ಜಿಲ್ಲಾ ಸುದ್ದಿತಾಜಾ ಸುದ್ದಿ

ಆತ್ಮಹತ್ಯೆ ತಡೆಯಲು ಬೇಕು ಅನುಭೂತಿಯುಳ್ಳ ಆಪ್ತ ಸಮಾಲೋಚನೆ :ಸಿ.ಎನ್.ಚಂದನ್

Share Below Link

ಶಿವಮೊಗ್ಗ : ನಗರದ ಮಾನ ಸಟ್ರಸ್ಟ್‌ನ ಕಟೀಲ್‌ಅಶೋಕ್ ಪೈ ಸ್ಮಾರಕ ಸಂಸ್ಥೆಯು ಶಿವಮೊಗ್ಗ ಜಿ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಕಾಲೇಜಿನ ಬಹುಮುಖಿ ಸಭಾಂಗ ಣದಲ್ಲಿ ಆಚರಿಸಲಾಯಿತು.
ಈ ದಿನದ ಪ್ರಯುಕ್ತ ಕಾಲೇ ಜಿನ ಮನೋವಿeನ ಹಾಗೂ ಕ್ಲಿನಿಕಲ್ ಸೈಕಾಲಜಿ ವಿದ್ಯಾರ್ಥಿಗಳು ಒಂದು ವಾರಗಳ ಕಾಲ ವಿವಿಧ ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳಲಾ ಗಿತ್ತು.ಸಮಾರೋಪ ಕಾರ್ಯಕ್ರ ಮವನ್ನು ನಡೆಸಿದರು. ಈ ಕಾರ್‍ಯ ಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಸಿ.ಎನ್.ಚಂದನ್ ರವರು ಸಮಾ ರೋಪ ನುಡಿಗಳನ್ನಾಡಿದರು.
ಅವರು ಆತ್ಮಹತ್ಯೆತಡೆಯೆಂ ಬುದು ನನ್ನಂತೆ ನೀನು ಬದುಕು ಎಂಬ ಸಂದೇಶವನ್ನು ನೀಡಬಲ್ಲ ಒಂದು ಮಾನವೀಯ ಪರಿಕಲ್ಪನೆ ಆತ್ಮಹತ್ಯೆಯೊಂದು ಮನೋ ಸಾಮಾಜಿಕ ಸಂಕೀರ್ಣ ಸಮಸ್ಯೆ. ಕಾನೂನಿನಲ್ಲಿ ಇದೊಂದು ಅಪ ರಾಧವೆಂದು ಪರಿಗಣಿಸಲ್ಪಟ್ಟರೂ ಆತ್ಮಹತ್ಯೆಯ ಯೋಚನೆಗಳು ಒಂದು ಮಾನಸಿಕ ಸಮಸ್ಯೆಯೂ ಹೌದುಆದುದರಿಂದ ಅತ್ಮಹತ್ಯೆಗೆ ಪ್ರಯತ್ನಿಸುವ ವ್ಯಕ್ತಿಗಳಿಗೆ ಮೂಲ ಭೂತವಾಗಿ ಮಾನಸಿಕ ತಜ್ಞರಿಂದ ಅನುಭೂತಿಯುಳ್ಳ ಚಿಕಿತ್ಸೆಯು ದೊರಕಬೇಕು. ಆತ್ಮಹತ್ಯೆ ತಡೆಯು ವಲ್ಲಿ ಸಮಾಜದ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಮಾತನಾ ಡಬೇಕು ಮತ್ತು ವರ್ತಿಸಬೇಕು. ಅತಿಯಾದ ಅಸೂಯೆ, ಅತಿ ಯಾದ ನಿರೀಕ್ಷೆಗಳು ಹಾಗೂ ಬದು ಕಿನ ಕುರಿತು ಅನಗತ್ಯ ಆಲೋಚನೆ ಗಳು ಆತ್ಮಹತ್ಯೆಗೆಕಾರಣ ಅಲ್ಲದೆ ಇಂದಿನ ಸಮಾಜದಲ್ಲಿ ಹೆಚ್ಚುತ್ತಿ ರುವ ಸ್ವಾರ್ಥಪರತೆಅನಗತ್ಯ ವಸ್ತುಗಳ ಕುರಿತು ಅತಿ ಆಸೆ ಹಾಗೂ ವಿವಿಧ ಆಮಿಷಗಳಿಗೆ ಬಲಿಯಾ ಗುವ ಪರಿಸ್ಥಿತಿಗಳು ಆತ್ಮಹತ್ಯೆಯ ಪ್ರಮಾಣವನ್ನು ಹೆಚ್ಚಿಸಿದೆ. ಆದ್ದ ರಿಂದ ಜೀವನ ಮಲ್ಯದ ಕುರಿತು ಸಂಭಾಷಣೆ, ಪರಸ್ಪರ ಅವಲಂಬ ನೆಯ ಕುರಿತು ಗೌರವ ಋಣಾ ತ್ಮಕತೆಯಿಂದ ದೂರವಿರಬಲ್ಲ ಮನಸ್ಥಿತಿ ಹೆಚ್ಚಾಗಬೇಕಿದೆ. ಇದೆಲ್ಲ ದರಜೊತೆಗೆ ಮನೋ ಚಿಕಿತ್ಸೆಯ ಸೌಲಭ್ಯ ಹಾಗೂ ಆಪ್ತಸಮಾ ಲೋಚನೆ ಎ ಕ್ಷೇತ್ರಗಳಲ್ಲೂ ದೊರಕುವಂತಾಗಬೇಕುಎಂದು ಹಿರಿಯ ನ್ಯಾಯಾಧೀಶರು ತಿಳಿಸಿ ದರು.
ಕಾರ್ಯಕ್ರಮದಲ್ಲಿಕ್ಲಿನಿಕಲ್ ಸೈಕಾಲಜಿ ವಿಭಾಗದ ಮುಖ್ಯಸ್ಥ ರಾದಡಾ. ಪುಷ್ಟಲತಾರವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಆತ್ಮಹತ್ಯೆಯ ಯೋಚನೆ ಗಳುಳ್ಳ ವ್ಯಕ್ತಿಯನ್ನುಗುರುತಿಸುವ ಮತ್ತು ವಿಶ್ಲೇಷಿಸುವ ಕಾರ್ಯದ ಮೂಲಕ ಮಾನಸಿಕ ತಜ್ಞರು ಅದನ್ನು ತಡೆಯುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಎಂ.ಸಿ.ಸಿ.ಎಸ್. ನ ನಿರ್ದೇಶಕ ರಾದ ಡಾ. ರಾಜೇಂದ್ರಚನ್ನಿರವರು ಮಾತನಾಡಿ ಪ್ರತಿ ೬೦ ಸೆಕೆಂಡು ಗಳಿಗೆ ೧ ರಂತೆ ವಿಶ್ವಾದ್ಯಂತ ನಡೆ ಯುವ ಆತ್ಮಹತ್ಯೆಯ ಸಮಸ್ಯೆಯು ಒಂದು ತೀವ್ರ ತರವಾದ ಸಮಸ್ಯೆ ಅದನ್ನು ತಡೆಯುವುದು ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಮಾನಸ ಸಂಸ್ಥೆಯಡಾ.ರಜನಿ ಎ ಪೈ, ಕ್ಲಿನಿಕಲ್ ಸೈಕಾಲಜಿ ವಿಭಾಗದ ಸಂಯೋಜಕರಾದ ಸಿಸ್ಟರ್ ಮಾರಿಇವ್ಲಿನ್ ಹಾಗೂ ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಡಾ. ಸಂಧ್ಯಾಕಾವೇರಿ ಕೆ.ಅಧ್ಯಕ್ಷತೆ ವಹಿಸಿದ್ದರು .ಈ ಕಾರ್ಯಕ್ರಮ ದಲ್ಲಿ ಭಿತ್ತಿಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಕು ಆಲಿಯಾ ಹಾಗೂ ದ್ವಿತೀಯ ಬಹು ಮಾನ ವನ್ನು ಕು.ಅಕ್ಷತಾ ಕಾಮತ್ ಪಡೆದರು.ಕು.ಸ್ನೇಹಾ ನಿರೂಪಿಸಿ, ಎಂ.ಫಿಲ್ ಸೈಕಾಲಜಿ ವಿದ್ಯಾರ್ಥಿ ಗಳು ಪ್ರಾರ್ಥಿಸಿ, ಉಪನ್ಯಾಸಕ ರಾದ ಶ್ರೀಮತಿ ಶ್ರೀದೇವಿ ವಂದಿಸಿ ದರು.ಇದೇ ಸಂದರ್ಭದಲ್ಲಿ ಎಂ. ಎಸ್ಸಿ ಮನ:ಶಾಸ್ತ್ರದ ಪ್ರಥಮ ವರ್ಷದ ವಿದ್ಯಾರ್ಥಿಗಳು ಆತ್ಮಹತ್ಯೆಯ ಕುರಿತು ಕಿರು ನಾಟಕ ವನ್ನು ಪ್ರದರ್ಶಿಸಿದರು.