ಇತರೆಜಿಲ್ಲಾ ಸುದ್ದಿತಾಜಾ ಸುದ್ದಿದೇಶಶಿಕ್ಷಣ

ಸಂವಿಧಾನದ ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ…

Share Below Link

ಶಿವಮೊಗ್ಗ: ಸಂವಿಧಾನದ ರಕ್ಷಣೆಯನ್ನು ನಾವೆಲ್ಲರೂ ಮಾಡಿ ದರೆ ಮಾತ್ರ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎಂದು ದಲಿತ ಸಂಘ ರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಹೇಳಿzರೆ.
ಅವರು ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿ ಸಮಿತಿ ಶಿವಮೊಗ್ಗ ವತಿ ಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನದ ರಕ್ಷಣೆಗಾಗಿ, ಸಂವಿಧಾನದ ಉಳಿವಿ ಗಾಗಿ ಜಿ ಮಟ್ಟದ ಜಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.


೨೦೦೮ರಲ್ಲಿ ೩೦ ಜಿಗಳಲ್ಲಿ ಇದೇ ರೀತಿ ಸಂವಿಧಾನ ಸಂಕಲ್ಪ ಸಮಾವೇಶ ಮಾಡಿzವು ಎ ತಾಲ್ಲೂಕು ಕೇಂದ್ರಗಳಲ್ಲಿ ಸರ್ವ ಜನರ ಸಂವಿಧಾನ ಕಾರ್ಯಕ್ರಮ ವನ್ನು ಮಾಡಿzವು. ತಳಸಮು ದಾಯಗಳಲ್ಲಿ, ಶೋಷಿತ ಸಮು ದಾಯಗಳಲ್ಲಿ ನಿರಂತರ ಜಗೃತಿ ಯನ್ನು ಮೂಡಿಸುವ ಉದ್ದೇಶ ದಿಂದ ಈ ಸಮಾವೇಶ ಮಾಡಲಾ ಗುತ್ತಿದೆ. ಶಿವಮೊಗ್ಗ ಹಿಂದಿನಿಂ ದಲೂ ಎ ಹೋರಾಟಗಳ ಕೇಂದ್ರ ಬಿಂದುವಾಗಿದೆ. ಪ್ರೊ. ಕೃಷ್ಣಪ್ಪನವರು ಚಂದ್ರಗುತ್ತಿಯ ಬೆತ್ತಲೆ ಸೇವೆಯಂತಹ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಅಂದು ಹೋರಾಟ ಮಾಡಿದ್ದರು. ಧರ್ಮೋರಕ್ಷತಿ ರಕ್ಷಿತಃ ಎಂದ ಆಗೆ ಈಗ ಸಂವಿಧಾನ ರಕ್ಷತಿ ರಕ್ಷಿತಃ ಎನ್ನಬೇಕು. ಒಳ್ಳೆಯತನ ಇದ್ದರೆ ಧರ್ಮ ತನ್ನಿಂದತಾನೇ ರಕ್ಷಣೆಗೆ ಒಳಗಾಗುತ್ತದೆ ಎಂದರು. ೫ ಜನ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಸಂವಿಧಾನ ಗಂಡಾಂತರಲ್ಲಿ ಇದೆ ಎಂದಿದ್ದರು, ಆಗ ನಾವ್ಯಾರು ಅದನ್ನು ಗಂಭೀರ ವಾಗಿ ಗ್ರಹಿಸಲಿಲ್ಲ. ವಿದ್ಯಾವಂತರು ಸರಿಯಾಗಿ ಯೋಚನೆ ಮಾಡಿದ್ದರೆ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ. ತಳ ಸಮುದಾಯಗಳ ಅರಿವಿನ ಕೊರತೆ ಯನ್ನು ಸ್ವಾರ್ಥಕ್ಕಾಗಿ ದುರಪ ಯೋಗಪಡಿಸುತ್ತಾ ಬಂದಿzರೆ. ಈಗಿನ ಕೇಂದ್ರ ಸರ್ಕಾರ ಸ್ವಾರ್ಥ ಕ್ಕಾಗಿ ಸಂವಿಧಾನದ ರೆಕ್ಕೆಯನ್ನು ಕತ್ತರಿಸುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಕೋಮುಜಲೆ ಹಚ್ಚಿ ಆ ಮೂಲಕ ಸಮಾಜವನ್ನು ಆಶಾಂತಿ ಕಡೆಹೊಯ್ಯುವ ಹುನ್ನಾರ ನಡೆ ಯುತ್ತಿದೆ. ಸಂವಿಧಾನದ ಆಶಯ ವನ್ನು ಅನುಷ್ಠಾನಗೊಳಿಸುವ ಜಗದಲ್ಲಿ ದೂರ್ತರು ವಂಚಕರು ಸೇರಿzರೆ. ಸಂವಿಧಾನದ ಬದಲಾ ವಣೆಯ ಮಾತುಗಳನ್ನಾಡುತ್ತಿ zರೆ.ಜಂತರ್‌ಮಂತರ್ ಮುಂ ಭಾಗ ಸಂವಿಧಾನದ ಪ್ರತಿಗಳನ್ನು ಸುಡುವ ಕಾರ್ಯವು ನಡೆಯಿತು. ಇದು ತಮಾಷೆಯ ಮಾತಲ್ಲ. ಅಮೇರಿಕ ಪ್ರಧಾನಿ ಬರಕ್ ಒಬಮಾ ಭಾರತಕ್ಕೆ ಬಂದಾಗ ಭಾರತ ವಿಶ್ವದಲ್ಲಿ ಇಷ್ಟೊಂದು ಗೌರವ ಪಡೆಯಲು ಭಾರತದ ಸಂವಿಧಾನವೇ ಕಾರಣ ಎಂದಿದ್ದರು. ಅದನ್ನು ರಚಿಸಿದ ಅಂಬೇಡ್ಕರ್‌ಗೆ ನಾವೆಲ್ಲರು ಋಣಿಯಾಗಬೇಕು ಎಂದು ಸಂವಿಧಾನದ ಸಮಿತಿಯಲ್ಲಿ ಓರ್ವರಾದ ಪಿ.ಟಿ. ಕೃಷ್ಣಾಮ ಚಾರ್‌ರವರು ಕೂಡ ಅಂಬೇಡ್ಕರ್ ರವರನ್ನು ಹೊಗಳಿದ್ದರು.
ಆದರೆ, ದೇಶದ ಪ್ರಧಾನಿಗೆ ಸಂವಿಧಾನದ ಮೇಲೆ ಗೌರವವಿಲ್ಲ. ಮೇಲ್ವರ್ಗದ ಕೆಲವು ಶಕ್ತಿಗಳು ಅವರನ್ನು ನಿಯಂತ್ರಿಸುವ ಕಾರ್ಯ ಮಾಡುತ್ತಿದೆ. ಆಗಾಗಿ ಸಂವಿ ಧಾನದ ಬಗ್ಗೆ ಜಗೃತಿ ಮೂಡಿಸು ವುದು ಅನಿವಾರ್ಯ ಎಂದರು.


ಪ್ರಾಸ್ತಾವಿಕವಾಗಿ ಮಾತನಾ ಡಿದ, ಸಹ್ಯಾದ್ರಿ ಕಲಾ ಕಾಲೇಜಿನ ಪತ್ರಿಕೋದ್ಯಮದ ವಿಭಾಗದ ಮುಖ್ಯಸ್ಥರಾದ ಡಾ. ಮಹಾದೇವ ಸ್ವಾಮಿ ಮಾತನಾಡಿ, ಸಂವಿಧಾನದ ಹಕ್ಕುಗಳನ್ನು ಅರಿಯಲೇಬೇಕು. ಸ್ವಾಭಿಮಾನವನ್ನು ಎಚ್ಚರಿಸುವ ಕೆಲಸವಾಗಬೇಕಾಗಿದೆ. ಕೆಲವೊಂದು ಸಂಪರ್ಕ ಸಾಧನಗಳು ದುರಾಭಿಮಾನವೇ ಸ್ವಾಭಿಮಾನ ಎಂದು ಬಿಂಬಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ನಮ್ಮೆಲ್ಲರ ಹೃದಯದಲ್ಲಿ ಸಂವಿಧಾನ ಇರಬೇಕು. ಮನುಷ್ಯತ್ವ ಉಳಿಯಬೇಕು. ಸಂವಿಧಾನ ಧರ್ಮ ಉಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಟಿ.ಹೆಚ್. ಹಾಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ.ಎಂ. ರಾಮಚಂದ್ರಪ್ಪ, ಹೆಚ್. ಆರ್. ಬಸವರಾಜಪ್ಪ, ಎಣ್ಣೇಗೆರೆ ವಂಕಟ ರಾಮಯ್ಯ, ಶಿವಕುಮಾರ್ ಅಸ್ತಿ, ಎಂ.ಡಿ. ಆನಂದ್, ಎಂ. ಮಂಜು ನಾಥ್, ವಿಶ್ವಾನಾಥ್ ಹಾರೋ ಗುಳಿಗೆ, ಜಗ್ಗು ಮತ್ತಿತರರು ಇದ್ದರು.