ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಹಿಂದೂ ಗಣಪತಿ ವಿಸರ್ಜನೆ ಯಶಸ್ಸಿಗೆ ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆ: ಚನ್ನಿ

Share Below Link

ಶಿವಮೊಗ್ಗ: ನಗರದ ಹಿಂದೂ ಮಹಾ ಮಂಡಳಿ ವತಿಯಿಂದ ನಡೆದ ೭೯ನೇ ವರ್ಷದ ಗಣೋ ಶೋತ್ಸವ ಮೆರವಣಿಗೆಯು ಅತ್ಯಂತ ವಿಜೃಂಭಣೆಯಿಂದ ಯಾವುದೇ ಅಹಿತಕರ ಘಟನೆ ಇಲ್ಲದೆ ಸಾರ್ವಜನಿಕರ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಕಾರ ದಿಂದ ನೆರವೇರಿದ್ದು ಯಶಸ್ಸಿಗೆ ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆಗಳು ಎಂದು ಚನ್ನ ಬಸಪ್ಪ ಹೇಳಿzರೆ.
ಅವರು ಇಂದು ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ವರ್ಷದಿಂದ ವರ್ಷಕ್ಕೆ ಗಣಪತಿಯ ಮೆರವಣಿಗೆ ಯಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುತ್ತಿzರೆ. ನಗರದ ಎ ಜನರು ಪಕ್ಷ ಭೇದ ಮರೆತು ಒಗ್ಗಟ್ಟಿನಿಂದ ಈ ಮೆರವಣಿಗೆಗೆ ಶಕ್ತಿ ತುಂಬಿzರೆ. ಕೇಸರಿ ಅಲಂಕಾರ ಸಮಿತಿ, ಶಿವಪ್ಪ ನಾಯಕ ಹೂವಿನ ಮಾರುಕಟ್ಟೆ ಸಂಘ ಸೇರಿದಂತೆ ಅನೇಕ ಸಂಘಟನೆಗಳು ನಗರದ ಅಲಂಕಾರಕ್ಕೆ ಮತ್ತು ದಾಸೋಹಕ್ಕೆ ಸ್ವಯಂಪ್ರೇರಿತವಾಗಿ ನೆರವು ನೀಡಿವೆ. ಸಾವಿರಾರು ಕಲಾತ್ಮಕ ಹಾರಗಳನ್ನು ನಾಗರಿಕರು ಗಣಪತಿ ಗೆ ಸಮರ್ಪಿಸಿzರೆ. ಬೆಕ್ಕಿನಕಲ್ಮಠದ ಮುರುಘರಾಜೇಂದ್ರ ಶ್ರೀಗಳು ಮೆರವಣಿಗೆಗೆ ಚಾಲನೆ ನೀಡಿ ಆಶೀರ್ವಾದ ಮಾಡಿದರು. ಭಕ್ತಾದಿಗಳಿಗೆ ರಸ್ತೆಯ ಇಕ್ಕೆಲಗಳಲ್ಲಿ ಪ್ರಸಾದ, ನೀರು, ಮಜ್ಜಿಗೆ ಮತ್ತು ಸಿಹಿ ವಿತರಿಸಿ ಶಿವಮೊಗ್ಗದ ಸಂಸ್ಕೃತಿಯ ಹೆಗ್ಗಳಿಕೆಯನ್ನು ಬಿಂಬಿಸಿzರೆ. ಗೋಪಿ ವೃತ್ತದಲ್ಲಿ ಶಿವಮೊಗ್ಗ ಗಣೇಶೋತ್ಸವ ಸಮಿತಿ ವತಿಯಿಂದ ವಿಶೇಷ ಕಾರ್ಯಕ್ರ ಮೆರವಣಿಗೆಗೆ ಮೆರುಗು ನೀಡಿತ್ತು. ಕುಟುಂಬ ಸಮೇತರಾಗಿ ತಂಡೋ ಪತಂಡವಾಗಿ ಜಿಯ ಎ ಭಾಗಗಳಿಂದಲೂ ಈ ಬಾರಿಯ ಮೆರವಣಿಗೆಯಲ್ಲಿ ಜನರು ಭಾಗಿ ಯಾಗಿದ್ದರು. ನಾಗರಿಕರ ಅಪೇಕ್ಷೆಗೆ ತಕ್ಕಂತೆ ರಾಜಬೀದಿ ಉತ್ಸವ ನಡೆದಿದೆ. ಅ.೧ರಂದು ನಡೆಯುವ ಈದ್‌ಮಿಲಾದ್ ಕೂಡ ಯಶಸ್ವಿ ಯಾಗಲಿ. ಶಿವಮೊಗ್ಗದ ಕಲಾವಿ ದರೇ ನರಸಿಂಹ ಅಲಂಕಾರವನ್ನು ನಿರ್ಮಿಸಿ ಜನಾಕರ್ಷಣೆಗೆ ಕಾರಣ ವಾಗಿದ್ದಲ್ಲದೆ ಮಾಧ್ಯಮಗಳ ಪ್ರಚಾರ ಕೂಡ ಯಶಸ್ವಿಗೆ ಕಾರಣ ವಾಯಿತು. ಎ ರಾಜಕೀಯ ಪಕ್ಷದವರು ಕೂಡ ಪ್ರಸಾದ ವ್ಯವಸ್ಥೆ ಕಲ್ಪಿಸಿ ಒಗ್ಗಟ್ಟಿನಿಂದ ಈ ಹಿಂದೂ ಮಹಾಸಭಾ ಗಣಪತಿಯ ಮೆರವ ಣಿಗೆ ಯಶಸ್ಸಿಗೆ ಕಾರಣರಾದರು. ಸಮಸ್ತ ನಾಗರಿಕರಿಗೆ ಎ ರಾಜ ಕೀಯ ಪಕ್ಷದ ಮುಖಂಡರಿಗೆ, ಕಲಾವಿದರಿಗೆ, ದಾನಿಗಳಿಗೆ ಮತ್ತು ಮಾಧ್ಯಮದವರಿಗೆ, ಸಾರ್ವಜನಿ ಕರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಮುಖ ರಾದ eನೇಶ್ವರ್, ಪ್ರಭಾಕರ್, ಜಗದೀಶ್, ಮೋಹನ್ ರೆಡ್ಡಿ, ಅಣ್ಣಪ್ಪ, ಬಾಲು ಮೊದಲಾದವರಿ ದ್ದರು.