ಜಿಲ್ಲಾ ಸುದ್ದಿತಾಜಾ ಸುದ್ದಿ

ಈಶ್ವರಪ್ಪ ಓರ್ವ ಅಪ್ರಬುದ್ಧ ರಾಜಕಾರಣಿ ; ಅವರ ಬಾಯಿ ಗಟಾರವಿದ್ದಂತೆ: ಆಯ್ನೂರ್

Share Below Link

ಶಿವಮೊಗ್ಗ: ಕೆ.ಎಸ್. ಈಶ್ವರಪ್ಪ ಅಪ್ರಬುದ್ಧ ರಾಜಕಾರಣಿ. ಬಾಯಿ ಹರುಕ, ಹಗುರ ಮಾತುಗಾರ, ಲಜ್ಜೆಗೆಟ್ಟ ವ್ಯಕ್ತಿ ಜೊತೆಗೆ ಭ್ರಷ್ಟಾ ಚಾರಿ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಇಂದು ಈಶ್ವರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದರು.


ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಈಶ್ವರಪ್ಪನವರು ನನಗೆ ತಲೆಕೆಟ್ಟವನು ಎಂದಿzರೆ. ಆದರೆ ಅವರಿಗೆ ತಲೆ ಯಾವಾಗ ಸರಿ ಇತ್ತು. ಅಧಿಕಾರದ ಹಪಾಹಪಿಗೆ ಒಳಗಾದ ಅವರು ಸಂವಿಧಾನ ವನ್ನೂ ಓದಿಲ್ಲ. ಪ್ರಜಪ್ರಭುತ್ವದಲ್ಲಿ ನಂಬಿಕೆಯೂ ಇಲ್ಲ. ಬಾಯಿಗೆ ಬಂದಹಾಗೆ ಮಾತನಾಡುವುದೇ ಪ್ರತಿಭೆ ಎಂದು ಎಂದುಕೊಂಡಿ zರೆ. ಭ್ರಷ್ಟಾಚಾರದ ಬಗ್ಗೆ ಮಾತ ನಾಡುವ ನೈತಿಕತೆ ಅವರಿಗಿದೆಯೇ. ಅವರಿಗೆ ಪದಗಳ ಅರ್ಥವೇ ಗೊತ್ತಿಲ್ಲ. ಅವರ ಬಾಯಿಯೊಂದು ಗಟಾರವಾಗಿದೆ ಎಂದರು.
ಈಶ್ವರಪ್ಪನವರು ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರಿಗೆ ಭ್ರಷ್ಟಾಚಾರಿಗಳು ಎಂದು ಕರೆಯುತ್ತಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಕ್ಕು ಅವರಿಗಿ ದೆಯೇ. ಡಿ.ಕೆ. ಶಿವಕುಮಾರ್ ಮತ್ತೆ ಜೈಲಿಗೆ ಹೋಗುತ್ತಾರೆ ಎಂದು ಹೇಳುತ್ತಾರೆ. ಅವರೇನು ನ್ಯಾಯಾಧೀಶರೇ. ಜೈಲಿಗೆ ಹೋದ ವರನ್ನು ಹೇಗೆ ಸಹಿಸಿಕೊಳ್ಳುತ್ತೀರಿ ಎಂದು ಪ್ರಶ್ನೆ ಮಾಡುತ್ತಾರೆ. ಬಿ.ಎಸ್. ಯಡಿಯೂರಪ್ಪ ಅವರು ಜೈಲಿಗೆ ಹೋಗಿ ಬಂದಾಗ ಇವರು ಪ್ರಶ್ನೆ ಮಾಡಿದ್ದರೇ ಎಂದರು.
ಸಿಎಂ ಸಿದ್ದರಾಮಯ್ಯ ಅವರು ಈಶ್ವರಪ್ಪ ಅವರ ಕುರಿತಂತೆ ಒಂದು ಮಾತನಾಡಿzರೆ. ಅವರ ಮೆದು ಳಿಗೂ ನಾಲಿಗೆಗೂ ಸಂಪರ್ಕವಿಲ್ಲ ಎಂದಿzರೆ. ಅದನ್ನು ಈಶ್ವರಪ್ಪ ಮತ್ತೆ ಮತ್ತೆ ಸಾಬೀತುಪಡಿಸುತ್ತಲೇ ಇzರೆ. ಅವರ ಭ್ರಷ್ಟಾಚಾರದ ಬಗ್ಗೆ ನಾನೂ ಸಾಕಷ್ಟು ಮಾತನಾ ಡಬಹುದು. ಈಶ್ವರಪ್ಪ ಅವರು ಕಂದಾಯ, ವಿದ್ಯುತ್, ನೀರಾವರಿ ಸಚಿವರಾಗಿzಗ ಏನೆ ಮಾಡಿ ದರು, ಎಷ್ಟುಹಣ ಲೂಟಿ ಮಾಡಿ zರೆ ಎಂಬುದು ನನಗೂ ಗೊತ್ತಿ ದೆ. ಅವರು ಹೀಗೇ ಮಾತುಗಳನ್ನು ಮುಂದುವರಿಸಿದರೆ ದಾಖಲೆಗಳ ಸಮೇತ ಹೊರತರುವೆ ಎಂದರು.
ಈಶ್ವರಪ್ಪ ಒಬ್ಬ ವಿಚಿತ್ರ ಮನುಷ್ಯ ರೂಪವಷ್ಟೆ. ಈಗಾಗಲೇ ಅವರ ಪಕ್ಷದಿಂದಲೇ ಅವರನ್ನು ಮೂಲೆಗುಂಪು ಮಾಡಲಾಗಿದೆ. ನಾನಾದರೂ ಪಕ್ಷದ ರಾಜ್ಯ ವಕ್ತಾರನಾಗಿದ್ದೇನೆ. ಅವರಿಗೆ ಯಾವ ಹುz ಇದೆ. ಅವರ ಕೂಡುಗೆ ಶಿವಮೊಗ್ಗಕ್ಕೆ ಏನಿದೆ. ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಟ್ಟು ಅವರು ಯಾವ ಅಭಿವೃದ್ಧಿಯನ್ನು ಮಾಡಿzರೆ. ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಕೆಲಸಗಳು ಹಳ್ಳ ಹಿಡಿದರೂ ಉತ್ತಮವಾಗಿವೆ ಎಂದು ಹೇಳು ತ್ತಾರೆ.
ಪ್ರಭಾವ ಬೀರಿ ಪ್ರಶಸ್ತಿ ತರುತ್ತಾರೆ. ಸ್ಮಾರ್ಟ್ ಸಿಟಿಯ ಭ್ರಷ್ಟಾಚಾರದ ಬಗ್ಗೆ ಪ್ರೆತ್ಯೇಕ ತನಿಖೆಯೇ ಆಗಬೇಕು ಎಂದರು.
ಬಿ.ಎಸ್. ಯಡಿಯೂರಪ್ಪ ಅವರನ್ನು ಕಡೆಗಣಿಸಿದ ವ್ಯಕ್ತಿ ಈಶ್ವರಪ್ಪ. ಅವರು ಜೈಲಿನಲ್ಲಿzಗ ಅವರ ವಿರುದ್ಧವೇ ರಾಜ್ಯಪಾಲರಿಗೆ ದೂರು ಕೊಟ್ಟವರು. ಯಾರಿಗೆ ಯಾವ ರೀತಿ ದೂರು ಕೊಡ ಬೇಕೆಂಬ ವಿಷಯವೂ ಅವರಿಗೆ ಗೊತ್ತಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಧ್ಯಕ್ಷ ಹೆಚ್.ಎಸ್. ಸುಂದರೇಶ್, ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗ ರಾಜ್, ಎಸ್.ಕೆ. ಮರಿಯಪ್ಪ, ಧೀರರಾಜ್ ಹೊನ್ನವಿಲೆ, ಗಿರೀಶ್ ಮುಂತಾದವರಿದ್ದರು.