ಜಿಲ್ಲಾ ಸುದ್ದಿತಾಜಾ ಸುದ್ದಿ

ಅಧಿಕೃತ ಚಿಟ್ಸ್ ಸಂಸ್ಥೆಗಳಲ್ಲಿ ವ್ಯವಹರಿಸಿ…

Share Below Link

ಶಿವಮೊಗ್ಗ: ಸಾರ್ವಜನಿಕರು ಅಧಿಕೃತ ಚಿಟ್ಸ್ ಕಂಪನಿಗಳಲ್ಲಿ ವ್ಯವಹಾರ ಮಾಡಬೇಕು ಎಂದು ಕರ್ನಾಟಕ ರಾಜ್ಯ ಚಿಟ್ಸ್ ಅಸೋಸಿ ಯೇಷನ್ ರಾಜ್ಯ ಅಧ್ಯಕ್ಷ ಟಿ.ಸಿ. ವಿಜಯಕುಮಾರ್ ಹೇಳಿದರು.
ಶಿವಮೊಗ್ಗ ಜಿ ಚಿಟ್ಸ್ ಅಸೋಸಿಯೇಷನ್ ಆಹ್ವಾನದ ಮೇರೆಗೆ ಶಿವಮೊಗ್ಗ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ಹಣಕಾಸಿನ ವ್ಯವ ಹಾರ ಆರಂಭ ಆಗುವ ಮೊದಲೇ ಚಿಟ್ ಫಂಡ್‌ಆರಂಭಆಗಿದ್ದು, ಅನಾದಿಕಾಲದಿಂದ ನಡೆದು ಕೊಂ ಡು ಬಂದಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ಇದರ ಬೆಲೆ ಅರಿಯದೆ ಬೇರೆ ಬೇರೆ ಪ್ರಕಾ ರದ ಹಣ ಕಾಸಿನ ವ್ಯವಹಾರದಲ್ಲಿ ತೊಡಗಿಸಿಕೊಂಡು ಚಿಟ್ ಫಂಡ್ ಉದ್ಯಮದಿಂದ ದೂರವಾಗುತ್ತಿ zರೆ ಎಂದು ತಿಳಿಸಿದರು.
ಅಧಿಕೃತಚಿಟ್ಸ್‌ವ್ಯವಹಾರದ ಮಹತ್ವ ತಿಳಿಸಿಮುಂದುವರೆಸಿ ಕೊಂಡು ಹೋಗುವಂತೆ ಮಾಡ ಲು ಶ್ರಮಿಸಬೇಕು. ಬಂಡವಾಳ ಹೆಚ್ಚಿದ್ದ ವರು ಉಳಿತಾಯ ಮಾಡಿ, ಬಂಡ ವಾಳ ಕೊರತೆ ಇರುವವರಿಗೆ ಅನುಕೂಲ ಮಾಡಿಕೊಡುವಲ್ಲಿ ಚಿಟ್ ಫಂಡ್ ಮಹತ್ವದ ಪಾತ್ರ ವಹಿಸುತ್ತದೆ.ಉದ್ಯಮವನ್ನು ಬೆಳೆ ಸಲು ಸರ್ಕಾರದ ಗಮನ ಸೆಳೆಯ ಲು ಪ್ರಯತ್ನಿಸುತ್ತೇವೆ ಎಂದರು.
ಮುಂದಿನ ದಿನಗಳಲ್ಲಿ ಉದ್ಯ ಮದಲ್ಲಿ ಇರುವಎಲ್ಲ ಸಂಸ್ಥೆಗಳನ್ನು ಒಗ್ಗೂಡಿಸಿ, ಜನರನ್ನು ಆಕರ್ಷಿ ಸುವ ನಿಟ್ಟಿನಲ್ಲಿ ಕೆಲಸ ರಾಜ್ಯ ಮಟ್ಟದ ಸಂಘದಿಂದಆಗುವಂತೆ ಪ್ರಯತ್ನಿಸಲಾಗುವುದುಎಂದು ಹೇಳಿದರು. ರಾಜ್ಯ ಸಂಘದ ಪದಾ ಧಿಕಾರಿ ಮತ್ತು ಶಿವಮೊಗ್ಗದ ಸಹ್ಯಾದ್ರಿಚಿಟ್ ಫಂಡ್ ಸಂಸ್ಥೆಯ ಮ್ಯಾನೇಜಿಂಗ್‌ಡೈರೆಕ್ಟರ್‌ರಮೇಶ್ ಭಟ್ ಮಾತನಾಡಿ, ಸರ್ಕಾರಿ ನೋಂದಾಯಿತ ಚಿಟ್ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವಂತೆ ಮತ್ತು ಚಿಟ್ ಫಂಡ್, ಉಳಿತಾಯ ಮತ್ತು ಆಪತ್ಕಾಲ ನಿಧಿ ಎನ್ನುವುದನ್ನು ಸಾರ್ವಜನಿಕರಿಗೆ ಅರಿವು ಮೂಡಿಸ ಬೇಕು ಎಂದರು.
ಶಿವಮೊಗ್ಗ ಜಿಚಿಟ್ಸ್ಟರ್ಸ್ ಅಸೋಸಿಯೇಷನ್ ಆಹ್ವಾನದ ಮೇರೆಗೆ ಕರ್ನಾಟಕ ಚಿಟ್ಸ್ಟರ್‍ಸ್ ಅಸೋಸಿಯೇಷನ್‌ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭೇಟಿ ನೀಡಿದರು.ಕರ್ನಾಟಕರಾಜ್ಯಚಿಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಮನೋಹರ್ ಮರಾಜಯ್ಯ, ಕಾರ್ಯದರ್ಶಿ ಹರೀಶ್, ಸಹ ಕಾರದ ಕಾವ್ಯಂಕ,ಖಜಂಚಿ ನರೇ ಂದ್ರ ಕೆ.ಎಸ್, ಬದರೀನಾಥ್, ಶಿವರಾಜು, ಜಿ.ವಿಜಯ್ ಕುಮಾ ರ್, ಮಂಜುನಾಥ್, ಪ್ರೇಮ್ ಕು ಮಾರ್, ಆದಿತ್ಯ, ಮೊದಲಾ ದವರು ಇದ್ದರು.