ಜಿಲ್ಲಾ ಸುದ್ದಿತಾಜಾ ಸುದ್ದಿ

ಆ.೧೩:ಪೂಜ್ಯ ಸ್ವಾಮೀಜಿ ಚಿನ್ಮಯಾನಂದರ ಜಯಂತಿ

Share Below Link

ಶಿವಮೊಗ್ಗ: ನಗರದ ಚಿನ್ಮಯ ಮಿಷನ್ ವತಿಯಿಂದ ಪೂಜ್ಯ ಸ್ವಾಮೀಜಿ ಚಿನ್ಮಯಾನಂದರ ೧೦೮ನೇ ಜಯಂತಿ ಅಂಗವಾಗಿ ಆ.೧೩ರಂದು ಕುವೆಂಪುರಂಗ ಮಂದಿರದಲ್ಲಿ ಬೆ.೧೦ರಿಂದ ಮ. ೧ರವರೆಗೆ ಗುರುವಂದನಾ ಕಾರ್‍ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ೧೦ ಗಂಟೆಗೆ ವೇದಪಠಣದೊಂದಿಗೆ ಆರಂಭ ವಾಗಲಿದ್ದು, ೧೦-೩೦ಕ್ಕೆ ೧ ಸಾವಿರ ಭಕ್ತರಿಂದ ಸಾಮೂಹಿಕ ಸ್ತೋತ್ರ ಪಠಣ, ೧೧ಕ್ಕೆ ಸಹಸ್ರ ಕಂಠದಿಂದ ಭಜನಾ ಗಾಯನ, ೧೧-೩೦ಕ್ಕೆ ಅಷ್ಟೋತ್ತರ ಶತನಾಮಾವಳಿ ಯೊಂದಿಗೆ ಪಾದುಕೆ ಪೂಜೆ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಲಿದ್ದು, ೧೨ಕ್ಕೆ ಪೂಜ್ಯ ಸ್ವಾ ಮೀಜಿ ಬ್ರಹ್ಮಾನಂದ ಸರಸ್ವತಿ ಯವರಿಂದ ಸತ್ಸಂಗ, ೧ ಗಂಟೆಗೆ ಭಕ್ತಾದಿಗಳಿಂದ ಗುರುದಕ್ಷಿಣಾ ಸಮರ್ಪಣೆ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಚಿನ್ಮಯ ಮಿಷನ್‌ನ ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಅರುಣ್ ಕುಮಾರ್ ಇಂದು ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.
ಈ ವರ್ಷ ಸ್ವಾಮಿ ಚಿನ್ಮಯಾ ನಂದರ ೧೦೮ನೇ ಜಯಂತಿಯನ್ನು ಎಡೆ ಸಂಭ್ರಮದಿಂದ ಆಚರಿಸ ಲಾಗುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮ ಶಿವಮೊಗ್ಗದಲ್ಲಿ ನಡೆಯಲಿದ್ದು, ಪ್ರವೇಶ ಶುಲ್ಕ ೧೦೦ರೂ. ನಿಗದಿಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿ ಸಲಿಚ್ಛಿಸುವವರು ತಮ್ಮ ಹೆಸರನ್ನು ಕೂಡಲೇ ನೊಂದಾಯಿಸಿಕೊಳ್ಳ ಬೇಕು. ಹೆಸರು ನೊಂದಾಯಿ ಸಿದವರಿಗೆ ಭಜನೆ ಹಾಗೂ ಸ್ತೋತ್ರ ಗಳ ಸಾಹಿತ್ಯ, ಧ್ವನಿಮುದ್ರಿಕೆಗಳನ್ನು ನೀಡಿ ನಗರದ ೧೩ ಬಡಾವಣೆ ಗಳಲ್ಲಿ ನಿಗದಿಪಡಿಸಿದ ದಿನಾಂಕ ದಂದು ಸಾಮೂಹಿಕ ಗಾಯನಕ್ಕೆ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಹೆಸರು ನೊಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ೯೮೪೪೪೪೪೮೨೦ ಅಥವಾ ೯೪೪೮ ೨೪೧೧೪೯ರಲ್ಲಿ ಸಂಪರ್ಕಿಸಬಹು ದು ಎಂದರು.
ಗೋಷ್ಠಿಯಲ್ಲಿ ಶೃಂಗೇರಿ ನಾಗರಾಜ್, ಕುಮಾರ ಶಾಸ್ತ್ರಿ, ರಮೇಶ್ ಅವಧಾನಿ, ಭೂಪಾಳಂ ಶಶಿಧರ್, ಉಪಸ್ಥಿತರಿದ್ದರು.