ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಅಂತರಾಷ್ಟ್ರೀಯ ಯೋಗ ದಿನಾಚರಣೆ : ಸಕಲ ಸಿದ್ದತೆಗೆ ಸಿಇಓ ಸೂಚನೆ

Share Below Link

ಶಿವಮೊಗ್ಗ:ಜೂ.೨೧ ರಂದು ಜಿ ಮಟ್ಟದಲ್ಲಿ ಮತ್ತು ಆಯು ಷ್ ಇಲಾಖೆ ವತಿಯಿಂದ ನಡೆ ಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಅಧಿಕಾರಿಗಳಿಗೆ ತಿಳಿಸಿದರು.
ಇಂದು ಜಿಡಳಿತ ಕಚೇರಿ ಸಭಾಂಗಣದಲ್ಲಿ ೯ನೇ ಅಂತರಾ ಷ್ಟ್ರೀಯ ಯೋಗ ದಿನಾಚರಣೆ ಕುರಿತು ಚರ್ಚಿಸಲು ಆಯೋಜಿಸ ಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರ್ಕಾರದ ಮಾರ್ಗಸೂಚಿ ಯನ್ವಯ ಕಾರ್ಯಕ್ರಮದ ಸ್ಥಳ ವನ್ನು ನಿಗದಿಪಡಿಸಿ, ಯೋಗ ದಿನಕ್ಕೆ ಅಗತ್ಯವಾದ ಎಲ್ಲ ರೀತಿಯ ಮೂಲಸೌಕರ್ಯಗಳ ವ್ಯವಸ್ಥೆ ಯನ್ನು ಮಾಡಿಕೊಂಡು ನಿರ್ವಹಿ ಸುವಂತೆ ಅವರು ಸೂಚನೆ ನೀಡಿ ದರು.
ಜಿ ಆಯುಷ್ ಅಧಿಕಾರಿ ಡಾ.ಎ.ಎಸ್ ಪುಷ್ಪ ಮಾತನಾಡಿ, ಆಯುಷ್ ಇಲಾಖೆ ವತಿಯಿಂದ ಕೆಎಸ್‌ಆರ್‍ಪಿ, ಮಾಚೇನಹಳ್ಳಿ ಇಲ್ಲಿ ಸರ್ಕಾರದ ಮಾರ್ಗಸೂಚಿಯ ನ್ವಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಜೂನ್ ೧೯ ರಂದು ಬೆಳಿಗ್ಗೆ ೧೦ ಗಂಟೆಗೆ ಆಯುರ್ವೇದ ಕಾಲೇಜು ಮತ್ತು ಬೋಧನಾ ಆಸ್ಪತ್ರೆ ಅಧಿಕಾರಿ, ವೈದ್ಯರು ಸಿಬ್ಬಂದಿ, ವಿದ್ಯಾರ್ಥಿ ಗಳು, ಯೋಗಸಂಸ್ಥೆಗಳು ಸೇರಿ ಸರ್ಕಾರಿ ಆಯುರ್ವೇದ ವೈದ್ಯ ಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತೆ ಶಿವಮೊಗ್ಗ, ಸಾಗರ ರಸ್ತೆ ಇಲ್ಲಿಂದ ಅಶೋಕ ವೃತ್ತದವರೆಗೆ ಯೋಗ ಜಥಾ ನಡೆಸಲಾಗುವುದು.
ಯೋಗ ದಿನಾಚರಣೆ ಪ್ರಯು ಕ್ತ ಈಗಾಗಲೇ ಶಾಲಾ-ಕಾಲೇಜು, ಚಿಕಿತ್ಸಾಲಯಗಳು, ಅಂಗನವಾಡಿ ಗಳಲ್ಲಿ ಕಾಮನ್ ಯೋಗ ಪ್ರೊಟೊ ಕಾಲ್ ಪ್ರಕಾರ ಯೋಗಾಭ್ಯಾಸ ಮಾಡಿಸಲಾಗುತ್ತಿದೆ. ಹಾಗೂ ಸರ್ಕಾರಿ ಕಚೇರಿಗಳಲ್ಲಿ ವೈ-ಬ್ರೇಕ್ ಅಟ್ ವರ್ಕ್‌ಪ್ಲೇಸ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಯೋಗ ದಿನಾಚರಣೆಯಂದು ಬೆಳಿಗ್ಗೆ ೬.೩೦ ಕ್ಕೆ ಎಲ್ಲರೂ ಒಂದೆಡೆ ಸೇರಲಾಗುವುದು. ಬೆಳಿಗ್ಗೆ ೬.೪೫ ರಿಂದ ೭ ಗಂಟೆವರೆಗೆ ಯೋಗ ಗೀತೆ, ಬೆಳಿಗ್ಗೆ ೭ ರಿಂದ ೭.೪೫ ರವರೆ ಗೆ ಭಾರತ ಸರ್ಕಾರದ ಮಾರ್ಗಸೂ ಚಿಯನ್ವಯ ಯೋಗ ಪ್ರದರ್ಶನ, ೮ ರಿಂದ ೮.೩೦ ರವರೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ವಿವರ ನೀಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೆ ಶಕ ಮಂಜುನಾಥಸ್ವಾಮಿ ಮಾತ ನಾಡಿ, ಜಿ ಮಟ್ಟದ ಯೋಗ ದಿನಾಚರಣೆಯನ್ನು ನೆಹರು ಕ್ರೀಡಾಂಗಣದಲ್ಲಿ ಸರ್ಕಾರದ ಮಾರ್ಗಸೂಚಿಯನ್ವಯ ಆಚರಿಸ ಲಾಗುವುದು. ಸಾರ್ವಜನಿಕರು, ಯೋಗಾಸಕ್ತರು, ಎನ್‌ಎಸ್‌ಎಸ್ ವಿದ್ಯಾರ್ಥಿಗಳನ್ನೊಳಗೊಂಡಂತೆ ಯೋಗಾಭ್ಯಾಸವನ್ನು ನಡೆಸಲಾಗು ವುದು ಎಂದು ತಿಳಿಸಿದರು.
ಪತಂಜಲಿ ಯೋಗ ಕೇಂದ್ರದ ವರು ತಾವು ತಾಲ್ಲೂಕುಗಳಲ್ಲಿ ಹಾಗೂ ನಗರದ ಹಲವೆಡೆ ಯೋಗ ತರಬೇತಿಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಸಿಇಓ ಮಾತನಾಡಿ, ಪಾರ್ಕ್ ಗಳು ಮತ್ತು ವಾಯುವಿಹಾರ ಮಾಡುವೆಡೆ ಜನರಿಗೆ ಯೋಗ ತರಬೇತಿ ನೀಡುವಂತೆ ಹಾಗೂ ಸಿಮ್ಸ್ ಕಾಲೇಜಿನಲ್ಲಿ ಮತ್ತು ಹೆಚ್ಚು ಜನ ಕೆಲಸ ಮಾಡುವೆಡೆ ಯೋಗ ವೈ-ಬ್ರೇಕ್ ಕಾರ್ಯಕ್ರಮ ಮಾಡು ವಂತೆ ತಿಳಿಸಿದರು.
ಹಾಗೂ ಕಾರ್ಯಕ್ರಮಕ್ಕೆ ಅಗತ್ಯವಾದ ಸೂಕ್ತ ಸ್ಥಳ, ಶುದ್ದ ಕುಡಿ ಯುವ ನೀರು ಇತರೆ ಮೂಲ ಭೂತ ವ್ಯವಸ್ಥೆಗಳನ್ನು ಈಗಿನಿಂ ದಲೇ ಸಿದ್ದಪಡಿಸಿಕೊಂಡು ಕಾರ್ಯ ಕ್ರಮವನ್ನು ಯಶಸ್ವಿಯಾಗಿ ನಡೆಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಯೋಗ ಮತ್ತು ಆರೋಗ್ಯ ಕೈಪಿಡಿ ಪೋಸ್ಟರ್‍ನ್ನು ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಡಿಡಿಪಿಯು ಕೃಷ್ಣ ಪ್ಪ, ಮೆಗ್ಗಾನ್ ಜಿ ಬೋಧನಾ ಆಸ್ಪತ್ರೆ ಸರ್ಜನ್ ಡಾ.ಸಿದ್ದನಗೌಡ ಪಾಟಿಲ್, ಡಾ.ನಾಗರಾಜ್ ನಾಯ್ಕ್, ನೆಹರು ಯುವ ಕೇಂದ್ರದ ಅಧಿಕಾರಿ ಉಸ್, ಕೆಎಸ್‌ಆರ್‍ಪಿ ಕಮಾಂಡೆಂಟ್, ಎನ್‌ಎಸ್‌ಎಸ್ ಅಧಿಕಾರಿ ಡಾ.ನಾಗರಾಜ್ ಪರಿಸರ, ಜಿ ಮಟ್ಟದ ಅಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಚಾರ್ಯರು, ವಿವಿಧ ಯೋಗ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.