ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ನಕಲಿ ದಾಖಲೆ ಸೃಷ್ಠಿಸಿ ವಂಚನೆ: ವಿಜಯಲಕ್ಷ್ಮಿ ಆರೋಪ

Share Below Link

ಶಿವಮೊಗ್ಗ : ಅಡಿಕೆ ತೋಟಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜೀವ ಬೆದರಿಕೆ ಹಾಕಿರುವವರ ಮೇಲೆ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಬೊಮ್ಮನಕಟ್ಟೆ ಆಶ್ರಯ ಬಡಾವ ಣೆಯ ವಿಜಯಲಕ್ಷ್ಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಮ್ಮ ತಾಯಿಯ ಹೆಸರಿನಲ್ಲಿ ಕೂಡ್ಲಿಗೆರೆ ಹೋಬಳಿಯ ಕೆಂಚಮ್ಮನಹಳ್ಳಿ ಗ್ರಾಮದ ಸ.ನಂ. ೩ರಲ್ಲಿ ೨.೨೫ ಎಕರೆ ಅಡಿಕೆ ತೋಟವಿತ್ತು. ಅವರು ಈ ಆಸ್ತಿಯನ್ನು ನನಗೆ ಹಾಗೂ ನನ್ನ ತಂಗಿದೆ ೨೦೨೨ರ ಜ.೩೧ ರಂದು ಜಂಟಿ ವಿಲ್ ಮಾಡಿಸಿ ರಿಜಿಸ್ಟ್ರರ್ ಮಾಡಿಸಿರುತ್ತಾರೆ. ಆದರೆ ಇದಕ್ಕೂ ಮುಂಚೆ ಈ ತೋಟವನ್ನು ಗೋವಿಂದಪ್ಪ ಎನ್ನುವವರ ಹೆಸರಿಗೆ ಭೋಗ್ಯ ಹಾಕಿದ್ದರು. ಈಗ ಅವರು ಈ ಜಮೀನನ್ನು ಕಬಳಿಸಲು ಹೊರಟಿzರೆ ಎಂದು ದೂರಿದರು.
ನಮ್ಮ ತಾಯಿಯವರು ೨೦೨೪ರ ಏ.೭ರಂದು ನಾವಿದ್ದ ಮನೆಯಲ್ಲಿಯೇ ಮೃತಪಟ್ಟಿರು ತ್ತಾರೆ. ಆದರೆ ಈ ಗೋವಿಂದಪ್ಪ ಎಂಬುವವರು ನಮ್ಮ ತಾಯಿ ೨೦೦೬ರಲ್ಲಿಯೇ ಮರಣ ಹೊಂದಿ zರೆ ಎಂದು ಸುಳ್ಳು ದಾಖಲೆ ಸೃಷ್ಟಿಸಿzರೆ. ಅಷ್ಟೇ ಅಲ್ಲ ನಮಗೆ ವಿಲ್ ಮಾಡಿಟ್ಟಿzರೆ ಎಂದು ಕೂಡ ನಕಲಿ ದಾಖಲೆ ಸೃಷ್ಟಿಸಿzರೆ. ಈಗ ಕೇಳಲು ಹೋದರೆ ಜೀವ ಬೆದರಿಕೆ ಹಾಕುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.
ನಕಲಿ ದಾಖಲೆ ಸೃಷ್ಟಿಸಿದ ಮರಣಪತ್ರ ನೀಡಿದ ಭದ್ರಾವತಿ ನಗರಸಭೆ ಅಧಿಕಾರಿಗಳ ವಿರುದ್ಧ ಹಾಗೂ ನಕಲಿ ವಿಲ್ ಮಾಡಿಸಿದ ಅಧಿಕಾರಿಗಳ ವಿರುದ್ಧ ಮತ್ತು ಜಮೀನು ಕಬಳಿಸಲು ಹೊರಟಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮತ್ತು ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಭದ್ರಾವರಿ ಹಳೆನಗರ ಠಾಣೆ ಪೊಲೀಸರಿಗೆ ದೂರು ನೀಡಲಾ ಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಲಮೇಲು ಇದ್ದರು.