ಜಿಲ್ಲಾ ಸುದ್ದಿತಾಜಾ ಸುದ್ದಿ

ವಾಸವಿ ಶಾಲೆಯಿಂದ ಪರಿಸರಸ್ನೇಹಿ ಗಣಪತಿ ವಿತರಣೆ: ಶೇಷಾಚಲ

Share Below Link

ಶಿವಮೊಗ್ಗ: ಕೋಟೆ ರಸ್ತೆಯ ವಾಸವಿ ಪಬ್ಲಿಕ್ ಶಾಲೆಯಲ್ಲಿ ಪರಿಸರ ಸಂರಕ್ಷಣೆಗೋಸ್ಕರ ಪರಿಸರಸ್ನೇಹಿ ಗಣಪತಿಗಳನ್ನು ವಿತರಿಸಲಾಗುವುದು ಎಂದು ಶಾಲೆಯ ಕಾರ್ಯದರ್ಶಿ ಎಸ್.ಕೆ. ಶೇಷಾಚಲ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾ ಡಿದ ಅವರು, ಶಾಲೆಯಲ್ಲಿ ಪರಿ ಸರಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪಿಸುವುದರ ಮೂಲಕ ಪ್ರತಿವರ್ಷ ಹಬ್ಬ ಆಚರಿಸಲಾಗು ತ್ತದೆ. ನದಿಯ ನೀರು ಹಾಳಾಗ ದಂತೆ ಹಾಗೂ ಜಲಚರ ಜೀವಿಗಳು ನಾಶವಾಗುವು ದನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಅರಿವು ಮೂಡಿ ಸಲು ಶಾಲೆಯ ಆವರಣದಲ್ಲಿ ಪ್ರತಿವರ್ಷ ಕೃತಕ ಕೆರೆ ನಿರ್ಮಿಸಿ ಹಬ್ಬದ ದಿನ ಸುಮಾರು ೨೦೦ ಗಣಪತಿ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.
ಸುಮಾರು ೧೦೦ಕ್ಕೂ ಹೆಚ್ಚು ಪರಿಸರಸ್ನೇಹಿ ಗಣಪತಿ ಮೂರ್ತಿ ಯನ್ನು ವಿತರಿಸಲಾಗುತ್ತಿದ್ದು, ೧ ಮೂರ್ತಿಗೆ ೧೫೦ ರೂ. ಬೆಲೆ ನಿಗದಿ ಮಾಡಿದ್ದು, ಸೆ.೧೨ರಿಂದ ವಿತರಿಸ ಲಾಗುವುದು. ಹಬ್ಬದ ಮೊದಲ ದಿನ ರಾತ್ರಿ ೮.೩೦ರಿಂದ ೧೧.೩೦ ರವರೆಗೆ ಕೃತಕ ಕೆರೆಯಲ್ಲಿ ವಿಸರ್ಜನೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ: ೯೯೧೬೫ ೧೪೦೬೬ ರಲ್ಲಿ ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಲೆ ಯ ಅಧ್ಯಕ್ಷ ಬಿ.ಎಲ್. ಶ್ಯಾಮ ಸುಂದರ್, ಎಸ್.ನಾಗರಾಜ್, ಸೌಮ್ಯ, ರೋಟರಿ ಇಂಟರ್‍ಯಾಕ್ಟ್ ಕ್ಲಬ್‌ನ ಸದಸ್ಯರಾದ ತನುಶ್ರೀ, ಚೇತನ್, ಚಿನಿಶಾ ಇದ್ದರು.