ಜಿಲ್ಲಾ ಸುದ್ದಿತಾಜಾ ಸುದ್ದಿ

ಫೆಬ್ರವರಿ ಅಂತ್ಯದೊಳಗೆ ಸುಸ್ತಿದಾರ ರೈತರು ಅಸಲು ಮರುಪಾವತಿಸಿ ಸಂಪೂರ್ಣ ಬಡ್ಡಿ ಮನ್ನಾ ಪಡೆಯಿರಿ…

Share Below Link

ಶಿವಮೊಗ್ಗ: ರೈತರ ಮಧ್ಯ ಮಾವಧಿ ಹಾಗೂ ಧೀರ್ಘಾವಧಿ ಸಾಲ ಪಡೆದು ಸುಸ್ತಿಯಾಗಿರುವ ರೈತರು ಅಸಲನ್ನು ಫೆಬ್ರವರಿ ಅಂತ್ಯ ದೊಳಗೆ ಮರುಪಾವತಿ ಮಾಡಿದರೆ, ಸಂಪೂರ್ಣವಾಗಿ ಬಡ್ಡಿಯನ್ನು ಮನ್ನಾ ಮಾಡಲಾಗುವುದು. ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ರಾಜ್ಯ ಸರ್ಕಾರ ರೈತರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಲ್ಯಾಂಪ್ಸ್ ಸಹಕಾರ ಸಂಘ ಗಳು, ಡಿಸಿಸಿ ಬ್ಯಾಂಕ್ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾ ಭಿವೃದ್ಧಿ ಬ್ಯಾಂಕ್‌ಗಳಿಂದ ಸಾಲಪಡೆದು ೨೦೨೩ರ ಡಿ.೩೧ಕ್ಕೆ ಸುಸ್ತಿಯಾಗಿರುವ ಮಧ್ಯಾಮವಧಿ ಮತ್ತು ಧೀರ್ಘಾವಧಿ ಮತ್ತು ಕೃಷಿ ಸಂಬಂಧಿತ ಸಾಲಗಳಿಗೆ ಈ ಬಡ್ಡಿ ಮನ್ನಾ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ಸಾವಿರಾರು ರೈತರು ಇದರ ಪ್ರಯೋಜನ ಪಡೆಯ ಲಿದ್ದಾರೆ. ಜಿಲ್ಲೆಯಲ್ಲಿ ಕೂಡ ನೂರಾರು ರೈತರು ಇದರ ಪ್ರಯೋಜನ ಪಡೆಯು ತ್ತಾರೆ. ರಾಜ್ಯ ಸರ್ಕಾರಕ್ಕೆ ಅಭಿನಂದನೆ ಅಂದರು.
ರೈತರು ಫೆ.೨೯ರೊಳಗೆ ಸುಸ್ತಿ ಯಾಗಿರುವ ಕಂತುಗಳ ಅಸಲುಗ ಳನ್ನು ಕಟ್ಟಬೇಕು. ಇದೊಂದು ಮಹತ್ವದ ಯೋಜನೆಯಾಗಿದೆ. ರಾಜ್ಯದಲ್ಲಿ ಉಂಟಾಗಿರುವ ಬರಗಾಲದ ಹಿನ್ನಲೆ ಯಲ್ಲಿ ರಾಜ್ಯ ಸರ್ಕಾರ ಸುಸ್ತಿದಾರ ರೈತರನ್ನು ಋಣಮುಕ್ತರನ್ನಾಗಿರುಸುವ ದೃಷ್ಠಿಯಲ್ಲಿ ಈ ಯೋಜನೆ ತಂದಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಹಾಗೆಯೇ ಕೃಷಿಯೇತರ ಸಾಲ ಗಳನ್ನು ಪಡೆದವರಿಗೂ ಬಡ್ಡಿ ಮನ್ನಾ ಯೋಜನೆಯನ್ನು ರಾಜೀ ಸಂದಾ ನದ ಇತ್ಯಾರ್ಥದ ಮೂಲಕ ಬಗೆಹರಿಸಿ ಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕಿನ ಎಲ್ಲಾ ಕ್ರಮಗಳ ಹೊರತಾಗಿಯೂ ವಸೂಲಾಗದಿರುವ ಅನುತ್ಪಾದಕ ಸಾಲಗಳನ್ನು ರಾಜಿ ಸಂಧಾನದ ಇತ್ಯಾರ್ಥದ ಮೂಲಕ ವಸೂಲಾತಿ ಮಾಡಿ ಬ್ಯಾಂಕಿನ ಆರ್ಥಿಕ ಸದೃಢತೆಯನ್ನು ಹೆಚ್ಚಿಸುವ ಉದ್ದೇಶ ದಿಂದ ಕೆಲವು ಷರತ್ತುಗಳನ್ನು ವಿಧಿಸಿ ಈ ಯೋಜನೆಯನ್ನು ಜರಿಗೆ ತರಲಾಗಿದೆ ಎಂದರು.
೨೦೨೩ರ ಮಾರ್ಚ್ ಅಂತ್ಯಕ್ಕೆ ಸಾಲವೂ ಸುಸ್ತಿಯಾಗಿರಬೇಕು. ಕನಿಷ್ಠ ೩ ವರ್ಷಗಳಾಗಿರಬೇಕು. ಈ ಯೋಜನೆಯೂ ಬಿಡಿ ವ್ಯಕ್ತಿಯ ಲ್ಲದೆ, ಸಹಕಾರ ಸಂಘಗಳು ಸ್ವಸ ಹಾಯ ಗುಂಪುಗಳು ಇತರ ಸಂಸ್ಥೆ ಗಳು ಪಡೆದಿರುವ ಎಲ್ಲಾ ರೀತಿಯ ಕೃಷಿ ಮತ್ತು ಕೃಷಿಯೇತರ ಸಾಲಗಳಿಗೆ ಷರತ್ತಿಗೊಳಪಟ್ಟು ಅನ್ವಯವಾಗು ತ್ತದೆ. ರಾಜೀ ಸಂಧಾನ ಇತ್ಯರ್ಥಕ್ಕೆ ಅರ್ಜಿ ಸಲ್ಲಿಸುವವರು, ಸಾಲ ಬಾಕಿಯ ಕನಿಷ್ಠ ಶೇ.೫೦ರಷ್ಟನ್ನು ಶಾಖೆಯ ಅಮಾನತ್ತು ಖಾತೆಗೆ ಜಮಾ ಮಾಡಿರಬೇಕು. ನ್ಯಾಯಾಲ ಯದಲ್ಲಿ ಪ್ರಕರಣವಿದ್ದರೆ ಸದರಿ ನ್ಯಾಯಾಲಯದ ಒಪ್ಪಿಗೆ ತೀರ್ಪು ಪಡೆಯಬೇಕು ಎಂದು ವಿವರಿಸಿ ದರು. ಯಶಸ್ವಿನಿ ಆರೋಗ್ಯ ರಕ್ಷಣ ಯೋಜನೆ ಕಳೆದ ೨೩ರಿಂದಲೇ ಪ್ರಾರಂಭವಾಗಿದ್ದು, ಜ.೩೧ರವರೆಗೆ ಮುಂದುವರೆಯಲಿದೆ. ಎಂದಿನಂತೆ ಗ್ರಾಮೀಣ ಪ್ರದೇಶದ ಸಂಘಗಳ ಸದಸ್ಯರುಗಳಿಗೆ ೪ ಸದಸ್ಯರ ಕುಟುಂಬಕ್ಕೆ ವಾರ್ಷಿಕ ೫೦೦ ರೂ. ನಗರ ಪ್ರದೇಶ ದವರಿಗೆ ೧೦೦೦ ರೂ. ವಂತಿಗೆ ನಿಗಧಿಪಡಿಸಲಾಗಿದೆ. ಪರಿಶಿಷ್ಟ ಪಂಗಡ ಮತ್ತು ವರ್ಗದವರ ಹಣವನ್ನು ಸರ್ಕಾರವೇ ಭರಿಸುತ್ತದೆ. ಇದರ ಚಿಕಿತ್ಸಾ ಅವಧಿ ಏ.೨೪ರಿಂದ ೨೦೨೫ ರ ಮಾರ್ಚವರೆಗೆ ಮುಂದುವರೆ ಯುತ್ತದೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ೨.೩೩ಲಕ್ಷ ಸದಸ್ಯರು ನೊಂದಾಯಿಸಿದ್ದಾರೆ.
ಅಲ್ಲದೇ ೩೬೫೦೦ ರೋಗಿಗಳು ೬೧ ಕೋಟಿ ಮೊತ್ತದ ಚಿಕಿತ್ಸೆಯನ್ನು ಪಡೆದಿದ್ದಾರೆ. ಇದರ ಸದುಪಯೋಗ ವನ್ನು ಕೂಡ ಪಡೆದುಕೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇ ಶಕರಾದ ಯೋಗೀಶ್, ಸುದೀರ್, ದುಗ್ಗಪ್ಪ ಗೌಡ, ಎಂ.ಡಿ. ವಾಸು ದೇವ್, ವಸೂಲಾಧಿಕಾರಿ ಸತೀಶ್ ಉಪಸ್ಥಿತರಿದ್ದರು.