ಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಮೊಗ್ಗ ದಸರಾಕ್ಕೆ ಕೋಟಿ ಅನುದಾನ ನೀಡಿ ಮಾಜಿ ಶಾಸಕ ಕೆಬಿಪಿ ಆಗ್ರಹ

Share Below Link

ಶಿವಮೊಗ್ಗ: ಶಿವಮೊಗ್ಗ ದಸರಾ ನಾಡಿನಲ್ಲಿಯೇ ಹೆಸರಾಗಿದ್ದು, ಸರ್ಕಾರ ಕೂಡಲೇ ಒಂದು ಕೋಟಿ ರೂ. ಅನುದಾನ ನೀಡಬೇಕು ಎಂದು ಜೆಡಿಎಸ್ ಕೋರ್ ಕಮಿಟಿ ಸಂಚಾಲಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದರು.
ಅವರು ಇಂದು ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ದಸರಾ ಹಬ್ಬ ಶಿವಮೊಗ್ಗದಲ್ಲಿ ಹಲವು ವರ್ಷಗಳಿಂದ ಅತ್ಯಂತ ಸಡಗರ, ಸಂಭ್ರಮದಿಂದ ನಡೆಯುತ್ತಿದೆ. ಎ ಸರ್ಕಾರಗಳು ಕೂಡ ಶಿವಮೊಗ್ಗ ದಸರಾ ಹಬ್ಬಕ್ಕೆ ೧ಕೋಟಿ ರೂ. ಅನುದಾನ ನೀಡುತ್ತಾ ಬಂದಿವೆ. ನಾನು ಶಾಸಕನಾಗಿzಗ ಕೂಡ ೧ ಕೋಟಿ ಅನುದಾನ ತಂದಿz. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಕೇವಲ ೨೦ಲಕ್ಷ ರೂ. ನೀಡಿದೆ. ಇದು ಯಾವು ದಕ್ಕೂ ಸಾಲದು. ಆದ್ದರಿಂದ ತಕ್ಷಣವೇ ಉಳಿದ ೮೦ ಲಕ್ಷ ರೂ.ನೀಡಿ ಹಬ್ಬವನ್ನು ಯಶಸ್ವಿಗೊಳಿಸಬೇಕು ಎಂದರು.
ಈಗಾಗಲೇ ಮಹಾನಗರ ಪಾಲಿಕೆಯಿಂದ ನಡೆಯುತ್ತಿರುವ ದಸರಾ ಹಬ್ಬ ವಿವಿಧ ಸಮಿತಿಗಳ ಸಹಭಾಗಿತ್ವದಲ್ಲಿ ಸುಂದರವಾ ಗಿಯೇ ನಡೆಯುತ್ತಿದೆ. ಮಹಾ ನಗರ ಪಾಲಿಕೆಯಿಂದ ಪೂರ್ತಿ ಹಣ ಖರ್ಚು ಮಾಡಿದರೆ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗಬ ಹುದು. ಈ ನಿಟ್ಟಿನಲ್ಲಿ ಸರ್ಕಾರ ನೆರವು ನೀಡಬೇಕು ಎಂದರು.
ಜೆಡಿಎಸ್‌ನ ಬದಲಾದ ರಾಜ ಕೀಯ ವಿದ್ಯಮಾನದಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಹೆಚ್.ಡಿ. ಕುಮಾರಸ್ವಾಮಿಯವರು ಆಯ್ಕೆ ಯಾಗಿzರೆ. ಇದು ಸಂತೋಷ್ ವಿಷಯವಾಗಿದೆ. ಇದನ್ನು ಜಿ ಜೆಡಿಎಸ್ ಸ್ವಾಗತಿಸುತ್ತದೆ. ಅವರನ್ನು ಆಯ್ಕೆ ಮಾಡಿದ ಎ ಸದಸ್ಯರಿಗೆ ಅಭಿನಂದನೆಗಳು ಎಂದರು.
ಶಿವಮೊಗ್ಗ ಶಾಂತ ದಿಕ್ಕಿನತ್ತ ನಡೆಯುತ್ತಿದೆ. ಇಂತಹ ಸಮ ಯದಲ್ಲಿ ಯಾವ ರಾಜಕಾರಣಿ ಗಳೂ ಕೂಡ ವ್ಯತಿರಿಕ್ತ ಹೇಳಿಕೆ ನೀಡಬಾರದು.
ಎ ಧರ್ಮದ ಗೂಂಡಾಗಳ ವರ್ತನೆಯನ್ನು ಖಂಡಿಸುತ್ತಾ ಶಾಂತಿ ಕಾಪಾಡ ಬೇಕಾದ ಹೊಣೆ ಎ ಪಕ್ಷಗಳ zಗಿದೆ. ನಮ್ಮ ನಾಯಕರು ಕಡಿಮೆ ಮಾತನಾಡಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮು ಖರಾದ ತ್ಯಾಗರಾಜ್, ದೀಪಕ್ ಸಿಂಗ್, ಅಬ್ದುಲ್ ವಾಜೀದ್, ಸಂಗಯ್ಯ, ರಾಮಕೃಷ್ಣ, ರಘು, ನಾಗೇಶ್, ಮಂಜಪ್ಪ ಗೌಡರು, ಸಿದ್ದಪ್ಪ, ಗೋವಿಂದಪ್ಪ, ವೆಂಕಟೇಶ್ ಮುಂತಾದವರಿದ್ದರು.