ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಜೆಎನ್‌ಎನ್‌ಸಿಇನಲ್ಲಿ ‘ಉತ್ಥಾನ’ ಸಂಭ್ರಮ: ಸಮಾಜದ ಉನ್ನತಿಗಾಗಿ ಬೆಳಗುವ ಬೆಳಕು ನೀವಾಗಿ…

Share Below Link

ಶಿವಮೊಗ್ಗ : ವೈಯುಕ್ತಿಕ ಅಭಿವೃದ್ಧಿಯ ಜೊತೆಗೆ ಸಮಾಜದ ಉನ್ನತಿಗಾಗಿ ಬೆಳಗುವ ಬೆಳಕು ನೀವಾಗಿ ಎಂದು ಚಲನಚಿತ್ರ ನಟ ಪೃಥ್ವಿ ಅಂಬರ್ ಕಿವಿಮಾತು ಹೇಳಿ ದರು.
ಶುಕ್ರವಾರ ನಗರದ ಜೆ.ಎನ್. ಎನ್ ಎಂಜಿನಿಯರಿಂಗ್ ಕಾಲೇಜಿ ನ ಎಂಬಿಎ ವಿಭಾಗದ ವತಿಯಿಂದ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವ ‘ಉತ್ಥಾನ-೨೦೨೩’ ಉ ದ್ಘಾಟಿಸಿ ಮಾತನಾಡಿದರು.
ನಾವು ಎಷ್ಟೇ ಅಭಿವೃದ್ಧಿ ಹೊಂ ದಿದರು, ನಮ್ಮ ನಡುವೆ ಇರುವ ಕುಟುಂಬ, ಸಮಾಜದೊಂದಿಗೆ ಪ್ರೀತಿಯಿಂದ ವರ್ತಿಸಿ. ಪ್ರೀತಿ ತುಂಬಿದ ಸಮಾಜವಿಲ್ಲದೇ ಹೋ ದಾಗ ಬದುಕು ವ್ಯರ್ಥವಾದಂತೆ ಭಾಸವಾಗುತ್ತದೆ ಎಂದು ಹೇಳಿ ದರು.
ಎನ್‌ಇಎಸ್ ಅಧ್ಯಕ್ಷರಾದ ಜಿ. ಎಸ್.ನಾರಾಯಣರಾವ್ ಮಾತ ನಾಡಿ, ಸಮಾಜವನ್ನು ನಿಮ್ಮೊಂದಿಗೆ ತೆಗೆದುಕೊಂಡು ಸಾಗಿ. ಜೀವನ ಪ್ರತಿ ಹಂತದ ನಿರ್ವಹಣೆಯು, ಸೃಜನಶೀಲ ಆತ್ಮವಿಶ್ವಾಸದೊಂದಿಗೆ ಉತ್ಥಾನದಿಂದ ಕೂಡಿರಲಿ. ಸಂಭ್ರಮದೊಂದಿಗೆ ಬದುಕಿನ ಮಹತ್ವ ಅರಿತು ಮುನ್ನಡೆಯಿರಿ ಎಂದು ಆಶಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್. ಎನ್.ನಾಗರಾಜ, ಸಹ ಕಾರ್ಯ ದರ್ಶಿಗಳಾದ ಡಾ.ಪಿ.ನಾರಾ ಯಣ್, ಖಜಂಚಿಗಳಾದ ಡಿ.ಜಿ. ರಮೇಶ್, ನಿರ್ದೇಶಕರಾದ ಟಿ .ಆರ್.ಅಶ್ವಥನಾರಾಯಣ ಶೆಟ್ಟಿ, ಕುಲಸಚಿವರಾದ ಪ್ರೊ.ಎನ್. ಕೆ.ಹರಿಯಪ್ಪ, ಶೈಕ್ಷಣಿಕ ಆಡ ಳಿತಾಧಿಕಾರಿ ಎ.ಎನ್. ರಾಮ ಚಂದ್ರ, ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಎಂಬಿಎ ವಿಭಾಗದ ನಿರ್ದೇಶಕ ರಾದ ಡಾ.ಶ್ರೀಕಾಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕೋತ್ಸವ, ಗಾನೋತ್ಸವ, ಚಿತ್ರೋತ್ಸವ, ಪ್ರಶ್ನೋತ್ಸವ, ಮಂಥನೋತ್ಸವ, ನೃತ್ಯೋತ್ಸವ, ಪಂಥೋತ್ಸವ, ವಸ್ತ್ರೋತ್ಸವ, ನಾವೀನ್ಯೋತ್ಸವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಜಿಯ ವಿವಿಧ ಭಾಗಗಳಿಂದ ಸುಮಾರು ೨೬ ಕಾಲೇಜುಗಳ ೬೦೦ ಕ್ಕು ಹೆಚ್ಚು ವಿದ್ಯಾರ್ಥಿಗಳು ಭಾಗವ ಹಿಸಿದ್ದರು.