ಜಿಲ್ಲಾ ಸುದ್ದಿತಾಜಾ ಸುದ್ದಿ

ಕನ್ನಡ ಭಾಷೆ, ಪರಂಪರೆ ಉಳಿಗಾಗಿ ನಾವೆಲ್ಲರೂ ಶ್ರಮಿಸಬೇಕು…

Share Below Link

ದಾವಣಗೆರೆ : ಮಾತೃಭಾಷೆಗೆ ಪ್ರತಿಯೊಬ್ಬರೂ ಮಹತ್ವ ನೀಡುವ ಮೂಲಕ ಕನ್ನಡ ಭಾಷೆ, ಪರಂಪರೆ ಉಳಿಗಾಗಿ ಶ್ರಮಿಸಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಕನ್ನಡಪರ ಹೋರಾಟಗಾರ ಬಸವರಾಜ ಐರಣಿ ಹೇಳಿದರು.
ಅವರು ನಗರದ ಎಸ್.ಓ.ಜಿ. ಕಾಲೋನಿಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ದಲ್ಲಿ ಧ್ವಜರೋಹಣ ನೆರವೇರಿಸಿ ಮಾತನಾಡಿದರು.
ನಮ್ಮ ನಾಡು-ನುಡಿಗೆ ಅನೇಕ ಮಹನೀಯರು ಹೋರಾಟ ಮಾಡಿzರೆ. ಅವರ ತ್ಯಾಗ ಅರಿತು ಭಾಷೆ, ನಾಡಿನ ಅಭಿವೃದ್ಧಿ ಹೆಚ್ಚು ಆಸಕ್ತಿ ವಹಿಸಬೇಕು. ಕನ್ನಡಕ್ಕೆ ಧಕ್ಕೆ ಬಂದಾಗ ನಾವೆಲ್ಲರೂ ಒಗ್ಗೂಡಿ ಪ್ರತಿಭಟಿಸುವಂತಹ ಮನೋಭಾವ ಕಾಣಬೇಕು. ಕನ್ನಡ, ನಾಡು ನುಡಿಗೆ ಬದ್ಧರಾಗಿ ಬದುಕೋಣ, ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕುಂಬಾರ ನಾಗಣ್ಣ, ಹೆಚ್. ತಿಮ್ಮಣ್ಣ, ಬಿ. ಕಶಪ್ಪ, ದುರುಗೋಜಪ್ಪ, ಅಶೋಕ್, ಮೌನೇಶ್, ಎಂ. ಗುರುಮೂರ್ತಿ, ಪಾಂಡುರಂಗಪ್ಪ, ಅಡುಗೆ ಬಸಣ್ಣ, ಮಹಾಂತೇಶ್, ಬಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.