ಜಿಲ್ಲಾ ಸುದ್ದಿತಾಜಾ ಸುದ್ದಿ

ಶಾಸಕನಾಗಲು ವಿನೋಬನಗರ ನಿವಾಸಿಗಳ ಸಹಕಾರ- ಶಿವಾಲಯ ಈಶ್ವರನ ಆಶೀರ್ವಾದ ಕಾರಣ :ಚನ್ನಬಸಪ್ಪ

Share Below Link

ಶಿವಮೊಗ್ಗ: ಮಹಾನಗರ ಪಾಲಿಕೆ ಸದಸ್ಯನಾಗಲು ನಂತರ ವಿಧಾನ ಸಭಾ ಸದಸ್ಯನಾಗಲು ವಿನೋಬನಗರ ನಿವಾಸಿಗಳ ಸಹ ಕಾರ ಹಾಗೂ ಶಿವಾಲಯ ಈಶ್ವರನ ಆಶೀರ್ವಾದ ಕಾರಣ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿ ದರು.
ವಿನೋಬನಗರ ಶಿವಾಲಯ ದಲ್ಲಿ ಶಿವಾಲಯ ವೀರಶೈವ ಸಮಿತಿ ಯ ವತಿಯಿಂದ ಅಭಿನಂದನೆ ಸ್ವೀಕ ರಿಸಿ ಅವರು ಮಾತನಾಡಿ, ಇಲ್ಲಿನ ಸಮಿತಿಯವರು ಧಾರ್ಮಿಕ, ಸಾಂಸ್ಕತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿzರೆ. ದೇವಾಲಯದ ಅಭಿವೃದ್ಧಿ ನಿಟ್ಟಿನಲ್ಲಿ ಹೆಚ್ಚುವರಿ ಸ್ಥಳವನ್ನು ಕಮಿಟಿ ವತಿಯಿಂದ ಕೋ ರಿದ್ದರು. ಈ ನಿಟ್ಟಿನಲ್ಲಿ ಸ್ಥಳ ಕೊಡಿ ಸುವಲ್ಲಿ ಸರ್ಕಾರದ ಜೊತೆ ಪ್ರಯತ್ನ ನಡೆಸವುದಾಗಿ ಹೇಳಿದರು.

ನಮ್ಮ ಹಿಂದೂ ಸಂಸ್ಕೃತಿ ಸಂಪ್ರ ದಾಯವನ್ನು ಉಳಿಸಿ ಬೆಳೆಸಬೇಕು. ಮುಂದಿನ ಪೀಳಿಗೆಗೆ ಕಲಿಸಬೇಕು. ಇದು ಪುಣ್ಯ ಸ್ಥಳ. ಅನೇಕ ಜಗದ್ಗು ರುಗಳು, ಸಾಧು ಸಂತರು ಬಂದು ಆಶೀರ್‍ವಾದ ನೀಡಿದಂತಹ ಪುಣ್ಯ ಕ್ಷೇತ್ರ ಎಂದರು.
ಈ ಸಂದರ್ಭದಲ್ಲಿ ಪಿ.ಹೆಚ್. ಡಿ. ಪಡೆದ ಡಾ. ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಿವಾಲಯ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿಗಳು, ಪ್ರಧಾನ ಕಾರ್ಯ ದರ್ಶಿ ಮುರುಗೇಶ್ ಕೂಸ್ನೂರ್, ಸಹ ಕಾರ್ಯದರ್ಶಿ ಮಹೇಶ, ಪ್ರಧಾನ ಅರ್ಚಕ ರುದ್ರಯ್ಯ, ವಿನಯ್ ರಾಜು, ಪುಟ್ಟಯ್ಯ, ನಾಗರಾಜ್, ಚಂದ್ರಯ್ಯ ಮತ್ತಿತರರು ಪಾಲ್ಗೊಂಡಿದ್ದರು.