ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸಚಿವ ಶಿವಾನಂದ ಪಾಟೀಲ್‌ರನ್ನು ಸಂಪುಟದಿಂದ ವಜ ಮಾಡಿ : ಕೆಎಸ್‌ಈ

Share Below Link

ಶಿವಮೊಗ್ಗ: ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಬರಗಾಲ ಘೋಷಣೆ ಮಾಡುವು ದನ್ನು ಬಿಟ್ಟು ವರ್ಗಾವಣೆ ದಂಧೆಯ ಕಾಲ ಕಳೆಯುತ್ತಿzರೆ. ರೈತರ ಆತ್ಮಹತ್ಯೆ ಬಗ್ಗೆ ಹಗುರವಾಗಿ ಮಾತನಾಡಿ, ಅವಮಾನಿಸಿದ ಸಚಿವ ಶಿವಾನಂದ ಪಾಟೀಲ್‌ರನ್ನು ಸಂಪುಟದಿಂದ ವಜ ಮಾಡಿ ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಗುಡುಗಿzರೆ.
ಅವರು ಇಂದು ಜಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಶಿವಮೊಗ್ಗ ಜಿಧಿಕಾರಿಗಳ ಕಚೇರಿಯ ಮುಂದೆ ಹಮ್ಮಿ ಕೊಂಡಿದ್ದ ಪ್ರತಿಭಟನಾ ಧರಣಿ ಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸೆ.೮ರಂದು ರೈತರ ವಿವಿಧ ಸಮಸ್ಯೆಗಳ ಬಗ್ಗೆ ಗಮನ ಸೆಳೆ ಯಲು ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿzಗ ರಾಜ್ಯ ಸರ್ಕಾರದ ಪರವಾಗಿ ಸೌಜನ್ಯಕ್ಕಾದರೂ ಮುಖ್ಯಮಂತ್ರಿ ಗಳು ಅಥವಾ ಸಂಪುಟದ ಯಾರೊಬ್ಬ ಮಂತ್ರಿಗಳು ಬಂದು ವಿಚಾರಿಸಿಲ್ಲ. ಪ್ರತಿಭಟನೆ ಯಾತ ಕ್ಕಾಗಿ ಮಾಡುತ್ತಿದ್ದೀರಿ ಎಂದು ಕೇಳಿಲ್ಲ. ಇದು ಸರ್ಕಾರದ ದುರ ಹಂಕಾರವನ್ನು ಎತ್ತಿ ತೋರಿಸಿದೆ ಎಂದರು.
ಸೆ.೪ರಂದು ಬರಗಾಲ ಘೋಷಣೆ ಮಾಡುವುದಾಗಿ ಹೇಳಿದ ಮುಖ್ಯಮಂತ್ರಿಗಳು ಈಗ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡ ಬೇಕು ಎಂದು ಹೇಳಿ ಸಮಯ ಕಳೆಯುತ್ತಿzರೆ. ಕಂದಾಯ ಇಲಾಖೆ ಸತ್ತು ಹೋಗಿದೆ. ಯಾವೊಬ್ಬ ಮಂತ್ರಿಯೂ ರೈತರ ಬಳಿ ತೆರಳಿ ವಿಚಾರಿಸಿಲ್ಲ. ಹೀಗೇ ಮುಂದುವರಿದರೆ ಸಚಿವರನ್ನು ಜಿಗೆ ಬರಲು ಬಿಡುವುದಿಲ್ಲ. ಮುತ್ತಿಗೆ ಹಾಕುತ್ತೇವೆ. ಜೈಲ್ ಭರೋ ಚಳುವಳಿ ನಡೆಸುತ್ತೇವೆ. ಶಿವಮೊಗ್ಗ ಜಿಯಲ್ಲಿ ನಿಂತು ಹೋದ ಎ ಕಾಮಗಾರಿಗಳಿಗೂ ಕೂಡಲೇ ಹಣ ಬಿಡುಗಡೆ ಮಾಡ ಬೇಕು. ವಸತಿ ಯೋಜನೆಯಡಿ ಮನೆ ನೀಡುವ ಕಾಮಗಾರಿಯನ್ನು ನಿಲ್ಲಿಸಿದ್ದು, ಹಣ ಬಿಡುಗಡೆ ಮಾಡದಿದ್ದರೆ ಎ ಸಂತ್ರಸ್ತರನ್ನು ಜೊತೆಗೂಡಿಸಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಗಳು ಚಕ್ಕುಲಿಯಾಗಿ ಗೋಚರಿ ಸುತ್ತಿದ್ದು, ಗ್ಯಾರಂಟಿಗಳನ್ನು ನೀಡುತ್ತಾ ಸದ್ದಿಲ್ಲದೆ ತೆರಿಗೆ ಹೆಚ್ಚಿಸಿ ಬಡವರ ಮೇಲೆ ಬರೆ ಎಳೆದಿzರೆ. ರೈತರಿಗೆ ವಿದ್ಯುತ್ ನೀಡುತ್ತಿಲ್ಲ. ವಿದ್ಯುತ್ ದರವನ್ನ ಹೆಚ್ಚಿಸಿzರೆ. ಬಿಜೆಪಿ ಸರ್ಕಾರ ರೈತರಿಗೆ ೧೦ಹೆಚ್‌ಪಿ ವಿದ್ಯುತ್ ಉಚಿತವಾಗಿ ನೀಡಿತ್ತು. ಈಗ ಕಾಂಗ್ರೆಸ್ ಸರ್ಕಾರ ಅನಿಯಮಿತ ವಿದ್ಯುತ್ ಕಡಿತ ಮಾಡುತ್ತಿದೆ. ರೈತರ ಆತ್ಮಹತ್ಯೆ ಬಗ್ಗೆ ಓರ್ವ ಸಚಿವರು ಹಗುರವಾಗಿ ಮಾತನಾಡಿ,೫ ಲಕ್ಷ ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿzರೆ ಎಂದು ಅವಮಾನಿಸಿzರೆ. ಬಿಜೆಪಿ ವತಿಯಿಂದ ಆ ಸಚಿವರಿಗೆ ೨ಕೋಟಿ ರೂ. ಸಂಗ್ರಹ ಮಾಡಿ ಆ ಸಚಿವರಿಗೆ ಕೊಡಲು ಸಿದ್ಧರಿದ್ದೇವೆ. ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದ ಅವರು, ಅನ್ನ ನೀಡುವ ರೈತರ ಜೀವಕ್ಕೆ ಬೆಲೆ ಕಟ್ಟಲಾಗುವುದಿಲ್ಲ ಎಂಬುದನ್ನು ಸರ್ಕಾರ ತಿಳಿಯಲಿ ಎಂದರು.
ಕೇಂದ್ರ ಸರ್ಕಾರದಕೃಷಿ ಸಮ್ಮಾನ್, ವಿದ್ಯಾನಿಧಿ ಯೋಜನೆ ಯನ್ನು ರಾಜ್ಯ ಸರ್ಕಾರ ನಿಲ್ಲಿಸಿದೆ. ತಕ್ಷಣ ಬರಪೀಡಿತ ತಾಲೂಕು ಗಳನ್ನು ಘೋಷಿಸಿ ಬೆಳೆ ವಿಮೆಹಣ ಮತ್ತು ಬೆಳೆನಷ್ಟದ ಪರಿಹಾರವನ್ನು ರೈತರಿಗೆ ನೀಡಬೇಕು. ಸಬ್ಸಿಡಿ ಗೊಬ್ಬರ ಒದಗಿಸಬೇಕು. ನೀರಿನ ಕೊರತೆ ಇರುವಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗ ದಂತೆ ಕ್ರಮ ಕೈಗೊಳ್ಳಬೇಕು. ಸರಾಸರಿ ಮಳೆ ಕಡಿಮೆ ಇzಡೆ ಕೂಡಲೇ ಬರ ತಾಲೂಕು ಎಂದು ಘೋಷಿಸಿ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಬೇಕು. ಕಾವೇರಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸ ಬೇಕು. ರೈತರಿಗೆ ಮೇವು ಮತ್ತು ನೀರು ಸಿಗದೆ ಇರುವ ಪರಿಸ್ಥಿತಿ ಉಂಟಾಗಿದೆ. ಮೂಗಿಗೆ ತುಪ್ಪ ಸವರುವ ಕಾರ್‍ಯ ಬಿಟ್ಟು ಸಮ ರೋಪಾದಿ ಯಲ್ಲಿ ಕ್ರಮ ಕೈಗೊಳ್ಳಿ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಿ. ಇಲ್ಲವಾದಲ್ಲಿ ಬೃಹತ್ ಹೋರಾಟ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸಾಲೆಕೊಪ್ಪ ರಾಮಚಂದ್ರ ಮಾತ ನಾಡಿ, ಅನಿಯಮಿತ ವಿದ್ಯುತ್ ಕಡಿತ ನಿಲ್ಲಿಸಿ ಅಡಿಕೆ ಮರಗಳಿಗೆ ಬಂದಿರುವ ಎಲೆಚುಕ್ಕಿ ರೋಗ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಿ. ಹೆಚ್ಚುತ್ತಿರುವ ರೈತರ ಆತ್ಯಹತ್ಯೆ ಪ್ರಕರಣ ತಡೆಯಿರಿ. ಮಳೆಯ ಅಭಾವದಿಂದ ಉಂಟಾಗಿರುವ ಬರಗಾಲದ ಸಮಸ್ಯೆಗೆ ಕೂಡಲೇ ಸ್ಪಂದಿಸಿ ಎಂದು ಸರ್ಕಾರಕ್ಕೆ ಜಿಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಧ್ಯಕ್ಷ ಟಿ.ಡಿ. ಮೇಘರಾಜ್, ಶಾಸಕರಾದ ಎಸ್.ಎನ್. ಚನ್ನಬ ಸಪ್ಪ, ಭಾರತೀಶೆಟ್ಟಿ, ಎಸ್. ರುದ್ರೇ ಗೌಡ, ಮಾಜಿ ಶಾಸಕ ಅಶೋಕ್ ನಾಯ್ಕ, ರೈಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ದಿನೇಶ್ ದೇವವ್ರಂದ, ಕಾರ್ಯದರ್ಶಿ ವಿನ್ಸೆಂಟ್ ರಾಡ್ರಿಗಸ್, ಪ್ರಮುಖ ರಾದ ಎಸ್. ದತ್ತಾತ್ರಿ, ಕು. ಮಂಜು ಳಾ ಸೇರಿದಂತೆ ಬಿಜೆಪಿ ರೈತ ಮೋ ರ್ಚಾದ ವಿವಿಧ ತಾಲೂಕುಗಳ ಪ್ರಮುಖರು ಉಪಸ್ಥಿತರಿದ್ದರು.