ವಿಕಸಿತ ಭಾರತ ನಿರ್ಮಾಣಕ್ಕೆ ಮಾನವೀಯ ನೆಲೆಯ ಪತ್ರಿಕೋದ್ಯಮ ಅಗತ್ಯವಿದೆ…
ಶಿವಮೊಗ್ಗ ವಿಕಸಿತ ಭಾರತ ನಿರ್ಮಾಣಕ್ಕೆ ಮಾನವೀಯ ನೆಲೆಯ ಪತ್ರಿಕೋದ್ಯಮ ಅಗತ್ಯವಿದೆ ಎಂದು ಶಿವಮೊಗ್ಗ ಟೆಲೆಕ್ಸ್ ಪತ್ರಿಕೆ ಸಂಪಾದಕ ಎನ್. ರವಿಕುಮಾರ್ ಟೆಲೆಕ್ಸ್ ಅಭಿಪ್ರಾಯಪಟ್ಟರು.
ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಜಗತೀಕರಣ ಸಂದರ್ಭದಲ್ಲಿ ಭಾರತದ ಪತ್ರಿಕೋದ್ಯಮ ಮಾನವೀಯ ವೃತ್ತಿಯಾಗಿದೆಯೇ? ವಿಷಯ ಕುರಿತು ಮಾತನಾಡಿ, ಮಾನವೀಯತೆಯೇ ಪತ್ರಿಕೋದ್ಯ ಮದ ಜೀವಧಾತು ಎಂಬ ಸಹಜ ವೃತ್ತಿಪರ ಸೂತ್ರವಾಗಿರಲೇ ಬೇಕಾಗಿರುವಾಗ ಇಂತಹzಂದು ಪ್ರಶ್ನೆ ನಮ್ಮ ಮುಂದೆ ಇರುವುದು ವಿಪರ್ಯಾಸ. ಮಾನವೀಯ ನೆಲೆಯ ನಡೆಯಬೇಕಾದ ಭಾರತದ ಪತ್ರಿಕೋದ್ಯಮ ತನ್ನ ಸಹಜ, ವೃತ್ತಿಪರ ಹಾದಿಯಿಂದ ಜರುತ್ತಿರು ವುದನ್ನು ಗುರುತಿಸ ಬಹುದು ಎಂದು ವಿಷಾಧಿಸಿದರು.

ಭಾರತದ ಪತ್ರಿಕಾರಂಗಕ್ಕೆ ಮಾನವೀಯತೆಯ ಭದ್ರ ತಳಹದಿ ಯನ್ನು ನಿರೂಪಿಸಿದ ನಾವು ಅಧ್ಯಯನ ಮಾಡಬೇಕಾದ ಮಹಾನ್ ಪತ್ರಕರ್ತರೆಂದರೆ ಡಾ. ಬಾಬಾಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಮತ್ತು ರಾಜರಾಂ ಮೋಹನ್ ರಾಯ್. ಇವರಿಲ್ಲದೆ ಭಾರತದ ಪತ್ರಿಕೋದ್ಯಮವನ್ನು ಉಹಿಸಿ ಕೊಳ್ಳುವುದು ಕಷ್ಟ. ಮನುಷ್ಯನ ಒಳಿತನ್ನು ಬಯಸುವುದೆ ಪತ್ರಿಕಾ ಧರ್ಮವಾಗಿದೆ. ನನ್ನ ಜನರಿಗೆ ಪತ್ರಿಕೆಗಳಿಲ್ಲ ಎಂದು ಕೊರಗಿದ ಅಂಬೇಡ್ಕರ್ ಈ ದೇಶದ ದಮನಿತ ಬಹುಜನರ ಧ್ವನಿಯಾಗಿ, ಅವರ ಬದುಕಿನ ಹಕ್ಕು, ನ್ಯಾಯದ ಹೋರಾಟಕ್ಕೆ, ಜಗೃತಿಗೆ ಬಳಸಿ ಕೊಂಡಿದ್ದು ಪತ್ರಿಕಾ ರಂಗವನ್ನೆ. ಅಮೇರಿಕಾದಲ್ಲಿzಗ ಅಲ್ಲಿನ ಪತ್ರಿಕೆಗಳು ಕಪ್ಪು ಜನರ ಹಿತಾಸಕ್ತಿ ಗಾಗಿ ಕಾರ್ಯನಿರ್ವಹಿಸುತ್ತಿದ್ದನ್ನು ಗಂಭೀರವಾಗಿ ಗಮನಿಸಿದ್ದ ಅಂಬೇಡ್ಕರ್ ಅವರು ಭಾರತಕ್ಕೆ ಬರುತ್ತಿದ್ದಂತೆ ಪತ್ರಕರ್ತರಾಗಿ ಸಾಮಾಜಿಕ ಚಳವಳಿಯನ್ನು ಆರಂಭಿಸಿದರು ಎಂದರು.
ಸ್ವಾತಂತ್ಯ ಕಾಲದ ಪತ್ರಿಕೋದ್ಯಮದ ಸ್ಥಿತಿ ಹೀಗಿದ್ದರೆ. ಸ್ವಾತಂತ್ರ್ಯ ನಂತರದಲ್ಲಿ ಪತ್ರಿಕೋದ್ಯಮ ಪ್ರಜಪ್ರಭುತ್ವವನ್ನು ಕಾಯುವ ಕಾವಲು ನಾಯಿ ಎಂದೇ ಪ್ರಶಂಸನಾತ್ಮಕವಾಗಿ ಕರೆಯ ಲ್ಪಟ್ಟಿತು. ಅನೇಕ ರಾಷ್ಟ್ರೀಯ, ಪ್ರಾದೇಶಿಕ ಪತ್ರಿಕೆಗಳು ನಿಷ್ಪಕ್ಷಪಾತ ವಾಗಿ ಭಾರತವನ್ನು ಮಾನವೀಯ ತೆಯ ತಳಹದಿ ಮೇಲೆ ಕಟ್ಟುವಲ್ಲಿ ಕೆಲಸ ಮಾಡಿವೆ ಯಾದರೂ ಕ್ರಮೇಣ ಜಗತೀಕರಣ, ದೇಶದ ರಾಜಕೀಯ ಹಿತಾಸಕ್ತಿಗೆ ತುತ್ತಾಗಿದ್ದು ಕಾಲದ ಪಲ್ಲಟ ಎನ್ನಬಹುದು. ಪತ್ರಿಕಾ ರಂಗ ಪತ್ರಿಕೋದ್ಯಮವಾದ ಮೇಲೆ ಬಂಡವಾಳ ಹೂಡಿಕೆ ಮತ್ತು ಗಳಿಕೆಯ ವ್ಯಾಪ್ತಿಗೆ ಬಂದು ಮಾನವೀಯತೆಯೇ ಮರೆಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದರು.
ಜಗತೀಕ ಭಾರತದ ಮರು ನಿರ್ಮಾಣದಲ್ಲಿ ಚಲನಚಿತ್ರಗಳ ಮಹತ್ವಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಹೆಚ್.ಯು. ವೈದ್ಯನಾಥ್ ( ವೈದ್ಯ ) ಅವರು, ಪತ್ರಿಕೋದ್ಯಮದಂತೆ ಚಿತ್ರರಂಗವು ಚಿತ್ರೋದ್ಯಮವಾದ ನಂತರ ಮಲ್ಯಗಳೆ ಇಲ್ಲವಾಗಿ ಸೊರಗು ತ್ತಿದೆ. ನಾಯಕ- ನಾಯಕಿಯರ ವೈಭವೀಕರಿಸುವುದನ್ನು ಬಿಟ್ಟರೆ, ಸಮಾಜಮುಖಿಯಾದ ಸಿನಿಮಾ ಗಳು ಬರುತ್ತಿಲ್ಲ ಮತ್ತು ಚಲನಚಿತ್ರ ಗಳು ಇಂದು ಜನರ ಮನಸ್ಸುನ್ನು ಗೆಲ್ಲುವಲ್ಲಿ ವಿಫಲವಾಗುತ್ತಿವೆ, ಸಿನಿಮಾ ಕೇವಲ ಮನರಂಜನೆ ಯಲ್ಲ, ಅದೊಂದು ಶಿಕ್ಷಣ ಎಂಬ ಕಲ್ಪನೆಯೇ ಇಲ್ಲವಾಗಿದೆ ಎಂದರು.
ಜಗಜ್ಯೋತಿ ಬಸವೇಶ್ವರ ಸಿzಂತಗಳ ಪ್ರಸ್ತುತತೆ ಕುರಿತು ಮಾತನಾಡಿದ ಹೊನ್ನಾಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಬಿ.ಜೆ. ಧನಂಜಯ ಅವರು, ಬಸವಣ್ಣ ಸಾರ್ವಕಾಲಿಕ ಸತ್ಯ. ಸಮಾಜ ಕ್ಕೊಂದು ವರ. ವರ್ಗ, ಜತಿ , ಲಿಂಗ ರಹಿತ ಸಮಸಮಾಜದ ಜನಪರ ಚಿಂತನೆಗೆ ಆದ್ಯತೆ ನೀಡಿದವರು. ವಚನ ಸಾಹಿತ್ಯದ ಅಧಿಕತ ವಕ್ತಾರ. ಸಂಸತ್ ಪರಿಕಲ್ಪನೆಯನ್ನು ತಂದವರು. ಇತಿಹಾಸದಲ್ಲಿ ಅತೀ ಹೆಚ್ಚು ಚರ್ಚೆಗೆ ಒಳಗಾದ ವ್ಯಕ್ತಿ. ಜನ ಸಾಮಾನ್ಯರಲ್ಲಿ ಉಳಿಯುತ್ತಾನೆ. ಬಸವಣ್ಣ ಇದಕ್ಕೆ ಸಾಕ್ಷಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಹ ಪ್ರಾಧ್ಯಾಪಕ ಡಾ. ಕೆ. ಚಂದ್ರಪ್ಪ, ಇಂದು ಎ ಕ್ಷೇತ್ರಗಳು ಬದಲಾವಣೆಯಾಗಿವೆ, ಬೇವರ್ಸಿ ಮೊಬೈಲ್ ಬಂದು ನಮ್ಮ ಸಜನಾಶೀಲತೆಯನ್ನು ಕಸಿದು ಕೊಂಡಿವೆ ಎಂದರು. ಸಂಚಾಲಕ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ಮಹಾದೇವ ಸ್ವಾಮಿ ಕೆ.ಎನ್ ಇದ್ದರು. ಕುಮಾರ ಸ್ವಾಮಿ ನಿರೂಪಿಸಿದರು.
