ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸಚಿವ ನಾಗೇಂದ್ರ ವಜಾಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

Share Below Link

ಶಿವಮೊಗ್ಗ : ಶಿವಮೊಗ್ಗ ನಗರ ಬಿಜೆಪಿ ಯಿಂದ ಇಂದು ನಗರದ ಶಿವಪ್ಪನಾಯಕ ವೃತ್ತದಲ್ಲಿ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರ ಆತ್ಮಹತ್ಯೆಗೆ ಕಾರಣರಾದ ಅಧಿಕಾರಿಗಳು ಮತ್ತು ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಜರುಗಿತು.


ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಾಯಕರಾದ ಗಿರೀಶ್ ಪಟೇಲ್ ಈ ಸರ್ಕಾರಕ್ಕೆ ಸ್ವಲ್ಪ ಕೂಡ ಮಾನವೀಯತೆ, ಮಾನ-ಮಾರ್ಯಾದೆ ಯಾವುದು ಇಲ್ಲ. ಸರ್ಕಾರ ಹಿಟ್ಲರ್ ನಂತೆ ವರ್ತಿಸುತ್ತಿದ್ದು ಇದು ಕೊಲೆಗಡುಕ ಸರ್ಕಾರವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರೈತ, ನಾಗರೀಕ ವಿರೋಧಿಯಾಗಿದೆ. ರಾಜ್ಯಪಾಲರು ಈ ಸರ್ಕಾರವನ್ನು ವಜ ಮಾಡಬೇಕು ಎಂದು ಆಗ್ರಹಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜರಿ ಮಾತನಾಡಿ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು ಮತ್ತು ಸಂಕಷ್ಟದಲ್ಲಿರುವ ಅತ್ಯಂತ ಕೆಳವರ್ಗದ ಜನರಿಗೆ ಮೀಸಲಿಟ್ಟ ೧೮೭ ಕೋಟಿ ಹಣದಲ್ಲಿ ೮೭ ಕೋಟಿ ಯನ್ನು ಕಾನೂನು ಬಾಹಿರವಾಗಿ ಇತರ ವೆಚ್ಚಗಳಿಗೆ ವರ್ಗಾಯಿಸಿ ಅದನ್ನು ಪ್ರಾಮಾಣಿಕ ಅಧಿಕಾರಿಯಾದ ನಿಗಮದ ಚಂದ್ರಶೇಖರ್ ಅವರ ತಲೆಗೆ ಕಟ್ಟಲು ಷಡ್ಯಂತರ ಮಾಡಿದ ಅಧಿಕಾರಿ ಗಳು ಮತ್ತು ಮಖಿಕ ಆದೇಶ ನೀಡಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ನಾಗೇಂದ್ರ ಅವರನ್ನು ಮುಖ್ಯಮಂತ್ರಿ ಯವರು ಕೂಡಲೇ ವಜ ಮಾಡಬೇಕು. ಸ್ವಲ್ಪವಾದರೂ ಮಾನ ಮರ್ಯಾದೆ ಇದ್ದರೆ ಕೂಡಲೇ ಹೈಕೋರ್ಟ್ ನಿವೃತ್ತ ನ್ಯಾಯಧೀಶ ರಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ಪಾರದರ್ಶಕ ಸರ್ಕಾರ ಎಂಬುವುದನ್ನು ಸಾಭೀತು ಪಡಿಸಬೇಕು. ಅಥವಾ ಸಿಬಿಐಗೆ ಪ್ರಕರಣ ವರ್ಗಾಯಿಸಬೇಕು ಎಂದರು.
ಸರ್ಕಾರ ತಕ್ಷಣ ೨೫ ಲಕ್ಷ ರೂ.ಗಳ ಪರಿಹಾರ ಅಧಿಕಾರಿ ಕುಟುಂಬಕ್ಕೆ ನೀಡುವಂತೆ ಆಗ್ರಹಿಸಿದರು.
ಇವರಿಗೆ ದಲಿತ, ಹಿಂದುಳಿದ, ಪರಿಶಿಷ್ಟ ವರ್ಗ ಹಾಗೂ ಪಂಗಡದ ಜನರ ಬಗ್ಗೆ ಯಾವುದೇ ಪ್ರೀತಿ ಯಿಲ್ಲ. ಈ ಸರ್ಕಾರ ಸತ್ತುಹೋಗಿದೆ ಎಂದರು. ಶಾಸಕ ಚನ್ನಬಸಪ್ಪ ಮಾತನಾಡಿ ಈ ಸರ್ಕಾರಕ್ಕೆ ಯಾವುದೇ ನೈತಿಕತೆಯಿಲ್ಲ. ಗೋಹಂತಕ ಬಲಿಯಾದರೆ ೧೦ ಲಕ್ಷ ಘೋಷಿಸುತ್ತಾರೆ. ಪಿತೂರಿಗೆ ಆತ್ಮಹತ್ಯೆ ಮಾಡಿಕೊಂಡ ಡೆತ್‌ನೋಟ್ ಬರೆದಿಟ್ಟು, ಭ್ರಷ್ಟಾಚಾರದ ಬಣ್ಣ ಬಯಲು ಮಾಡಿದ ಸರ್ಕಾರಿ ನೌಕರನಿಗೆ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲ. ಇದು ಆಕ್ಷಮ್ಯ ಅಪರಾಧ. ಈ ಸರ್ಕಾರವನ್ನು ವಜ ಮಾಡಬೇಕು ಎಂದು ಅವರು ಆಗ್ರಹಿಸಿರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಎಸ್. ದತ್ತಾತ್ರಿ, ಜನೇಶ್ವರ್ , ನಾಗರಾಜ್, ರಾಮು, ದರ್ಶನ್, ಮಂಜುನಾಥ್, ಸುರೇಖಾ ಮುರಳೀಧರ್, ದಿನೇಶ್, ರಶ್ಮಿ ಶ್ರೀನಿವಾಸ್ ಮತ್ತಿತರರಿದ್ದರು.

This image has an empty alt attribute; its file name is Arya-coll.gif