ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಕೌಶಲ್ಯ ಬೆಳೆಸಿಕೊಳ್ಳಿ: ಚೈತನ್ಯ

Share Below Link

ಶಿವಮೊಗ್ಗ : ವಿದ್ಯಾರ್ಥಿಗಳು ಸಮಸ್ಯೆಗಳಿಂದ ಓಡಿ ಹೋಗದೇ ಅದನ್ನು ಎದುರಿಸುವ ಸಂಸ್ಕಾರ ಕೌಶಲ್ಯತೆ ಯುವ ಸಮೂಹದಾಗ ಬೇಕಿದೆ ಎಂದು ಮಂಗಳೂರಿನ ಮೆಸ್ಕಾಂ ಸೂಪರಿಂಟೆಂಡಿಂಗ್ ಇಂಜಿನಿಯರ್ ಜಿ.ಎನ್.ಚೈತನ್ಯ ಅಭಿಪ್ರಾಯಪಟ್ಟರು.
ಇಂದು ನಗರದ ಜೆ.ಎನ್. ಎನ್ ಎಂಜಿನಿಯರಿಂಗ್ ಕಾಲೇಜಿ ನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಏರ್ಪಡಿಸಿದ್ದ ‘ಪವರ್ ಟ್ರಾನ್ – ೨೦೨೩’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಯಶಸ್ಸಿನ ಮೂಲ ತಳಹದಿ ಶಿಕ್ಷಕರು. ಪುಸ್ತ ಕಗಳನ್ನು ನೋಡಿ ಪಾಠ ಮಾಡುವ ಶಿಕ್ಷಕರಿಗಿಂತ ಮನಸ್ಸು ಪೂರ್ತಿ ಯಾಗಿ ಪಾಠ ಮಾಡುವ ಶಿಕ್ಷಕ ಉತ್ತಮ ಗುರುವಾಗಿ ಗುರುತಿಸಿಕೊ ಳ್ಳುತ್ತಾರೆ. ಶಿಕ್ಷಕರು ನಮ್ಮ ಬದುಕಿನ ದೀಪದ ಕ್ಯಾಂಡಲ್ ಗಳಾಗಿದ್ದು, ತಾವು ಉರಿದು ವಿದ್ಯಾರ್ಥಿಗಳಿಗೆ ಬೆಳಕು ನೀಡುವ ಹೃದಯ ವೈಶಾ ಲ್ಯತೆ ಹೊಂದಿರುತ್ತಾರೆ.


ಕನಸುಗಳನ್ನು ಕಾಣಲು ಪ್ರಾರಂಭಿಸಿ. ನಿz ಮಾಡಲು ಬಿಡದ ಕನಸುಗಳು ನಿಮ್ಮದಾಗ ಬೇಕಿದೆ. ಅದುವೇ ಯಶಸ್ವಿ ಬದು ಕಿನ ಗುರಿಯಾಗಿ ಬದಲಾಗಲಿದೆ. ನಮ್ಮ ಭವಿಷ್ಯವು ವಿದ್ಯಾರ್ಥಿ ಜೀವ ನದಲ್ಲಿ ನಾವು ಅಳವಡಿಸಿಕೊಂಡ ಕೌಶಲ್ಯತೆಗಳ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ.
ಜೆಎನ್‌ಎನ್ ಎಂಜಿನಿಯ ರಿಂಗ್ ಕಾಲೇಜಿನಲ್ಲಿ ಓದಿದ ಅರವ ತ್ತಕ್ಕು ಹೆಚ್ಚು ಹಿರಿಯ ವಿದ್ಯಾರ್ಥಿ ಗಳು ಇಂದು ಮೆಸ್ಕಾಂ ವಿವಿಧ ಹು zಗಳಲ್ಲಿ ಕಾರ್‍ಯನಿರ್ವಹಿಸುತ್ತಿz ರೆ. ಅಂತಹ ಹಿರಿಯ ವಿದ್ಯಾರ್ಥಿ ಗಳ ಸಾಧನೆಯೆ ವಿದ್ಯಾಸಂಸ್ಥೆಗಳ ಉನ್ನತಿಯ ಕುರಿತು ಸದಾ ಪ್ರತಿಧ್ವನಿ ಸುತ್ತಿರುತ್ತದೆ ಎಂದು ಹೇಳಿದರು.


ಶಿವಮೊಗ್ಗ ಕೆಪಿಟಿಸಿಎಲ್ ಸೂಪರಿಂಟೆಂಡಿಂಗ್ ಇಂಜಿನಿ ಯರ್ ಕೆ.ಸುರೇಶ್ ಮಾತನಾಡಿ, ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸಲು ಅನೇಕ ಸಹ ಯೋಜನೆಗಳನ್ನು ರೂಪಿಸಲಾ ಗುತ್ತಿದೆ. ಕತ್ತಲು ರಹಿತ ಕರ್ನಾಟಕ ನಿರ್ಮಾಣ ಮಾಡುವಲ್ಲಿ ಅನೇಕ ನಾವೀನ್ಯ ಯೋಜನೆಗಳನ್ನು ಅಳವಡಿಸಿಕೊಂಡಿದ್ದೇವೆ. ಓದಿನ ಜೊತೆಗೆ ವಿದ್ಯಾರ್ಥಿಗಳು ಇಂತಹ ಆಧುನಿಕ ಯೋಜನೆಗಳ ಬಗ್ಗೆ ಅರಿವು ಪಡೆಯಿರಿ. ಉತ್ತಮ ಎಲೆಕ್ಟ್ರಿಕಲ್ ಎಂಜಿನಿಯರ್ ಸದಾ ಬೇಡಿಕೆಯಲ್ಲಿರುತ್ತಾರೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವ ಹಿಸಿದ್ದ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮಾತನಾ ಡಿದರು. ಜೆ.ಎನ್.ಎನ್.ಸಿ.ಇ ಶೈಕ್ಷಣಿಕ ಡೀನ್ ಡಾ.ಪಿ. ಮಂಜು ನಾಥ, ವಿಭಾಗದ ಮುಖ್ಯಸ್ಥರಾದ ಡಾ.ತೇಜಸ್ವಿ, ಸಹ ಪ್ರಾಧ್ಯಾಪಕ ರಾದ ಡಾ.ಹೆಚ್.ಬಿ.ಸುರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.