ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಹಸಿವು – ಸೋಷಣೆಗೆ ಶಿಕ್ಷಣವೇ ಉತ್ತರ: ಪ್ರೊ| ವೀರಭದ್ರಪ್ಪ

Share Below Link

ಶಿವಮೆಗ್ಗ: ಹಸಿವು ಬಡತನ ಶೋಷಣೆಗಳಿಗೆ ಉತ್ತರವೇ ಶಿಕ್ಷಣ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಹೇಳಿ ದರು.
ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾ ಡಿದ ಅವರು, ನಾವಿಂದು ಹಲವು ಸಮಸ್ಯೆಗಳನ್ನು, ಅವಮಾನಗ ಳನ್ನು, ಶೋಷಣೆ ಬಡತನ ಕಾಣು ತ್ತಿದ್ದೇವೆ. ಇದಕ್ಕೆಲ್ಲಾ ಉತ್ತರವೇ ಶಿಕ್ಷಣವಾಗಿದೆ. ಈ ಶಿಕ್ಷಣ ಕೂಡ ಒಳ್ಳೆಯ ಮಾರ್ಗದಲ್ಲಿ ಸಾಗಬೇಕಾ ಗಿದೆ. ಜನ ಸಂಪಾದಿ ಸುವುದರ ಜೊತೆಗೆ ಮಾನವೀಯತೆ ಬೆಳೆಸಿಕೊ ಳ್ಳಬೇಕಾಗಿದೆ ಎಂದರು.
ನಮ್ಮ ವಿವಿಧ ಕಾಲಘಟ್ಟಗಳ ನಡುವೆ ವಿದ್ಯಾರ್ಥಿ ಜೀವನವೇ ಮುಖ್ಯವಾಗಿದ್ದು, ಇದು ಬಂಗಾರದ ಸಮಯವಾಗಿದೆ. ಸಹ್ಯಾದ್ರಿ ಕಾಲೇಜ್ ಎಂಬುದು ಸಾಂಸ್ಕೃತಿಕ ತವರೂರಾಗಿದೆ. ಇಲ್ಲಿ ಓದಿದ ವಿದ್ಯಾರ್ಥಿಗಳು ಜಗತ್ತಿನ ಗಮನಸೆಳೆದಿದ್ದಾರೆ. ನೀವೂ ಕೂಡ ಹೆಸರು, ಜನಾರ್ಜನೆ, ಮಲ್ಯ ಗಳನ್ನು ಸಂಪಾದಿಸಿ ಈ ನಾಡು ಕಟ್ಟಲು ಕಂಕಣ ತೊಡಿ. ಜಣರಾ ಗುವುದರ ಜೊತೆಗೆ ಹೃದಯವಂತ ರಾಗಿ ಎಂದು ಕರೆ ನೀಡಿದರು.
ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಚಂದ್ರಪ್ಪ ಕೆ. ಮಾತನಾಡಿ, ಪಠ್ಯೇ ತರ ಚಟುವಟಿಕೆಗಳು ವಿದ್ಯಾರ್ಥಿ ಜೀವನದಲ್ಲಿ ಮುಖ್ಯವಾಗುತ್ತವೆ. ಅದು ಕ್ರಿಯಾಶೀಲತೆ ಮತ್ತು ಬದು ಕುವ ದಾರಿ ತೋರಿಸುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವ ಹಿಸಿ ಜನಪದ ಕಾರ್ಯಕ್ರಮ ನಡೆಸಿಕೊಟ್ಟ ಖ್ಯಾತ ಜನಪದ ಕಲಾವಿದ ಮಳವಳ್ಳಿ ಮಹದೇ ವಸ್ವಾಮಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿ ತಂದೆ ತಾಯಿಗಳಿಗೆ ಗೌರವ ಕೊಡಿ. ಮೆಬೈಲ್ ಮಿತವಾಗಿ ಬಳಸಿ. ಜನಪದ ಕ್ಷೇತ್ರವನ್ನು ಉಳಿಸಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶು ಪಾಲ ಡಾ.ಕೆ.ಬಿ. ಧನಂಜಯ, ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿ ಇರಬೇಕು. ತಾವು ಕಲಿತರೆ ಮಾತ್ರ ಸಾಲದು, ಬೇರೆಯವರನ್ನೂ ಕಲಿಯುವಂತೆ ಪ್ರೋ ಮಳವಳ್ಳಿ ಮಹದೇವಸ್ವಾಮಿ ಶ್ರೇಷ್ಟ ಜನಪದ ಕಲಾವಿದ. ಜನಪದವೇ ಕಣ್ಮರೆಯಾಗುತ್ತಿರುವ ಇಂತಹ ಸಂದರ್ಭದಲ್ಲಿ ಅವರೊಂದು ಜನಪದ ಕಣಜವಾಗಿದ್ದಾರೆ. ನೀವು ಕೂಡ ಜನಪದ ಉಳಿಸಿ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶು ಪಾಲರಾದ ಡಾ. ಎನ್. ರಾಜೇಶ್ವರಿ, ಡಾ.ಎಂ.ಕೆ. ವೀಣಾ, ಐಕ್ಯೂಎಂಸಿ ಸಂಚಾಲಕ ಪ್ರೊ. ಪೂರ್ವಾಚಾರಿ, ಅಧ್ಯಾಪಕರಾದ ಜಿ.ಆರ್. ಲವ. ಡಾ.ಕೆ.ಎನ್. ಮಂಜುನಾಥ್, ಅವಿನಾಶ್, ಮಹದೇವಸ್ವಾಮಿ, ಹಾಲಮ್ಮ ಮೆದಲಾದವರಿದ್ದರು.
ಈ ಸಂದರ್ಭದಲ್ಲಿ ಜನಪದ ಕಲಾವಿದ ಮಳವಳ್ಳಿ ಮಹದೇವಸ್ವಾಮಿ ಅವರಿಂದ ಜನಪದ ಗಾಯನ ನಡೆಯಿತು.