ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಕೆಎಸ್‌ಆರ್‌ಟಿಸಿಯಿಂದ ಮೃತರ ವಾರಸುದಾರರಿಗೆ ಪರಿಹಾರ ವಿತರಣೆ

Share Below Link

ಶಿವಮೊಗ್ಗ, ದಿ: ೧೧-೦೫- ೨೦೧೩ ರಂದು ವಾಹನ ಸಂಖ್ಯೆ ಕೆ.ಎ.೧೭ ಎಫ್ ೧೨೮೪ ವಾಹನವು ಮಾರ್ಗ ಸಂಖ್ಯೆ ೭/೮ ರಲ್ಲಿ ಭದ್ರಾವತಿ-ಕೊಪುರ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವಾಗ ಬಂಕಾಪುರ ಹತ್ತಿರ ಲಾರಿಗೆ ಕೆಎಸ್‌ಆರ್‍ಟಿಸಿ ಸಂಸ್ಥೆಯ ವಾಹನ ಡಿಕ್ಕಿ ಹೊಡೆದು ಸಂಭ ವಿಸಿದ ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕ ಕೃಷ್ಣ ಕಬಾಳೆ, ೪೭ ವರ್ಷ ಇವರ ವಾರಸುದಾರರಾದ ವಂದನಾ ಕೃಷ್ಣ ಕಬಾಳೆ, ಸಾ. ಮೊಳವಡೆ, ಶಾಹುವಾಡಿ ತಾಲ್ಲೂಕು, ಕೊಪುರ ಜಿ ಇವರಿಗೆ ಅಪಘಾತ ಪರಿಹಾರ ನಿಧಿಯಿಂದ ರೂ.೨,೫೦,೦೦೦ ಚೆಕ್ಕನ್ನು ಕೆಎಸ್‌ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯ ಕುಮಾರ್.ಜಿ ರವರು ಹಸ್ತಾಂತ ರಿಸಿದರು.