ಮಸೂದೆ ಮಂಡನೆ: ಮೋದಿ ಅವರ ಇಚ್ಛಾಶಕ್ತಿ ಕಾರಣ: ಬಿವೈಆರ್
ಶಿವಮೊಗ್ಗ: ನಾರಿ ಶಕ್ತಿಗೆ ಒತ್ತು ಕೊಡುವ ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಿ ಅನುಮೋದನೆಗೊಂಡಿರುವುದು ಐತಿಹಾಸಿಕ ತೀರ್ಮಾನವಾಗಿದೆ. ಇದಕ್ಕೆ ಪ್ರಧಾನಿ ಮೋದಿ ಅವರ ಇಚ್ಛಾಶಕ್ತಿ ಕಾರಣ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಕಾಂಗ್ರೆಸ್ ಸರ್ಕಾರ ಕಳೆದ ೫೦ಕ್ಕೂ ಹೆಚ್ಚು ವರ್ಷಗಳಿಂದ ಆಡಳಿತ ನಡೆಸಿದ್ದರೂ ಕೂಡ ಈ ಮಸೂದೆ ಜರಿಗೆ ತರಲಿಲ್ಲ. ಆದರೆ ಬಿಜೆಪಿ ಸರ್ಕಾರ ಮಹಿಳಾ ಮೀಸ ಲಾತಿ ಜರಿಗೆ ತಂದಿದೆ. ಸಂಸತ್ ನಲ್ಲಿ ಈಗಾಗಲೇ ಅನುಮೋದನೆ ಗೊಂಡು ರಾಷ್ಟ್ರಪತಿಗಳ ಅಂಕಿತ ಕ್ಕಾಗಿ ಕಾಯುತ್ತಿದೆ ಅಷ್ಟೇ. ಅನೇಕ ವರ್ಷಗಳ ಕನಸು ಇದು. ಈ ಐತಿ ಹಾಸಿಕ ತೀರ್ಮಾನ ತೆಗೆದುಕೊಂಡಿ ದ್ದಕ್ಕೆ ಪ್ರಧಾನಿ ಮೋದಿ ಅವರಿಗೆ ಅಭಿನಂದನೆಗಳು ಎಂದರು.
ಕಾಂಗ್ರೆಸ್ ಪಕ್ಷ ಈ ಬಾರಿಯಿಂ ದಲೇ ಇದನ್ನು ಜರಿಗೆ ತರಬೇಕು ಎನ್ನುತ್ತಿದೆ. ಆದರೆ ಹಾಗೆಲ್ಲ ಮಾಡ ಲು ಬರುವುದಿಲ್ಲ. ಅದಕ್ಕಾಗಿ ನಿಯ ಮಗಳಿವೆ. ಜನಗಣತಿ ಆಗಬೇಕಾ ಗಿದೆ. ಮೀಸಲಾತಿ ಬಗ್ಗೆ ಸ್ಪಷ್ಟ ನಿಲು ವು ತೆಗೆದುಕೊಳ್ಳಬೇಕು. ಕ್ಷೇತ್ರ ವಾರು ವರ್ಗೀಕರಣ ಆಗಬೇಕು. ಅದೆಲ್ಲಾ ಮುಗಿದ ನಂತರ ಜರಿಗೆ ತರಲಾಗುವುದು ಎಂದರು.
ಈ ಮಸೂದೆಯಿಂದ ಮಹಿಳೆಯರ ಸ್ವಾಭಿಮಾನ ಮತ್ತು ಸ್ವಾವಲಂಬನೆ ಹೆಚ್ಚಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರ ಮತದಾನ ಕೂಡ ಶೇ.೫ರಷ್ಟು ಹೆಚ್ಚಳವಾಗಿದೆ. ಮಹಿಳೆಯರ ಮತದಾನ ಕೂಡ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಮಹಿ ಳೆಯರಿಗಾಗಿ ಹಲವು ಯೋಜನೆ ರೂಪಿಸಿದೆ. ಬಿಜೆಪಿ ಸರ್ಕಾರದ ಹೆಮ್ಮೆಯ ನಿರ್ಧಾರ ವಿದು ಎಂದರು.
ಕಾವೇರಿ ನದಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನೀರು ಬಿಟ್ಟ ಮೇಲೆ ಸರ್ವ ಪಕ್ಷಗಳ ಸಭೆ ಕರೆಯುವ ಅಗತ್ಯವಾದರೂ ಏನಿತ್ತು? ಈಗ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು ಎನ್ನುತ್ತಿದ್ದಾರೆ. ಆದರೆ ನೀರಿಗೆ ಸಂಬಂಧಿಸಿದಂತೆ ಪ್ರಾಧಿಕಾರಗಳು, ನ್ಯಾಯಾಲಯಗಳು ಇವೆ. ಅಲ್ಲಿ ಇವರು ಪ್ರಶ್ನೆ ಮಾಡ ಬೇಕಿತ್ತು. ಅದನ್ನು ಬಿಟ್ಟು ರಾಜ ಕೀಯ ಹಿತಾಸಕ್ತಿಗಾಗಿ ನೀರನ್ನು ಬಿಟ್ಟಿದ್ದು ಸರಿಯಲ್ಲ ಎಂದರು.
ವಿಐಎಸ್ಎಲ್ ಶತಮಾನೋ ತ್ಸವಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಿರಿಯ ಕಾರ್ಮಿಕರೊಂದಿಗೆ ಚರ್ಚಿಸಿದ್ದು, ಅವರಿಗೆ ಜವಾಬ್ದಾರಿ ನೀಡಲಾಗಿದೆ. ಅಲ್ಲಿನ ಹಿರಿಯ ಕಾರ್ಮಿಕ ಹಾಗೂ ಚಿತ್ರನಟ ದೊಡ್ಡಣ್ಣ ಅವರ ನೇತೃತ್ವದಲ್ಲಿ ಕೆಲಸಗಳು ನಡೆಯುತ್ತಿವೆ ಎಂದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಯನ್ನು ಸ್ವಾಗತಿಸಿದ ಸಂಸದ ರಾಘವೇಂದ್ರ ಮುಂದೆಯೂ ಮೋದಿ ಅವರೇ ಪ್ರಧಾನಿ ಯಾಗ ಲು ಇದು ಸಹಕಾರವಾಗುತ್ತದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಶಿವರಾಜ್, ಮಾಲತೇಶ್, ಜಗದಿ ಶ್, ಹೃಷಿಕೇಶ್ ಪೈ, ಸುನಿತಾ ಅಣ್ಣಪ್ಪ, ಸುವರ್ಣಾ ಶಂಕರ್, ಪದ್ಮಿನಿ, ಕೆ.ವಿ. ಅಣ್ಣಪ್ಪ ಇದ್ದರು.
![](https://i0.wp.com/hosanavika.com/wp-content/uploads/2023/09/mca-1.gif?resize=494%2C1024&ssl=1)