ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಬಿಜೆಪಿಯ ಹಿಂದುತ್ವದ ಮೂಲ ಉಳಿಸಿಕೊಳ್ಳಲು ಈಶ್ವರಪ್ಪ ಗೆಲುವು ಅಗತ್ಯ…

Share Below Link

ಸಾಗರ: ಬಿಜೆಪಿಯ ಕುಟುಂಬ ರಾಜಕಾರಣ, ಒಂದು ಜಾತಿಗೆ ಮಣೆ ಹಾಕುತ್ತಿರುವುದರ ವಿರುದ್ದ ತಮ್ಮ ಭವಿಷ್ಯವನ್ನೇ ಪಣಕ್ಕಿಟ್ಟು ಕೆ.ಎಸ್. ಈಶ್ವರಪ್ಪನವರು ಕಣಕ್ಕೆ ಇಳಿದಿದ್ದು, ಹಿಂದುತ್ವದ ಮೂಲ ಉಳಿಸಿಕೊಳ್ಳಲು ಅವರ ಗೆಲುವು ಅತ್ಯವಶ್ಯಕ ಎಂದು ರಾಷ್ಟ್ರಭಕ್ತ ಬಳಗದ ತಾಲೂಕು ಅಧ್ಯಕ್ಷ ಪ್ರಕಾಶ್ ಕುಂಠೆ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ರಾಷ್ಟ್ರಭಕ್ತ ಬಳಗವು ಈಶ್ವರಪ್ಪ ನವರ ಗೆಲುವಿಗೆ ಪಣತೊಟ್ಟು ಕೆಲಸ ಮಾಡುತ್ತಿದೆ. ಪ್ರಖರ ಹಿಂದುತ್ವವಾದಿಯಾಗಿರುವ ಈಶ್ವರಪ್ಪ ಅವರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಶ್ವರಪ್ಪ ಅವರು ಚುನಾವಣೆ ಯಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ ಬಳಿಕ ರಾಷ್ಟ್ರಭಕ್ತ ಬಳಗದ ಸದಸ್ಯರು ಕ್ಷೇತ್ರ ವ್ಯಾಪ್ತಿ, ತಾಲ್ಲೂಕು ಹಾಗೂ ಗ್ರಾಪಂ ಮಟ್ಟದಲ್ಲಿ ಈಶ್ವರಪ್ಪನವರ ಪ್ರಚಾರಕ್ಕೆ ಇಳಿದಿzರೆ. ದೇಶದಲ್ಲಿ ಹಿಂದುತ್ವದ ಪರವಾಗಿ ಇರುವ ಯಾವುದಾದರೂ ಪಕ್ಷ ಇದ್ದರೆ ಅದು ಬಿಜೆಪಿ ಮಾತ್ರ. ಆದರೆ ಇತ್ತಿಚಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಕುಟುಂಬವೊಂದರ ಹಿಡಿತದಲ್ಲಿದ್ದು ಬಿಜೆಪಿಯನ್ನು ಹಂತಹಂತವಾಗಿ ಕೊಲ್ಲುವ ಕೆಲಸ ಮಾಡಲಾಗುತ್ತಿದೆ. ಇದನ್ನು ವಿರೋಧಿಸುವ ಹಿಂದುತ್ವವಾದಿಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ. ಪಕ್ಷದಲ್ಲಿ ಹಿಂದುತ್ವದ ಮೂಲ ಉಳಿಸಿಕೊಳ್ಳಲು ಈಶ್ವರಪ್ಪರ ಗೆಲುವು ಅಗತ್ಯವಾಗಿದೆ ಎಂದರು.
ಇಷ್ಟು ದಿನ ಮೋದಿಗಾಗಿ ಕೆಲಸ ಮಾಡುತ್ತಿದ್ದ ನಮ್ಮ ತಂಡವು ರಾಷ್ಟಭಕ್ತ ಬಳಗದಲ್ಲಿ ವಿಲೀನ ಗೊಳಿಸಲಾಗಿದೆ. ಈಶ್ವರಪ್ಪ ಗೆದ್ದ ನಂತರ ಅವರು ಪುನಃ ಬಿಜೆಪಿಗೆ ಸೇರ್ಪಡೆಗೊಳುತ್ತಾರೆ. ಇದರಲ್ಲಿ ಯಾವ ಅನುಮಾನವೂ ಬೇಡ. ಅವರ ಉದ್ದೇಶ ಅಪ್ಪ-ಮಕ್ಕಳ ಕೈಯಲ್ಲಿ ಸಿಲುಕಿರುವ ಬಿಜೆಪಿಯನ್ನು ಮುಕ್ತಗೊಳಿಸುವುದು. ಜೊತೆಗೆ ಮೋದಿಯವರನ್ನು ಪ್ರಧಾನಿ ಯಾಗಿಸುವುದೇ ಅವರ ಸಂಕಲ್ಪವಾಗಿದೆ. ಇದಕ್ಕಾಗಿ ಅವರು ತಮ್ಮ ರಾಜಕೀಯ ಭವಿಷ್ಯವನ್ನೇ ಪಣಕ್ಕಿಟ್ಟು ಸ್ಪರ್ಧೆ ಮಾಡುತ್ತಿದ್ದು, ಅವರನ್ನು ಬೆಂಬಲಿಸುವ ಮೂಲಕ ಹೆಚ್ಚಿನ ಅಂತರದಲ್ಲಿ ಅವರನ್ನು ಗೆಲ್ಲಿಸಿ, ದೆಹಲಿಗೆ ಕಳುಹಿಸಿಕೊಡ ಬೇಕಿದೆ ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರಭಕ್ತ ಬಳಗದ ಪ್ರಮುಖರಾದ ವಜ್ರಮುನಿ ಎಚ್.ಜಿ., ಸತೀಶ್ ಗೌಡ, ಕಸ್ತೂರಿ ಸಾಗರ್, ರಜನೀಶ್ ಹಕ್ರೆ, ನಾಗರಾಜ್ ಮೆಗವೀರ, ಗೋಪಾಲ, ಪ್ರಶಾಂತ ಹೆಗಡೆ, ಗೌರಿಶಂಕರ್, ಅರುಣಾ ವಿನಾಯಕ್ , ಅಣ್ಣಪ್ಪ, ಸವಿತಾ, ಉಮೇಶ್ ಚೌಟಗಿ, ಗೋಪಾಲ್, ರವಿ ಬಿಳಿಸಿರಿ ಇತರರು ಇದ್ದರು.