ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಬರದಲ್ಲಿ ಕೆರೆಗೆ ಬಂದ ನೀರು ಕಂಡು ರೈತರಲ್ಲಿ ಮಂದಹಾಸ …

Share Below Link

ಶಿವಮೊಗ್ಗ : ಮಳೆಗಾಲ ಆರಂ ಭವಾಗಿದ್ದರೂ ಮಳೆ ಬೀಳುತ್ತಿಲ್ಲ, ರೈತರು ಆತಂಕಗೊಂಡಿzರೆ, ಇಂತಹ ಸಂದರ್ಭ ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ಬರುತ್ತಿ ರುವುದನ್ನು ಕಂಡು ರೈತರು ಱಅತ್ಯಂತ ಸಂತಸಗೊಂಡಿzರೆ ಎಂದು ಸಂಸದರಾದ ಬಿ.ವೈ. ರಾಘವೇಂದ್ರ ಹೇಳಿದರು.
ಕೇಂದ್ರ ಸರಕಾರ ಸಾಧನೆಗಳು ಹಾಗೂ ಯೋಜನೆಗಳನ್ನು ತಿಳಿಸು ವ ಸಲುವಾಗಿ ಮಂಗಳವಾರ ಹಮ್ಮಿ ಕೊಂಡಿದ್ದ ವಿಕಾಸ ತೀರ್ಥಯಾತ್ರೆ ಅಂಗವಾಗಿ ಶಿವಮೊಗ್ಗ ಗ್ರಾಮಾಂ ತರ ಕ್ಷೇತ್ರದಲ್ಲಿ ಬೂದಿಗೆರೆ ಏತ ನೀರಾವರಿ ಸ್ಥಳ ವೀಕ್ಷಣೆ ಮಾಡಿ, ಕೊಮ್ಮನಾಳು ಕೆರೆಗೆ ಗಂಗಾ ಪೂಜೆ ನೆರವೇರಿಸಿ ಮಾತನಾಡಿದ ಅವರು ಮಳೆಗಾಲ ಆರಂಭವಾಗಿದ್ದರೂ ರೈತರೂ ಇನ್ನೂ ಬಿತ್ತನೆ ಕಾರ್ಯ ಗಳನ್ನು ಮಾಡ್ತುತಿಲ್ಲ. ಇಡೀ ರೈತ ಸಮುದಾಯ ಆತಂಕಗೊಂಡಿದೆ. ಬರದ ಮುನ್ಸೂಚನೆಯನ್ನು ನೀಡುವಂತಿದೆ, ಇಂತಹ ಸಂದರ್ಭ ಸಂದರ್ಭದಲ್ಲಿ ಏತ ನೀರಾವರಿ ಯೋಜನೆಯು ಬೂದಿಗೆರೆ ಭಾಗದ ೯ ಕೆರೆಗಳಿಗೆ ನೀರು ತುಂಬಿಸು ವಂತಹ ಯೋಜನೆಗೆ ಅಧಿಕೃತ ವಾಗಿ ಚಾಲನೆ ನೀಡಲಾಗಿದೆ. ನೀರು ಹರಿದು ಬರುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ವನ್ನು ತಂದಿದ್ದು, ಇದು ಹೆಮ್ಮೆಯ ವಿಚಾರವಾಗಿದೆ ಎಂದರು.


ಈ ಹಿಂದೆ ಆಡಳಿತದ ಅವಧಿಯಲ್ಲಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಹಣವನ್ನು ಬಿಡುಗಡೆ ಮಾಡಿತ್ತು. ಈಗ ಕಾಮಗಾರಿ ಪೂರ್ಣಗೊಂಡಿದ್ದು, ಇಂದು ಕೊಮ್ಮನಾಳು ಗ್ರಾಮದ ಕೆರೆಗೆ ನೀರು ಹರಿದು ಬರುತ್ತಿರುವುದು ನಿಜಕ್ಕೂ ಸಂತಸದ ವಿಚಾರ ಹಾಗೂ ರೈತರೂ ಸೇರಿ ಎಲ್ಲರೂ ಹೆಮ್ಮೆ ಪಡುವ ಸಂಗತಿ ಎಂದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಈ ಹಿಂದೆ ಬಿಜೆಪಿ ಸರ ಕಾರ ಆಡಳಿತವಿದ್ದ ಅವಧಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಬೂದಿಗೆರೆ ಭಾಗದ ನೂರಾರು ಎಕರೆ ಜಮೀನು ಹಾಗು ರೈತರಿಗೆ ಅನುಕೂಲವಾಗುವಂತೆ ಏತ ನೀರಾವರಿ ಯೋಜನೆಯನ್ನು ಅನು ಷ್ಠಾನಗೊಳಿಸಲಾಗಿದೆ. ಈ ಹಿಂದೆ ಶಾಸಕರಾಗಿದ್ದ ಕೆ.ಬಿ. ಅಶೋಕ್ ನಾಯ್ಕ್, ಅವರ ನೇತೃತ್ವದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು ೫ ನೀರಾವರಿ ಯೋಜ ನೆಗಳನ್ನು ಪೂರ್ಣಗೊಳಿಸುವ ಕೆಲಸ ಮಾಡಲಾಗಿದೆ, ಈ ಪೈಕಿ ಅಪೂ ರ್ಣ ಗೊಂಡ ಕಾಮಗಾರಿ ಹಾಗೂ ಹೊಸ ಯೋಜನೆಗಳನ್ನು ಪೂರ್ಣ ಗೊಳಿಸಲಾಗಿದೆ. ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈ ಕಾಮಗಾರಿಗಳು ಪೂರ್ಣಗೊಂಡಿರುವುದು ಐತಿಹಾ ಸಿಕ ಸಂದರ್ಭವೆಂದೇ ಹೇಳಬ ಹುದು. ಹಾಗೆಯೇ ಸುಮಾರು ೩೫೦ ಕೋಟಿ ರೂ.ಗಳನ್ನು ವೆಚ್ಚ ಮಾಡಿ ಹೊಸಳ್ಳಿ ಏತ ನೀರಾವರಿ ಯೋಜನೆಯನ್ನು ಕೈಗೊಳ್ಳಲಾ ಗಿದೆ. ಈ ರೀತಿ ಶಿವಮೊಗ್ಗ ಗ್ರಾಮಾ ಂತರ, ಶಿಕಾರಿಪುರ, ಸೊರಬದ ಮೂಗೂರು, ಮೂಡಿ ಏತ ನೀರಾ ವರಿ ಯೋಜನೆಗಳನ್ನು ನೀಡುವ ಮೂಲಕ ರೈತರು ಬುದುಕ ಹಸನಾ ಗಿಸುವ ಪ್ರಾಮಾಣಿಕ ಪ್ರಯತ್ನ ವನ್ನು ಮಾಡಲಾಗಿದೆ. ಹಾಗೆಯೇ ಬೈಂದೂರಿನ ಸವಕೂರು ಸಿzಪುರ ಹೀಗೆ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸುಮಾರು ೧೫೦೦ – ೨೦೦೦ ಕೋಟಿ ಗಳಿಗಿಂತ ಹೆಚ್ಚು ರೂ.ಗಳನ್ನು ಬಿಜೆಪಿ ಸರಕಾರ ಆಡ ಳಿತ ಅವಧಿಯಲ್ಲಿ ವೆಚ್ಚ ಮಾಡ ಲಾ ಗಿದೆ. ಯೋಜನೆಗಳ ಮಲ್ಯ ಈಗ ಅರ್ಥವಾಗುತ್ತಿದೆ, ಇದರಿಂದ ರೈತ ರಿಗೆ ಅನುಕೂಲವಾಗುತ್ತಿದೆ ಎಂದರು.
ಈ ಯೋಜನೆಯ ಅನು ಷ್ಠಾನಕ್ಕೆ ಸಾಕಷ್ಟು ಸವಾಲುಗಳು ಎದುರಾದವು, ಕಾಮಗಾರಿಗಳನ್ನು ತಡೆಯುವಂತಹ ಷಡ್ಯಂತ್ರಗಳೂ ನಡೆದವು. ಆದರೆ, ಇದ್ಯಾವುದಕ್ಕೂ ತಲೆ ಕಡೆಸಿಕೊಳ್ಳದೇ ಅನ್ನದಾತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮ ಗಾರಿಯನ್ನು ಪೂರ್ಣಗೊಳಿಸ ಲಾಗಿದೆ. ಅಳವಡಿಸಲಾಗಿದ್ದ ಪೈಪ್ ಲೈನ್ ಮೇಲೆ ಬಹುತೇಕ ರೈತರು ತೋಟಗಳನ್ನು ಕಟ್ಟಿಕೊಂಡಿದ್ದರು. ಅಂದು ಹಾಕಿದ್ದ ಪಿವಿಸಿ ಪೈಪ್ ತೆರವುಗೊಳಿಸಿ ಹೊಸ ಸ್ಟೀಲ್ ಪೈಪ್ ಅಳವಡಿಕೆ ಮಾಡಲಾಗಿದೆ. ಆದರೆ ರೈತರಿಗೆ ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ ಎಲ್ಲ ರೈತರು ಸಂ ಪೂರ್ಣ ಸಹಕಾರವನ್ನುನೀಡಿ zರೆ. ಅದರ ಫಲವಾಗಿ ಇಂದು ಎಲ್ಲ ರೈತರೂ ಬೆಳೆಗಳಿಗೆ ನೀರನ್ನು ಉಣಿಸುವಂತಹ ಸೌಭಾಗ್ಯ ದೊರೆ ತಂತಾಗಿದೆ. ಯೋಜನೆಗೆ ಸಹಕರಿ ಸಿದ ರೈತರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದರು.
ಮುಂದಿನ ದಿನಗಳಲಿ ಉತ್ತಮ ಮಳೆ ಆಗಲಿ, ರೈತರು ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆಯನ್ನು ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಕೆ.ಅಶೋಕ್ ನಾಯ್ಕ್, , ಜಿ ಬಿಜೆಪಿ ಮುಖಂಡರಾದ ಡಾ.ಧನಂಜಯ ಸರ್ಜಿ,ಜಿ ಪಂಚಾಯತಿ ಮಾಜಿ ಸದಸ್ಯ ಷಣ್ಮುಖಪ್ಪ, ಬಿಜೆಪಿ ಮುಖಂ ಡರಾದ ಅಶೋಕ್ ಮೂರ್ತಿ ಮತ್ತಿ ತರ ಪ್ರಮುಖರು ಹಾಜರಿದ್ದರು.