ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಮಕ್ಕಳ ಅಪೌಷ್ಟಿಕತೆ ನಿವಾರಿಸುವಲ್ಲಿ ಪಶುಸಂಗೋಪನೆ ಪಾತ್ರ ಮಹತ್ತರ

Share Below Link

ಶಿವಮೊಗ್ಗ, : ದೇಶದ ಮಕ್ಕಳ ಅಪೌಷ್ಠಿಕತೆಯನ್ನು ನಿವಾರಿಸಲು ಪಶುಸಂಗೋಪನೆ ಮತ್ತು ಕೋಳಿ ಸಾಕಾಣಿಕೆಯು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ತಿಳಿಸಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜನಗಳ ವಿಶ್ವವಿದ್ಯಾಲಯ, ಐ.ಸಿ.ಎ.ಆರ್. – ಕೃಷಿ ವಿಜನ ಕೇಂದ್ರ, ಹಾಗೂ ಪಶು ಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಶ್ರಯದಲ್ಲಿ ಇಂದು ನವುಲೆಯ ಕೃಷಿ ವಿಜನ ಕೇಂದ್ರದಲ್ಲಿ ಪಶು ವೈದ್ಯರಿಗೆ ಆಯೋಜಿಸಲಾಗಿದ್ದ ಆಧುನಿಕ ಕೋಳಿ ಸಾಕಾಣಿಕೆಯ ಕ್ರಮಗಳ ಕುರಿತಾದ ತಾಂತ್ರಿಕ ವಿಚಾ ರ ಸಂಕಿರಣ ಉದ್ಘಾಟಿಸಿ ಮಾತ ನಾಡಿದ ಅವರು, ವಿಶೇಷವಾಗಿ ಆಧುನಿಕ ಕೋಳಿ ಸಾಕಾಣಿಕೆಯ ಕ್ರಮಗಳು, ರೋಗಗಳ ನಿರ್ವ ಹಣೆ ಹಾಗೂ ಹೊಸ ತಂತ್ರ ಜನಗಳ ಕುರಿತು ಇಲ್ಲಿ ಚರ್ಚಿಸಿದ ನಂತರ ತಾವುಗಳು ಹಳ್ಳಿಗಳಲ್ಲಿರುವ ರೈತರಿಗೆ ಇವುಗಳ ಬಗ್ಗೆ ತಿಳುವಳಿಕೆ ನೀಡಿ ಉತ್ಪಾದನೆ ಹೆಚ್ಚಿಸಿ ರೈತರಿಗೆ ಲಾಭದಾಯಕವಾಗಿಸಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಡಾ. ಕೆ.ಟಿ. ಗುರುಮೂರ್ತಿ ಅವರು ಅಧ್ಯಕ್ಷತೆ ವಹಿಸಿ ಮಾತ ನಾಡಿ, ವಿಶ್ವವಿದ್ಯಾಲಯದಿಂದ ಕೃಷಿ, ತೋಟಗಾರಿಕೆ, ಪಶುಸಂ ಗೋಪನೆ ವಿಷಯಗಳ ಬಗ್ಗೆ ಅನೇಕ ವಿಸ್ತರಣಾ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳು ತ್ತೇವೆ. ವಿಶೇಷವಾಗಿ ಪಶುಸಂಗೋಪನೆ ಮತ್ತು ಮಲ್ಯ ವರ್ಧನೆ ಕುರಿತಾದ ಕಾರ್ಯಕ್ರಮ ಗಳು ರೈತರಿಗೆ ತಲುಪಿದಾಗ ಆದಾ ಯವನ್ನು ದ್ವಿಗುಣ ಗೊಳಿಸುವಲ್ಲಿ ಯಶಸ್ವಿಯಾಗ ಬಹುದೆಂದು ತಿಳಿಸಿದರು.
ಕೃಷಿ ವಿಜನ ಕೇಂದ್ರದ ವಿಜನಿ ಡಾ. ಅಶೋಕ್ ಎಂ. ಅವರು ಪ್ರಾಸ್ತವಿಕವಾಗಿ ಮಾತನಾಡಿ, ಕೋಳಿ ಸಾಕಾಣಿಕೆ ಮಹತ್ವ, ಆಹಾರ ಮತ್ತು ಪೋಷ ಕಾಂಶಗಳ ಭದ್ರತೆಯ ಪ್ರಾಮು ಖ್ಯತೆಯ ಬಗ್ಗೆ ವಿವರಿಸಿದರು.
ಡಾ. ಶಿವಯೋಗಿ ಯಲಿ ಸ್ವಾಗತಿಸಿದರು. ಡಾ. ಬಸವೇಶ್ ಹುಗಾರ್, ಡಾ. ಹೆಚ್.ಜಿ. ಸಣ್ಣ ತಿಮ್ಮಪ್ಪ ಅತಿಥಿಗಳಾಗಿದ್ದರು.
ವಿಚಾರ ಸಂಕಿರಣದಲ್ಲಿ ಸುಮುಖ್ ಹ್ಯಾಚರೀಸ್‌ನ ಡಾ. ರವೀಂದ್ರ ಹಾಗೂ ಹಿರಿಯ ಪಶು ವೈದ್ಯಾಧಿಕಾರಿ ಡಾ. ದಯಾನಂದ ಇವರು ವಾಣಿಜ್ಯ ಕೋಳಿ ಸಾಕಾ ಣಿಕೆ, ಕೋಳಿ ಸಾಕಾಣಿಕೆಯ ನಿರ್ವ ಹಣಾ ಕ್ರಮಗಳು, ಕೋಳಿ ಮತ್ತು ಹಸು ಸಾಕಾಣಿಯ ಪೂರ್ವಾ ಪೇಕ್ಷಿತ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಡಾ.ಜ್ಯೋತಿ ವಂದಿಸಿ ದರು.