ್ಳೆಯದಲ್ಲ. ತಂಬಾಕು ಮುಕ್ತವನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಜಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎನ್ ಚಂದನ್, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ, ನ್ಯಾಯಾ ಧೀಶರುಗಳು, ಜಿ ಶಸ್ತ್ರಚಿಕಿತ್ಸಕ ಡಾ. ಸಿದ್ದನಗೌಡ ಪಾಟೀಲ್, ವೈದ್ಯಕೀಯ ಅಧೀಕ್ಷಕರಾದ ಶ್ರೀಧರ್, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಇತರೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.