ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಡಿವಿಎಸ್ ಪ್ರೌಢಶಾಲಾ ವಿದ್ಯಾರ್ಥಿಗಳ ಕೈಯಲ್ಲಿ ಅರಳಿದ ಚಂದ್ರಯಾನ; ಪಾರ್ಲಿಮೆಂಟ್; ಇತ್ಯಾದಿ…

Share Below Link

ಶಿವಮೊಗ್ಗ: ಚಂದ್ರಯಾನ ೩ರ ಯಶಸ್ಸು, ಹೊಸ ಪಾರ್ಲಿ ಮೆಂಟ್, ಕವಿಮನೆ, ವಿeನ ಸೇರಿದಂತೆ ವೈವಿಧ್ಯ ವಿಷಯಗಳ ಕುರಿತು ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ವಸ್ತು ಪ್ರದರ್ಶನ ಗಮನ ಸೆಳೆಯಿತು.


ದೇಶಿಯ ವಿದ್ಯಾಶಾಲಾ ಸಮಿತಿ ಯ ಡಿವಿಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ಆಯೋಜಿ ಸಿದ್ದ ವಸ್ತು ಪ್ರದರ್ಶನಕ್ಕೆ ಸಾರ್ವ ಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪರಮೇಶ್ವರಪ್ಪ ಚಾಲನೆ ನೀಡಿದರು.
ಡಿವಿಎಸ್ ಪ್ರೌಢಶಾಲಾ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ೨೦೦ಕ್ಕೂ ಹೆಚ್ಚು ಮಾದರಿಗಳನ್ನು ದೇಶಿಯ ವಿದ್ಯಾಶಾಲಾ ಸಮಿತಿ ಕಾರ್‍ಯದರ್ಶಿ ಎಸ್.ರಾಜಶೇಖರ್ ಸೇರಿದಂತೆ ತೀರ್ಪುಗಾರರು ವೀಕ್ಷಿಸಿ ದರು. ವಿದ್ಯಾರ್ಥಿಗಳು ಅತ್ಯಂತ ಕ್ರೀಯಾತ್ಮಕ ಆಲೋಚನೆಗಳ ಮೂಲಕ ಮಾದರಿಗಳನ್ನು ಸಿದ್ಧ ಪಡಿಸಿದ್ದರು.
ಹೊಸ ಪಾರ್ಲಿಮೆಂಟ್, ಸರ್ಕಾರಿ ಕಟ್ಟಡ, ಕೃಷಿ, ಹನಿ ನೀರಾವರಿ ಪದ್ಧತಿ, ವಾಯ ಮಾಲಿನ್ಯ, ಪರಿಸರ ಹಾನಿ, ಪವನ ಶಕ್ತಿ, ಜಲಾಮುಖಿ, ಟ್ರಾಫಿಕ್ ನಿರ್ವಹಣೆ, ಸೋಲಾರ್ ಶಕ್ತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಮಾದರಿ ಸಿದ್ಧಪಡಿಸುವ ಜತೆಯಲ್ಲಿ ವಿವರಣೆ ನೀಡಿದರು.
ವಿeನ, ಗಣಿತ, ಜೀವಶಾಸ್ತ್ರ, ಭೂಗೋಳ, ಐತಿಹಾಸಿಕ ವಿಷಯ ಗಳ ಕುರಿತಾದ ಮಾದರಿಗಳನ್ನು ವಿದ್ಯಾರ್ಥಿಗಳು ಸಿದ್ಧಪಡಿಸಿದ್ದರು. ಭೂಮಿಯ ಚಲನೆ, ಚಂದ್ರ, ಗಣಿತದ ಸುಲಭ ಕಲಿಕಾ ವಿಧಾನ, ನೀರಿನ ಸಮರ್ಪಕ ನಿರ್ವಹಣೆ, ಸೌರಮಂಡಲದ ಬಗ್ಗೆ ವಿವರಿಸುವ ಮಾದರಿಗಳು ಗಮನ ಸೆಳೆಯಿತು.
ಭಾರತ ಮಾತೆ, ರಾಣಿ ಅಬ್ಬಕ್ಕ, ಅಕ್ಕಮಹಾದೇವಿ ಸೇರಿದಂತೆ ಐತಿಹಾಸಿಕ ವ್ಯಕ್ತಿಗಳ ವೇಷಭೂಷಣ ಗಳನ್ನು ವಿದ್ಯಾರ್ಥಿಗಳು ಧರಿಸಿ ದ್ದರು. ಜೈಪುರ, ಕುಪ್ಪಳ್ಳಿಯ ಕವಿ ಮನೆ, ಅಂಜನಾದ್ರಿ, ಇಂಡಿಯಾ ಗೇಟ್ ಸೇರಿದಂತೆ ಪ್ರಸಿದ್ಧ ಸ್ಥಳಗಳ ಬಗ್ಗೆ ಮಾದರಿಗಳನ್ನು ವಿದ್ಯಾರ್ಥಿ ಗಳು ಸಿದ್ಧಪಡಿಸಿದ್ದರು.
ಸ್ವಾತಂತ್ರ್ಯ ಚಳವಳಿ, ಸ್ವದೇಶಿಯ ಉತ್ಪನ್ನ, ರಾಜ್ಯದ ವಿವಿಧ ಜಿಗಳಲ್ಲಿ ಬೆಳೆಯುವ ಪ್ರಮುಖ ಬೆಳೆಗಳ ಮಾಹಿತಿ, ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ, ಐತಿಹಾಸಿಕ ಘಟನೆಗಳ ಚಿತ್ರಣ ಕುರಿತಾಗಿ ವಿದ್ಯಾರ್ಥಿಗಳು ವಸ್ತು ಪ್ರದರ್ಶನದಲ್ಲಿ ಮಾದರಿ ಗಳನ್ನು ಪ್ರದರ್ಶಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ, ದೇಶಿಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್. ರಾಜ ಶೇಖರ್, ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಉಪಪ್ರಾಚಾರ್‍ಯ ಸಿ.ಕೆ.ಶ್ರೀಧರ್, ಉಪನ್ಯಾಸಕ ವರ್ಗ ಹಾಗೂ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.