ಡಿ.೫: ಪೂಜ್ಯಶ್ರೀ ಬಸವ ಮರುಳಸಿದ್ದ ಸ್ವಾಮೀಜಿಗಳವರ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭ…
ಶಿವಮೊಗ್ಗ: ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮಿಗಳವರ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭವು ಡಿ.೫ರಂದು ನಡೆಯಲಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ್ರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೫ ಗಂಟೆಗೆ ಶಿವಮೊಗ್ಗದ ವೆಂಕಟೇಶ ನಗರದಲ್ಲಿರುವ ಬಸವ ಕೇಂದ್ರದಲ್ಲಿ ಬೆಕ್ಕಿನ ಕಲ್ಮಠದ ಜಗದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ತಮ್ಮ ಲಿಂಗ ಹಸ್ತದಿಂದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮಿಗಳವರಿಗೆ ಅನುಗ್ರಹಿಸಲಿzರೆ. ಈ ದೀಕ್ಷಾ ವಿಧಿ ವಿಧಾನದ ಸಂದರ್ಭದಲ್ಲಿ, ಈರ್ವರು ಶ್ರೀಗಳ ಜೊತೆಯಲ್ಲಿ ೬ ಷಡುಸ್ಥಲ ಮೂರ್ತಿಗಳು, ಒಬ್ಬರು ವಚನಮೂರ್ತಿಗಳು ಹಾಗೂ ನಾಡಿನ ಹಲವು ಸ್ವಾಮೀಜಿಗಳು ಉಪಸ್ಥಿತರಿದ್ದು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಡಲಿzರೆ ಎಂದರು.
೧೧ ಗಂಟೆಯಿಂದ ಮಾಚೇನ ಹಳ್ಳಿ ಡೈರಿ ಪಕ್ಕದಲ್ಲಿರುವ ಬಸವನೆಲೆಗೆ ನೀಡಿರುವ ಜಗದಲ್ಲಿ ನಡೆಯುವ ಬಹಿರಂಗ ಅಧಿವೇಶನ ದಲ್ಲಿ ಈರ್ವರು ಶ್ರೀಗಳ ಜೊತೆಯಲ್ಲಿ ನಿಟ್ಟೂರಿನ ಶ್ರೀ ಬ್ರಹ್ಮಶ್ರೀ ನಾರಾಯಣಗುರು ಸಂಸ್ಥಾನದ ಜಗದ್ಗುರು ಶ್ರೀ ರೇಣುಕಾನಂದ ಮಹಾಸ್ವಾಮೀಜಿ, ಹಾಗೂ ಕಡೂರಿನ ಯಳನಾಡು ಸಂಸ್ಥಾನ ಮಠದ ಜಗದ್ಗುರು ಶ್ರೀ eನಪ್ರಭು ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿzರೆ. ನಾಡಿನ ಹಲವು ಸ್ವಾಮೀಜಿಗಳ ಸಮ್ಮುಖದಲ್ಲಿ ಜರುಗುವ ಈ ಅಧಿವೇಶನವನ್ನು ಮಾಜಿ ಸಿಎಂ ಯಡಿಯೂರಪ್ಪ ಉದ್ಘಾಟಿಸಲಿದ್ದು, ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪ ಉಪಸ್ಥಿತರಿರುವರು. ಚಿನ್ಮಯನುಗ್ರಹ ದೀಕ್ಷೆಯ ಕುರಿತಾಗಿ ನಾಡಿನ ಹಿರಿಯ ಸಂಶೋಧಕ ಡಾ. ವೀರಣ್ಣ ರಾಜೂರ ಅವರು ವಿಶೇಷ ಉಪನ್ಯಾಸ ನೀಡಲಿzರೆ ಎಂದರು.

ಶಿವಮೊಗ್ಗ, ಚಿಕ್ಕಮಗಳೂರು ಜಿಗಳ ಹಾಲಿ ಹಾಗೂ ಮಾಜಿ ಶಾಸಕರುಗಳು, ಸಮಾಜದ ಮುಖಂಡರುಗಳು, ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿರುವರು. ವಿಶೇಷ ಆಹ್ವಾನಿತರಾಗಿ ಜಿಧಿಕಾರಿ, ಜಿ ರಕ್ಷಣಾಧಿಕಾರಿ, ಜಿಪಂ ಸಿಇಓ, ಶಿವಮೊಗ್ಗ ತಹಶೀಲ್ದಾರ್, ನಿದಿಗೆ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಭಾಗವಹಿಸಲಿzರೆ. ಈ ಅಧಿವೇಶನದಲ್ಲಿ ೨ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಬಸವ ತತ್ವದ ಪ್ರಕಾರ, ಚಿನ್ಮಯಾನುಗ್ರಹ ದೀಕ್ಷೆ ಎಂದರೆ, ಶ್ರೀಗಳಿಗೆ ಭಗವಂತನ ಚೈನ್ಮಯ (eನಸ್ವರೂಪಿ) ಅನುಗ್ರಹವನ್ನು ನೀಡುವ ಆಧ್ಯಾತ್ಮಿಕ ದೀಕ್ಷೆ. ಇದು ಭೌತಿಕ ಪೂಜ ಪ್ರಕ್ರಿಯೆಗಳಿಂದ ಮುಕ್ತವಾ ಗಿದ್ದು, ಜೀವಾತ್ಮ ಮತ್ತು ಪರಮಾತ್ಮನ ಏಕತೆಯನ್ನು ಅನುಭವಿಸುವ ಪರಮeನವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದರು.
ಚಿನ್ಮಯಾನುಗ್ರಹವು ಕೇವಲ ಭಕ್ತಿ ಪ್ರಕ್ರಿಯೆಯ ಆರಂಭವಲ್ಲ; ಅದು ಜೀವಾತ್ಮ ಮತ್ತು ಶಿವಾತ್ಮನ ಒಂದಾಗುವ ಪರಮಾವಸ್ಥೆ, ಚಿನ್ಮಯಾನುಗ್ರಹ ದೀಕ್ಷೆಯನ್ನು eನಪೂರ್ಣ ಗುರುಗಳು ಭಕ್ತನಿಗೆ ನೀಡುತ್ತಾರೆ, ಅದು ಶರಣನ ಜೀವನವನ್ನು ಆಧ್ಯಾತ್ಮಿಕ ಪಥದಲ್ಲಿ ಸಂಪೂರ್ಣವಾಗಿ ಪರಿವರ್ತಿ ಸುತ್ತದೆ. ಕುಲ, ಜತಿ ಅಥವಾ ಲಿಂಗ ಯಾವುದಕ್ಕೂ ಆದ್ಯತೆಯಿಲ್ಲ, ಅಂತರಂಗ ಶುದ್ದತೆ ಮಾತ್ರ ಮುಖ್ಯ. ಚಿನ್ಮಯಾನುಗ್ರಹವನ್ನು ಪಡೆದ ಗುರುಗಳು ತಮ್ಮ ಶಿಷ್ಯಂದಿರ ಆಧ್ಯಾತ್ಮಿಕ ಮಾರ್ಗದರ್ಶಕ, ಶಿಕ್ಷಕ, ಮತ್ತು ಪ್ರಾಣಸಹಾಯ ಆಗಿರು ತ್ತಾರೆ. ಶಿಷ್ಯಂದಿರನ್ನು ಅeನದಿಂದ eನಕ್ಕೆ ಅಶುದ್ಧತೆಯಿಂದ ಶುದ್ಧತೆಗೆ, ಮತ್ತು ದೈತದಿಂದ ಏಕತೆಗೆ ಕೊಂಡೊಯ್ಯುವಲ್ಲಿ ಗುರುಗಳು ತಮ್ಮ ಜೀವನವನ್ನು ಸಮರ್ಪಿಸುತ್ತಾರೆ ಎಂದರು.
ಪ್ರಮುಖರಾದ ಎಸ್.ಎಸ್. ಜ್ಯೋತಿ ಪ್ರಕಾಶ್, ಹೆಚ್.ಸಿ. ಯೋಗೇಶ್, ಎಸ್.ಪಿ.ದಿನೇಶ್, ಜಿ. ವಿಜಯ್ಕುಮಾರ್, ಬಾಳೆಕಾಯಿ ಮೋಹನ, ಟಿ.ಬಿ. ಜಗದೀಶ್, ಕಿರಣ್, ಮಹಾರುದ್ರ, ಹಾಲಸ್ವಾಮಿ ಉಪಸ್ಥಿತರಿದ್ದರು.