ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ತೆರಿಗೆ ಕಾಯ್ದೆಗಳಲ್ಲಿನ ಬದಲಾವಣೆಯ ಅರಿವು ಅವಶ್ಯಕ

Share Below Link

ಶಿವಮೊಗ್ಗ: ಏಕಸ್ವಾಮ್ಯ, ಪಾಲುದಾರಿಕೆ ವ್ಯವಹಾರದಲ್ಲಿ ತೆರಿಗೆ ನಿರ್ವಹಣೆಯ ಜತೆಯಲ್ಲಿ ಉಳಿತಾಯ ಮಾಡುವ ಕುರಿತು ತಿಳವಳಿಕೆ ಅತ್ಯಂತ ಅವಶ್ಯಕ. ತೆರಿಗೆ ಇಲಾಖೆಯಲ್ಲಿ ಆಗಿರುವ ಕಾಯ್ದೆಗಳಲ್ಲಿನ ಬದಲಾವಣೆಗಳನ್ನು ಅರಿತುಕೊಳ್ಳಬೇಕು ಎಂದು ತೆರಿಗೆ ಸಲಹೆಗಾರ ಎಚ್.ಎಸ್. ರಘುರಾಮ್ ಭಟ್ ಹೇಳಿದರು.
ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಏಕಸ್ವಾಮ್ಯ ಹಾಗೂ ಪಾಲುದಾರಿಗೆ ವ್ಯವಹಾರದಲ್ಲಿ ಆದಾಯ ತೆರಿಗೆಯನ್ನು ಹೇಗೆ ಉಳಿಸುವುದು ಕುರಿತ ಉಪನ್ಯಾಸ ಕಾರ್ಯಕ್ರಮ ದಲ್ಲಿ ಮಾತನಾಡಿದರು.
ವ್ಯವಹಾರದ ಸಂದರ್ಭದಲ್ಲಿ ಸ್ವಂತ ನಡೆಸುವುದಾದರೂ ಅಥವಾ ಪಾಲುದಾರಿಕೆಯಲ್ಲಿ ಉದ್ಯಮ ಮಾಡುವುದಾದರೂ ದಾಖಲೆಗಳ ನಿರ್ವಹಣೆ ಅತ್ಯಂತ ಮುಖ್ಯವಾಗು ತ್ತದೆ. ಆದಾಯ ತೆರಿಗೆ ಸರಿಯಾದ ಕ್ರಮದಲ್ಲಿ ಪಾವತಿಸುತ್ತಿರಬೇಕು. ಸರಿಯಾದ ನಿರ್ವಹಣೆ ಮಾಡುವ ಜತೆಯಲ್ಲಿ ಆದಾಯ ತೆರಿಗೆ ಉಳಿಸುವ ಅವಕಾಶಗಳ ಬಗ್ಗೆ ಅರಿವು ಬೆಳೆಸಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.
ಉದ್ಯಮದಲ್ಲಿ ಎದುರಾಗುವ ಎಲ್ಲ ತೊಡಕುಗಳನ್ನು ನಿವಾರಿಸಿ ಕೊಂಡು ಮುನ್ನಡೆಯಬೇಕು. ಎಲ್ಲ ದಾಖಲೆಗಳ ನಿರ್ವಹಣೆ ಸರಿಯಾಗಿದ್ದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ನಗದು ವ್ಯವಹಾರದ ದಾಖಲೆ ಸರಿಯಾಗಿಟ್ಟುಕೊಳ್ಳು ವುದು. ಸರಿಯಾದ ಸಮಯದಲ್ಲಿ ರಿಟರ್ನ್ಸ್ ಸಲ್ಲಿಸುವುದು. ವಿವಿಧ ರೀತಿಯಲ್ಲಿ ತೆರಿಗೆ ಉಳಿಸಲು ಇರುವ ಕಾನೂನು ನಿಯಮಗಳನ್ನು ಅನುಸರಿಸಬೇಕು ಎಂದರು.
ಜಿ ವಾಣಿಜ್ಯ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಉದ್ಯಮಿಗಳು ಹಾಗೂ ವ್ಯವಹಾರ ನಡೆಸುವವರು ತೆರಿಗೆ ವ್ಯವಸ್ಥೆಯ ಬಗ್ಗೆ ನಿರಂತರ ವಾಗಿ ತಿಳಿದುಕೊಳ್ಳಬೇಕು. ಕಾಲ ಕಾಲಕ್ಕೆ ಆಗುವ ಬದಲಾವಣೆಗಳ ಬಗ್ಗೆ ತಿಳಿದುಕೊಂಡಲ್ಲಿ ಅನೇಕ ಉಪಯೋಗ ಆಗುತ್ತವೆ. ತೆರಿಗೆ ಕಾಯ್ದೆಗಳಲ್ಲಿನ ಹೊಸ ನಿಯಮಗಳ ಬಗ್ಗೆ ಜಗೃತಿ ಹೊಂದುವುದು ಅವಶ್ಯಕ ಎಂದು ಹೇಳಿದರು.
ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ತೆರಿಗೆ ಸಲಹಾ ಸಮಿತಿ ಅಧ್ಯಕ್ಷ ಇ. ಪರಮೇಶ್ವರ್ ಮಾತನಾಡಿ, ವಾಣಿಜ್ಯ ಸಂಘವು ಉದ್ಯಮಿದಾರರಿಗೆ ಜಗೃತಿ ಮೂಡಿಸುವ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಿ ಕೊಂಡು ಬರುತ್ತಿದ್ದು, ತೆರಿಗೆ ವ್ಯವಸ್ಥೆ ಕುರಿತಾಗಿ, ಆದಾಯ ತೆರಿಗೆ ಉಳಿಸುವ ಬಗ್ಗೆ ಜಗೃತಿ ಮೂಡಿಸಲು ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ ಎಂದರು.
ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್ ಕುಮಾರ್, ನಿರ್ದೇಶಕ ಬಿ.ಆರ್. ಸಂತೋಷ್, ಪ್ರದೀಪ್ ಎಲಿ, ರಮೇಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.