ಜಿಲ್ಲಾ ಸುದ್ದಿತಾಜಾ ಸುದ್ದಿ

ಆರ್‌ಟಿ.ಓ ಕಚೇರಿಯಲ್ಲಿ ಮಧ್ಯವರ್ತಿಗಳಿಗೆ ಹಾವಳಿ ವಿರುದ್ಧ ಐಎನ್‌ಟಿಯುಸಿ ಪ್ರತಿಭಟನೆ…

Share Below Link

ಶಿವಮೊಗ್ಗ: ಆರ್‌ಟಿ.ಓ ಕಚೇರಿ ಯಲ್ಲಿ ಮಧ್ಯವರ್ತಿಗಳಿಗೆ ಕಡಿ ವಾಣ ಹಾಕಬೇಕು ಎಂದು ಆಗ್ರ ಹಿಸಿ ಐಎನ್‌ಟಿಯುಸಿ ವಿದ್ಯಾರ್ಥಿ ಘಟಕ ಇಂದು ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಎದುರು ಪ್ರತಿ ಭಟನೆ ನಡೆಸಿ ಮನವಿ ಸಲ್ಲಿಸಿತು.
ಶಿವಮೊಗ್ಗದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮಧ್ಯ ವರ್ತಿಗಳ ಹಾವಳಿ ಮಿತಿ ಮೀರಿದೆ. ಅಧಿಕಾರಿಗಳು ನೌಕರರು ನಿಯಮ ಗಳನ್ನು ಗಾಳಿಗೆ ತೂರುತ್ತಿzರೆ. ಚಾಲನಾ ಪರವಾನಗಿ, ಆರ್‌ಸಿ, ಸ್ಮಾರ್ಟ್ ಕಾರ್ಡ್ ಮುಂತಾದ ದಾಖಲೆಗಳನ್ನು ಅಂಚೆ ಮೂಲಕ ರವಾನೆ ಮಾಡಬೇಕೆಂಬ ಆದೇಶ ಇದ್ದರೂ ಕೂಡ ಇದನ್ನು ಪಾಲನೆ ಮಾಡದೆ, ಸಕಾಲ ಯೋಜನೆ ಯನ್ನೂ ಕೂಡ ಸಮರ್ಪಕವಾಗಿ ಜರಿ ಮಾಡದೆ ಮಧ್ಯವರ್ತಿಗಳು ಹೇಳಿದಂತೆ ಕೇಳುತ್ತಿzರೆ. ವಿದ್ಯಾ ರ್ಥಿಗಳು ಸೇರಿದಂತೆ ಸಾರ್ವಜ ನಿಕರು ನೇರವಾಗಿ ಕಚೇರಿಗೆ ತೆರಳಿ ದಾಖಲೆಯನ್ನು ಪಡೆಯುವುದು ಸಾಧ್ಯವೇ ಇಲ್ಲ ಎಂದು ದೂರಿ ದರು.
ಕಚೇರಿ ಆವರಣದಲ್ಲಿಯೇ ಈ ಮಧ್ಯವರ್ತಿಗಳು ತಿರುಗಾಡುತ್ತಿ ರುತ್ತಾರೆ. ಇವರನ್ನು ನಿಯಂತ್ರಿ ಸುವುದು ಸಾಧ್ಯವಿಲ್ಲ. ಈ ಹಿಂದೆ ಕಾಲೇಜುಗಳಿಗೆ ತೆರಳಿ ಕ್ಯಾಂಪ್ ನಡೆಸಿ ವಿದ್ಯಾರ್ಥಿಗಳಿಗೆ ಚಾಲನಾ ಪರವಾನಿಗಿಯನ್ನು ನೀಡಲಾಗು ತ್ತಿತ್ತು. ಆದರೆ ಈಗ ಅದನ್ನು ಸ್ಥಗಿತಗೊಳಿಸಲಾಗಿದೆ. ಅದನ್ನು ಪುನಃ ಆರಂಭಿಸಬೇಕು. ಭ್ರಷ್ಟ ಅಧಿಕಾರಿಗಳನ್ನು ಅಮಾನತುಗೊಳಿ ಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಐಎನ್ ಟಿಯುಸಿ ಜಿಧ್ಯಕ್ಷ ವಿನಯ್ ಕುಮಾರ್, ಪ್ರಮುಖರಾದ ಮಧುಕುಮಾರ್, ಸ್ವರೂಪ್ ಹೇಮಂತಕುಮಾರ್, ಸಂದೀಪ್, ವಿಜಯ್, ನಿಹಾಲ್, ಸಂದೇಶ್ ಸೇರಿದಂತೆ ಹಲವರಿದ್ದರು.