ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಶಿವಮೊಗ್ಗ ಜಿಲ್ಲೆಯಲ್ಲಿ ಏಳೂ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ : ತೇಜಸ್ವಿನಿ

Share Below Link

ಶಿವಮೊಗ್ಗ: ಬಿಜೆಪಿಗೆ ಭದ್ರ ಬುನಾದಿ ನೀಡಿದ ಜಿ ಶಿವಮೊಗ್ಗ ವಾಗಿದ್ದು, ಶ್ರೇಷ್ಠ ನಾಯಕರನ್ನು ನೀಡಿದೆ. ಇಲ್ಲಿ ಏಳೂ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಪಕ್ಷದ ನಾಯಕಿ ತೇಜಸ್ವಿನಿ ಅನಂತ ಕುಮಾರ್ ಹೇಳಿzರೆ.
ಅವರು ಇಂದು ನಗರದ ಹೊರವಲಯದ ಶುಭಶ್ರೀ ಕಲ್ಯಾಣ ಮಂದಿರದಲ್ಲಿ ಶಿವಮೊಗ್ಗ ಜಿ ಬಿಜೆಪಿ ಚುನಾವಣಾ ನಿರ್ವ ಹಣಾ ಸಮಿತಿಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಒಂದು ಕಾಲದಲ್ಲಿ ಪಕ್ಷಕ್ಕೆ ಕೇವಲ ಒಂದೇ ಸ್ಥಾನ ಇತ್ತು. ಅದು ಶಿವಮೊಗ್ಗದಿಂದ ಸಿಕ್ಕಿತ್ತು. ಪಕ್ಷಕ್ಕೆ ಕಚೇರಿ ಇರಲಿಲ್ಲ, ವಾಹನ ಇರ ಲಿಲ್ಲ, ಯಾವುದೇ ಸೌಲಭ್ಯಗಳು ಇಲ್ಲದಿzಗ ನಮ್ಮ ಪಕ್ಷದ ಹಿರಿ ಯರು ಸಂಘಟನಾ ಚಾತುರ್ಯ ದಿಂದ ಪಕ್ಷವನ್ನು ಕಟ್ಟಿ ಬೆಳೆಸಿzರೆ. ಇದು ಕೇವಲ ಅದೃಷ್ಟದಿಂದ ಆಗಿ ದ್ದಲ್ಲ. ಕಾರ್ಯಕರ್ತರ ಪರಿಶ್ರಮ ದಿಂದ ಪಕ್ಷ ಹೆಮ್ಮರವಾಗಿ ಬೆಳೆದಿದೆ ಎಂದರು.
ಚುನಾವಣೆ ಎಂದರೆ ಯುದ್ಧದ ಮಾದರಿ ಎಂದೇ ಎಲ್ಲರೂ ಕೆಲಸ ಮಾಡಬೇಕಿದೆ. ಪಕ್ಷ ೩೪ ವಿಭಾಗಗಳನ್ನು ಗುರುತಿಸಿದ್ದು, ಸಣ್ಣ ಸಣ್ಣ ವಿಷಯಗಳನ್ನು ಕೂಡ ಗಮನಿಸಿ ನಿರ್ಲಕ್ಷ್ಯ ಮಾಡದೆ ಜವಾಬ್ದಾರಿಯುತವಾಗಿ ಪಕ್ಷದ ಕಾರ್ಯವನ್ನು ಶ್ರದ್ಧೆಯಿಂದ ಎಲ್ಲರೂ ಮಾಡಿದಾಗ ಗೆಲವು ಅಸಾಧ್ಯವಲ್ಲ. ನಿರ್ದಿಷ್ಟ ಗುರಿ ಇರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯ ಗಳನ್ನು ಮನೆಮನೆಗೆ ಹಾಗೂ ಪ್ರತಿಯೊಬ್ಬರ ಮನಮನಗಳಿಗೆ ತಲುಪಿಸಬೇಕು. ಸರಿಯಾದ ಯೋಜನೆ ರೂಪಿಸಿ ಮತದಾರ ರನ್ನು ತಲುಪಬೇಕು. ಯುದ್ಧಕ್ಕೆ ಮೊದಲೇ ತಯಾರಿ ಮಾಡಿ ಹೋದಾಗ ಮಾತ್ರ ಗೆಲುವು ಸಾಧ್ಯ. ಯುದ್ಧಕಾಲೇ ಶಸ್ತ್ರಾಭ್ಯಾಸ ಎನ್ನುವ ರೀತಿಯಲ್ಲಿ ಆಗದೆ ಇತ್ತೀಚಿನ ತಾಂತ್ರಿಕತೆಯ ನೆರವು ಪಡೆದು ಮತದಾರರ ಮನ ಗೆಲ್ಲಬೇಕು. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವ eನವನ್ನು ಕಾರ್ಯಕರ್ತರು ಬೆಳಸಿಕೊಳ್ಳಬೇಕು ಎಂದರು.
ವಿಪಕ್ಷಗಳು ಕಡ್ಡಿಯನ್ನು ಗುಡ್ಡ ಮಾಡಿ ನಿರಂತರ ಅಪಪ್ರಚಾರ ಮಾಡುತ್ತಾ ಇರುತ್ತಾರೆ. ಐರಾವತ ಕೂಡ ಅಡಿ ಇಡುವಾಗ ತಪ್ಪುತ್ತದೆ. ಹಾಗೆಯೇ ಅತಿಯಾದ ವಿಶ್ವಾಸ ದಿಂದ ತಪ್ಪು ಆಗದ ರೀತಿಯಲ್ಲಿ ಗಮನ ಕೊಡಬೇಕು ಎಂದರು.
ಮತದಾರರಿಗೆ ಅನುಕೂಲವಾ ಗುವ ಪ್ರಣಾಳಿಕೆಯನ್ನು ಸಿದ್ಧಪಡಿ ಸಬೇಕು. ಪ್ರತಿಯೊಂದು ಅಂಕಿ- ಅಂಶಗಳು, ಪಾರದರ್ಶಕತೆ, ನಾವೀನ್ಯ ಸಂಗತಿಗಳ ಅಳವಡಿಕೆ, ಪ್ರಧಾನಿ ಮೋದಿಯವರ ಕಾರ್ಯ ವೈಖರಿ, ಡಬಲ್ ಇಂಜಿನ್ ಸರ್ಕಾ ರದಿಂದ ಆಗುವ ಲಾಭ ಎಲ್ಲವನ್ನೂ ಜನರಿಗೆ ತಿಳಿಸಬೇಕು ಎಂದರು.
ಆರ್.ಕೆ. ಸಿದ್ದರಾಮಣ್ಣ ಅವರು ಪ್ರಾಸ್ತಾವಿಕವಾಗಿ ಮಾತ ನಾಡಿ, ಪಕ್ಷ ಬೆಳೆದುಬಂದ ರೀತಿಯನ್ನು ಮತ್ತು ಬಿಜೆಪಿಯ ತತ್ವ ಸಿದ್ಧಾಂತಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಧ್ಯಕ್ಷ ಟಿ.ಡಿ. ಮೇಘರಾಜ್, ಮುಖಂಡ ರಾದ ಗಿರೀಶ್ ಪಟೇಲ್, ಭಾನುಪ್ರಕಾಶ್, ಶಾಸಕರಾದ ಕುಮಾರ್ ಬಂಗಾರಪ್ಪ, ಅಶೋಕ್ ನಾಯ್ಕ, ಡಿ.ಎಸ್. ಅರುಣ್, ಜಿಲ್ಲ ಉಸ್ತುವಾರಿ ಮೋನಪ್ಪ ಭಂಡಾರಿ, ಹಾಗೂ ಪಕ್ಷದ ಎ ಮಂಡಲಗಳ ಪ್ರಮುಖರು, ಪದಾಧಿಕಾರಿಗಳು, ಕಾರ್‍ಯಕರ್ತರು ಉಪಸ್ಥಿತರಿದ್ದರು.