ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಮಕ್ಕಳೇ ಜಾಲತಾಣಗಳ ಜಾಲಕ್ಕೆ ಸಿಲುಕದಿರಿ: ಬಿಂದುಮಣಿ…

Share Below Link

ಶಿವಮೊಗ್ಗ: ಸಾಮಾಜಿಕ ಜಲತಾಣಗಳು ಆರಂಭವಾದ ಮೇಲೆ ಮಕ್ಕಳು ವ್ಯಸನಿಗಳಾಗುತ್ತಿದ್ದಾರೆ. ಈ ಬಗ್ಗೆ ಪೋಷಕರು ಮತ್ತು ಶಿಕ್ಷಕರು ಎಚ್ಚರವಹಿಸಬೇಕಾದ ಅವಶ್ಯಕತೆ ಇದೆ ಎಂದು ಐಪಿಎಸ್ ಅಧಿಕಾರಿ ಹಾಗೂ ವಿನೋಬನಗರ ಠಾಣೆಯ ಎಎಸ್‌ಪಿ ಬಿಂದುಮಣಿ ಹೇಳಿದರು.
ಅವರು ಇಂದು ಕಲ್ಲಹಳ್ಳಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿ ಸಿದ್ದ ಸ್ವರಕ್ಷಾ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಸಂವಾದ ಮಾಡುತ್ತಲೇ ಮಾತನಾಡಿದ ಅವರು, ಇತ್ತೀಚೆಗೆ ಮಕ್ಕಳು ಮೊಬೈಲ್ ದಾಸರಾಗುತ್ತಿದ್ದಾರೆ. ಇದರಿಂದ ಹೊರಬರಲು ಪೋಷಕರು ಮತ್ತು ಶಿಕ್ಷಕರು ಪ್ರಯತ್ನಿಸಬೇಕಾಗಿದೆ. ಮಕ್ಕಳ ಚಟುವಟಿಕೆಗಳ ಬಗ್ಗೆ ಸದಾ ಎಚ್ಚರದಿಂದ ಇರಬೇಕು ಎಂದರು.
ಸಾಮಾಜಿಕ ಜಲತಾಣಗಳಲ್ಲಿ ೧೮ ವರ್ಷಗಳಿಗಿಂತ ಕೆಳಗಿನವರು ಅಕೌಂಟ್ ತೆರೆಯುವುದು ಕಾನೂನು ಬಾಹಿರವಾಗಿರುತ್ತದೆ. ಮಕ್ಕಳು ಈ ರೀತಿ ಅಕೌಂಟ್ ತೆರೆದಿದ್ದರೆ ತಕ್ಷಣವೇ ಡಿಲೀಟ್ ಮಾಡಿ. ತೀರಾ ಅವಶ್ಯಕತೆಯಿದ್ದರೆ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಪೋಷಕರ ಅಕೌಂಟ್‌ನಲ್ಲಿಯೇ ವೀಕ್ಷಿಸ ಬಹುದು. ಅದನ್ನು ಬಿಟ್ಟು ತಾವೇ ಅಕೌಂಟ್ ತೆರೆಯುವುದು ಅಪರಾಧ ಎಂದರು.
ಮೊಬೈಲ್ ಹೆಚ್ಚು ಬಳಸುವುದ ರಿಂದ ಮೆದುಳಿನ ಸಾಮರ್ಥ್ಯ ಕಡಿಮೆ ಯಾಗುತ್ತದೆ ಕಣ್ಣುಗಳಿಗೆ ತೊಂದರೆ ಯಾಗುತ್ತದೆ. ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅನವಶ್ಯಕ ವಾಗಿ ಬೆಟ್ಟಿಂಗ್‌ನಂತಹ ಜೂಜಟಕ್ಕೂ ಒಳಗಾಗಿ ಬದುಕನ್ನೇ ನಾಶ ಮಾಡಿ ಕೊಳ್ಳುತ್ತೀರಿ ಎಂದರು.
ಸಾಮಾಜಿಕ ಜಲತಾಣಗಳಲ್ಲಿ ಬರುವ ಯಾವುದೇ ಹೊಸಬರ ಸ್ನೇಹ ಮಾಡಬೇಡಿ. ತಮ್ಮ ವೈಯಕ್ತಿಕ ವಿವರಗಳನ್ನು ನೀಡಬೇಡಿ. ಲೊಕೇಶನ್‌ಗಳನ್ನು ಕಳಿಸಬೇಡಿ. ಕಿರಿಕಿರಿಯಾದರೆ ಅವರನ್ನು ಬ್ಲಾಕ್ ಮಾಡಿ ಅಥವಾ ಪೋಷಕರಿಗೆ ತಿಳಿಸಿ ಎಂದು ಸಲಹೆ ನೀಡಿದರು.
ತಂದೆ-ತಾಯಿಗಳಿಗೆ ಗೌರವ ಕೊಡಿ. ಎದುರು ಮಾತನಾq ಬೇಡಿ. ನಿಮ್ಮ ಓದಿನ ಕಡೆ ಗಮನಹರಿಸಿ. ತಂದೆ ತಾಯಿಗಳ ಕಷ್ಟಗಳನ್ನು ಅರಿತುಕೊಳ್ಳಿ. ಸಮಾಜದಲ್ಲಿ ಒಳ್ಳೆಯವರಾಗಿ ಬಾಳಿ. ತರಗತಿಗಳಿಗೆ ಗೈರುಹಾಜ ರಾಗಬೇಡಿ. ರಾತ್ರಿ ಹೊತ್ತು ಒಬ್ಬರೇ ಓಡಾಡಬೇಡಿ. ಅಕಸ್ಮಾತ್ ತೊಂದರೆಯ ಸನ್ನಿವೇಶ ವಿದ್ದಾಗ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಎನ್. ರಮೇಶ್ ಮಾತನಾಡಿ, ಮಕ್ಕಳ ಅಭಿವೃದ್ಧಿಗಾಗಿ ಸಂಸ್ಥೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಬಿಂದುಮಣಿಯವರು ಮಕ್ಕಳೊಡನೆ ಮಕ್ಕಳಾಗಿ ಕಾನೂನಿನ ಬಗ್ಗೆ ಜಗೃತಿ ಮೂಡಿಸಿ ಮಕ್ಕಳಿಗೆ ಸ್ಫೂರ್ತಿ ಯಾಗಿದ್ದಾರೆ. ಸಾಧನೆಯಿಂದ ಎಲ್ಲವೂ ಸಾಧ್ಯ ಎಂದರು.
ಪ್ರಾಂಶುಪಾಲೆ ಸುನೀತಾದೇವಿ ಅವರು ಮಾತನಾಡಿ, ಬಹಳ ಮಕ್ಕಳು ಮೊಬೈಲ್ ಕೊಡದಿದ್ದರೆ ಊಟ ಬಿಡುವುದು, ಮನೆ ಬಿಟ್ಟು ಹೋಗುವುದು, ಬೆದರಿಕೆ ಹಾಕುವುದು, ಎದುರು ಉತ್ತರ ಕೊಡುವುದು ಮಾಡುತ್ತಿದ್ದಾರೆ. ಅನೇಕ ಪೋಷಕರು ಈ ಬಗ್ಗೆ ತಮಗೆ ದೂರು ನೀಡಿದ್ದಾರೆ. ಎಲ್ಲರೂ ಮೊಬೈಲ್ ಗಳನ್ನು ಅಗತ್ಯ ಮತ್ತು ಅವಶ್ಯಕತೆಗಳಿಗೆ ತಕ್ಕಂತೆ ಉಪಯೋಗಿಸಿ ಎಂದರು.
ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಪ್ರದೀಪ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.