ಆರೋಗ್ಯಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಹಸಿದವರಿಗೆ ಅನ್ನ ನೀಡುವ ಪುಣ್ಯಕಾರ್ಯಕ್ಕೆ ಡಿಸಿ ಚಾಲನೆ

Share Below Link

ಶಿವಮೊಗ್ಗ: ಶಿವಮೊಗ್ಗದಲ್ಲಿ ಫುಡ್ ಆನ್ ವಾಲ್ ಯೋಜನೆ ಯಡಿಯಲ್ಲಿ ೨ನೇ ಹೋಟೆಲ್‌ನ್ನು ವಿನೋಬ ನಗರದ ಮೋರ್ ಬಳಿಯ ಸೌಂದರ್ಯ ವೆಜ್ ಹೋಟೆಲ್‌ನಲ್ಲಿ ಇಂದು ಡಿಸಿ ಡಾ. ಸೆಲ್ವಮಣಿ ಉದ್ಘಾಟಿಸಿದರು.
ಹಸಿದವರಿಗಾಗಿ ಉಚಿತ ಊಟ ನೀಡುವ ಯೋಜನೆಯು ಇದಾ ಗಿದ್ದು, ವಿವಿಧ ಕೆಲಸ ಕಾರಣಗಳಿ ಗಾಗಿ ನಗರಕ್ಕೆ ಹಳ್ಳಿಗಳಿಂದ ಬರುವ ಎಷ್ಟೋ ಜನರು ಹಸಿವಿನಿಂದ ಬಳಲುತ್ತಿರುತ್ತಾರೆ. ದೂರದೂರಿ ನಿಂದ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳು ಕೂಡ ಹಣಕಾಸಿನ ತೊಂದರೆಯಿಂದ ಊಟದಿಂದ ವಂಚಿತರಾಗುತ್ತಾರೆ. ಕೆಲವು ವೃದ್ಧರು ಮನೆಯಲ್ಲಿ ಆಹಾರ ತಯಾರಿಸಲು ಅಸಮರ್ಥ ರಾಗಿರುತ್ತಾರೆ. ಇಂತಹವರಿಗೆ ಯೂನಿವರ್ಸಲ್ ನಾಲೆಡ್ಜ್ ಸಂಸ್ಥೆಯು ಇ-ಫಡ್ ಆನ್ ವಾಲ್ ಯೋಜನೆ ಹಮ್ಮಿ ಕೊಂಡಿದ್ದು, ಹಸಿದವರಿಗೆ ಇದು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟರು.
ಸೌಂದರ್ಯ ಹೋಟೆಲ್‌ನಲ್ಲಿ ಪ್ರತಿದಿನ ಮಧ್ಯಾಹ್ನ ೧೨ರಿಂದ ಸಂಜೆ ೪ರವರೆಗೆ ಸಂಸ್ಥೆಯ ವತಿಯಿಂದ ೧೫ ಟೋಕನ್‌ಗಳನ್ನು ಉಚಿತವಾಗಿ ಫುಡ್ ವಾಲ್‌ಗೆ ಅಂಟಿಸಿದ್ದು, ಊಟ ಬೇಕಾದವರು ಅದನ್ನು ಪಡೆದು ಉಚಿತ ಊಟ ಪಡೆಯಬಹುದಾಗಿದೆ.
ರಾಜದ್ಯಂತ ಈಗಾಗಲೇ ಒಟ್ಟು ೧೧ ಹೋಟೆಲ್‌ಗಳು ಈ ಯೋಜನೆ ಯಡಿ ಭಾಗಿಯಾಗಿದ್ದು, ಶಿವಮೊಗ್ಗದಲ್ಲಿ ಈಗಾಗಲೇ ಎರಡು ಹೊಟೇಲ್ ಗಳಲ್ಲಿ ಈ ಅವಕಾಶ ಕಲ್ಪಿಸಲಾಗಿದೆ. ಯೂನಿವರ್ಸಲ್ ನಾಲೆಡ್ಜ್ ಸಂಸ್ಥೆ ಹಲವು ಮಾನದಂಡಗಳ ಪರಿಶೀ ಲನೆ ಬಳಿಕ ಹೋಟೆಲ್‌ಗಳ ಆಯ್ಕೆ ಮಾಡಿ ಈ ಸೌಲಭ್ಯವನ್ನು ಹಸಿದವ ರಿಗೆ ನೀಡುತ್ತದೆ. ಸಾರ್ವಜನಿಕರು ಕೂಡ ಇದರಲ್ಲಿ ಭಾಗವಹಿಸಬ ಹುದು. ತಮ್ಮ ಶಕ್ತ್ಯಾನುಸಾರ ಊಟಗಳನ್ನು ಪ್ರಾಯೋಜಿಸುವ ಮೂಲಕ ಹಸಿವುಮುಕ್ತ ಸಮಾಜ ನಿರ್ಮಾಣದಲ್ಲಿ ಭಾಗವಹಿಸಬಹು ದೆಂದರು. ಸೌಂದರ್ಯ ಹೋಟೆಲ್ ಮಾಲೀಕ ಜಯಚಂದ್ರ ಹೆಬ್ಬಾರ್, ಸಂಸ್ಥೆ ಪರವಾಗಿ ನಾಗರಾಜ್ ಶೆಟ್ಟರ್ ಇನ್ನಿತರರು ಉಪಸ್ಥಿತರಿದ್ದರು.