ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-೨ ತಂತ್ರಾಂಶ ಕುರಿತು ಅರಿವು ಕಾರ್ಯಾಗಾರ…

Share Below Link

ಶಿವಮೊಗ್ಗ: ನೊಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಕಾವೇರಿ-೨ ತಂತ್ರಾಂಶದ ಬಗ್ಗೆ ಪತ್ರಕರ್ತರಿಗೆ ಇಂದು ಅರಿವು ಮೂಡಿಸುವ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಜಿ ನೊಂದಣಾಧಿಕಾರಿ ಬಿ ಎಂ. ಗಿರೀಶ್ ಅವರು, ಮುಖ್ಯವಾಗಿ ಸಾರ್ವಜನಿಕರು ತಮ್ಮ ಆಸ್ತಿಗಳನ್ನು ನೊಂದಣಿ ಮಾಡಿಸಿಕೊಳ್ಳಲು ಈ ತಂತ್ರಾಂಶ ಜನಸ್ನೇಹಿಯಾಗಿದೆ. ಮತ್ತು ಈ ತಂತ್ರಾಂಶದ ಮೂಲಕ ಅತ್ಯಂತ ಸರಳವಾಗಿ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೊಂದಣಿ ಮಾಡಿಸಿಕೊಳ್ಳಬಹುದು. ಈ ಯೋಜನೆ ಮೂಲಕ ಸಾರ್ವಜನಿಕರು ತಮ್ಮ ಆಸ್ತಿ ಮತ್ತಿತರ ನೊಂದಣಿಯನ್ನು ನೇರವಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಮಾಡಿಕೊಳ್ಳಬಹುದು ಎಂದರು.
ನೊಂದಣಿಗೆ ಸಂಬಂಧಿಸಿದಂತೆ ಈ ಹಿಂದೆ ಕಾವೇರಿ-೧ ತಂತ್ರಾಂಶ ಜರಿಗೆ ಬಂದಿತ್ತು. ಅದರಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿ ಈಗ ಕಾವೇರಿ-೨ ತಂತ್ರಾಂಶ ಜರಿಗೆ ತರಲಾಗಿದೆ. ಇಡೀ ಜಿಯಲ್ಲಿ ಇದು ಮೇ ೧೫ರಿಂದ ಮೇ ೨೨ರವರೆಗೆ ವಿವಿಧ ತಾಲೂಕುಗಳಲ್ಲಿ ಜರಿಗೆ ಬರಲಿದೆ ಎಂದರು.
ಪ್ರಾತ್ಯಕ್ಷತೆ ಮೂಲಕ ಮಾತನಾಡಿದ ತರಬೇತುದಾರ ಚೇತನ್ , ನೊಂದಣಿಗೆ ಸಂಬಂಧಿಸಿದಂತೆ ಕಾವೇರಿ-೨ ತಂತ್ರಾಂಶ ಅತ್ಯಂತ ಜನಸ್ನೇಹಿ ಆಗಲಿದೆ. ಪಾರದರ್ಶಕತೆ ಇದರಿಂದ ಬರುತ್ತದೆ. ಈ ಮೊದಲು ನೊಂದಣಿ ಮಾಡಿಸಿಕೊಳ್ಳಲು ಸಾರ್ವಜನಿಕರು ನೊಂದಣಿ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇತ್ತು. ಇದು ಈಗ ತಪ್ಪುತ್ತದೆ. ಸಮಯ ಕೂಡ ಉಳಿತಾಯವಾಗುತ್ತದೆ. ಜೊತೆಗೆ ನೊಂದಣಿ ಹೆಚ್ಚಾಗುವುದರಿಂದ ಸರ್ಕಾರಕ್ಕೆ ಆದಾಯ ಕೂಡ ಹೆಚ್ಚುತ್ತದೆ ಎಂದರು.
ಸಾರ್ವಜನಿಕರಿಗೆ ನೊಂದಣಿಯಲ್ಲಿ ಕಾಯುವ ಪ್ರಮೇಯ ಇನ್ನಿರುವುದಿಲ್ಲ. ನೊಂದಣಿಗೆ ಮೊದಲೇ ತಮ್ಮ ದಾಖಲೆ ಅಪ್‌ಲೋಡ್ ಮಾಡಬಹುದು. ಈಗಾಗಲೇ ಕಂಪ್ಯೂಟರ್ ಆಪರೇಟರ್‌ಗಳಿಗೆ ಹೊಸ ತಂತ್ರಾಂಶದ ಬಗ್ಗೆ ತರಬೇತಿ ನೀಡಲಾಗಿದೆ ಎಂದ ಅವರು, ಇದು ನೋಂದಣಿಗಾಗಿ ನಾಗರಿಕರ ಕಾಯುವ ಸಮಯವನ್ನು ತಪ್ಪಿಸುತ್ತದೆ. ಹೆಚ್ಚುವರಿಯಾಗಿ, ಡಾಕ್ಯುಮೆಂಟ್ ನೊಂದಣಿಗೆ ತೆಗೆದುಕೊಳ್ಳುವ ಸರಾಸರಿ ಸಮಯವು ೧೫ ನಿಮಿಷಗಳಿಂದ ೧೦ ನಿಮಿಷಗಳಿಗೆ ಕಡಿಮೆಯಾಗುತ್ತದೆ ಎಂದರು.
ಒಟ್ಟಾರೆ ನೊಂದಣಿಗಳಲ್ಲಿ ತಪ್ಪುಗಳು ಆಗುವುದು ಕಡಿಮೆಯಾಗುತ್ತದೆ. ಸರ್ವರ್ ತೊಂದರೆ ಇರುವುದಿಲ್ಲ. ಸಮಯದ ಉಳಿತಾಯ ಆಗುತ್ತದೆ. ನಕಲು ಇರುವುದಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ. ಮುಂದಿನ ದಿನಗಳಲ್ಲಿ ಈ ತಂತ್ರಾಂಶ ಮತ್ತಷ್ಟು ಸುಧಾರಣೆ ಆಗುವ ಸಾಧ್ಯತೆ ಇದೆ. ಶಿವಮೊಗ್ಗ ಜಿಯ ಭದ್ರಾವತಿಯಲ್ಲಿ ಮೇ ೧೫, ಹೊಸನಗರ ಮೇ ೧೬, ಸಾಗರ ಮೇ ೧೭, ಶಿಕಾರಿಪುರ ಮೇ ೧೮, ಶಿವಮೊಗ್ಗದಲ್ಲಿ ಮೇ ೧೯,ಸೊರಬದಲ್ಲಿ ಮೇ ೨೦, ತೀರ್ಥಹಳ್ಳಿಯಲ್ಲಿ ಮೇ ೨೨ರಂದು ಅನುಷ್ಠಾನಗೊಳ್ಳಲಿದೆ. ಹೆಚ್ಚಿನ ವಿವರಗಳಿಗೆ ಮತ್ತ ಸಾರ್ವಜನಿಕರಿಗೆ ಮಾಹಿತಿ ನೀಡಲು ಸಹಾಯವಾಣಿಯನ್ನು ತೆರೆಯಲಾಗಿದೆ. ಸಾರ್ವಜನಿಕರು ೦೮೦-೬೮೨೬೫೩೧೬ ಸಂಪರ್ಕಿಸಬಹುದಾಗಿದೆ.
ಈ ಸಂದರ್ಭದಲ್ಲಿ ಇಲಾಖೆಯ ಸಹಾಯಕ ಅಧಿಕಾರಿಗಳಾದ ಧನರಾಜ್, ಡಿ.ಎಸ್.ರವಿ, ಬಸವರಾಜ್ ವಿವೇಕ್ ಉಪಸ್ಥಿತರಿದ್ದರು.