ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ನನ್ನ ಅವಧಿಯಲ್ಲಾದ ಕೆಲಸ ನೋಡಿ ಎಲ್ಲಾ ಸಮುದಾಯಗಳು ನನ್ನ ಕೈಹಿಡಿಯಲಿವೆ: ಶಾರದಾ ಪೂರ್‍ಯಾನಾಯ್ಕ

Share Below Link

ಶಿವಮೊಗ್ಗ: ರಾಷ್ಟ್ರೀಯ ಪಕ್ಷಗಳು ದಿಕ್ಕು ತಪ್ಪುತ್ತಿರುವ ಇಂತಹ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ತುರ್ತಾಗಿದೆ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್‍ಯಾ ನಾಯ್ಕ ಅಭಿಪ್ರಾಯ ಪಟ್ಟಿzರೆ.
ಅವರು ಇಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪ್ರಸ್ತುತ ರಾಷ್ಟ್ರೀಯ ಪಕ್ಷಗಳು ತಮ್ಮ ಜವಾಬ್ದಾರಿಗಳನ್ನು ಮರೆತಿವೆ. ಜನರನ್ನು ತಲುಪುವಲ್ಲಿ ವಿಫಲವಾ ಗಿವೆ. ಸಮಸ್ಯೆಗಳು ಹೆಚ್ಚಾಗುತ್ತಿವೆ. ಇಂತಹ ಸಂದಿಗ್ಧ ಸಮಯದಲ್ಲಿ ಪ್ರಾದೇಶಿಕ ಪಕ್ಷಗಳು ಗಟ್ಟಿಗೊಳ್ಳ ಬೇಕಾಗಿದೆ ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಜನರ ಬಳಿ ಹೋಗಿದ್ದು, ನಮ್ಮ ನಾಯಕ ಹೆಚ್.ಡಿ. ಕುಮಾರ ಸ್ವಾಮಿ, ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದರು.


ತಮ್ಮ ಪತಿ ಪೂರ್‍ಯಾ ನಾಯ್ಕರ ಆದರ್ಶಗಳು ನನ್ನ ಮುಂದಿವೆ. ಅವರ ಜನಪ್ರಿಯತೆ ನನ್ನ ರಾಜಕಾ ರಣಕ್ಕೆ ತಂದಿದೆ. ಆನರು ನನ್ನನ್ನು ಪ್ರೀತಿಯಿಂದ ಜಿ.ಪಂ ಸದಸ್ಯರಾಗಿ, ಅಧ್ಯಕ್ಷರನ್ನಾಗಿ, ಶಾಸಕಿಯನ್ನಾಗಿ ಮಾಡಿzರೆ. ಈ ಎ ಅವಧಿಗಳಲ್ಲಿ ನನ್ನ ಕ್ಷೇತ್ರದ ಜನತೆಗೆ ನ್ಯಾಯ ಕೊಟ್ಟಿದ್ದೇನೆ ಎಂಬ ಭರವಸೆ ನನ್ನದು. ತಮ್ಮ ಕಾಲದಲ್ಲಿ ಮತ್ತು ಹೆಚ್.ಡಿ.ಕುಮಾರಸ್ವಾಮಿ ಯವರು ಮುಖ್ಯಮಂತ್ರಿಯಾಗಿ zಗ ಆದ ಅಭಿವೃದ್ಧಿಗಳನ್ನು ಕ್ಷೇತ್ರದ ಜನತೆ ಮರೆತಿಲ್ಲ. ಹೀಗಾಗಿ ಈ ಬಾರಿ ನನ್ನ ಗೆಲುವು ಖಚಿತ ಎಂದರು.
ಕಳೆದ ಬಾರಿ ತಮ್ಮ ಸೋಲಿಗೆ ಕಾರಣ ಏನಿರಬಹುದು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಬಾರಿ ಬಿಎಸ್. ಯಡಿಯೂರಪ್ಪನವರು ಸಿಎಂ ಎಂದು ಬಿಜೆಪಿಯಲ್ಲಿ ಬಿಂಬಿಸಲಾ ಗಿತ್ತು. ಹಾಗಾಗಿ ಬಿಜೆಪಿಗೆ ಬಿಎಸ್ ವೈ ಕಾರಣದಿಂದ ಮತ ಹಾಕಿದರು. ಆದರೆ ಈ ಬಾರಿ ಪರಿಸ್ಥಿತಿ ಹಾಗೇ ನೂ ಇಲ್ಲ. ಜನರಿಗೆ ಸ್ಪಷ್ಟತೆಯ ಅರಿವಾಗಿದೆ. ಅಷ್ಟಾದರೂ ಕಳೆದ ಬಾರಿ ತಾವು ೬೫ ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದೇನೆ. ಈ ಬಾರಿ ಆಡಳಿತ ಪಕ್ಷದ ವಿರೋಧದ ಅಲೆಯೂ ನನ್ನ ಸಹಾಯಕ್ಕೆ ಬರಲಿ ದೆ ನನ್ನ ಗೆಲುವು ಖಚಿತ ಎಂದರು.
ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಹಾಗೆಯೇ ಇದೆ. ರೈತರು ತುಂಬಾ ಸಂಕಷ್ಟದಲ್ಲಿzರೆ. ನಾನು ಶಾಸಕಿಯಾದ ಕ್ಷಣದಿಂ ದಲೂ ಈ ಸಮಸ್ಯೆ ಹಾಗೇ ಇದೆ. ಕಂದಾಯ ಸಚಿವರಾಗಿದ್ದ ಕಾಗೊ ಡು ತಿಮ್ಮಪ್ಪನವರ ನೆರವಿನಿಂದ ನಮ್ಮ ಭಾಗದಲ್ಲಿ ಕಂದಾಯ ಭೂಮಿಯಲ್ಲಿ ಸಾಗುವಳಿ ಮಾಡು ತ್ತಿದ್ದ ಅನೇಕರಿಗೆ ಹಕ್ಕುಪತ್ರ ನೀಡಿ ದ್ದೇನೆ. ಈಗ ತಾಂತ್ರಿಕ ತೊಂದರೆ ಇದೆ. ತಾವು ಗೆದ್ದು ಬಂದರೆ ಶರಾವತಿ ಮುಳುಗಡೆ ಸಂತ್ರಸ್ತ ರೈತರ ಸiಸ್ಯೆ ಬಗೆಹರಿಸುತ್ತೇನೆ ಎಂದರು.


ಜನಸ್ಪಂದನೆಯೇ ರಾಜಕಾ ರಣ, ಜನರ ಪ್ರೀತಿಯ ಮುಂದೆ ಹಣ,ಜತಿಯ ನಂಟು ಸಾಧ್ಯ ವಾಗುವುದಿಲ್ಲ . ಆದರೆ ಹಣವಂ ತರ ಮುಂದೆ ಗೆಲ್ಲುವುದು ಕೂಡ ಅಷ್ಟು ಸುಲಭವಲ್ಲ. ನನ್ನ ಕ್ಷೇತ್ರದಲ್ಲಿ ಜತಿ, ಹಣ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ನನಗಿಲ್ಲ. ಜನರ ಪ್ರೀತಿಯಂತೂ ನನ್ನ ಮೇಲಿದೆ. ಅವರ ಪ್ರೀತಿಯೇ ನನ್ನನ್ನು ಈ ಬಾರಿ ಗೆಲ್ಲಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ, ಎನ್. ಮಂಜು ನಾಥ್, ಶಿವಮೊಗ್ಗ ಜಿ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ನಾಗ ರಾಜ್ ನೇರಿಗೆ, ಹೊನ್ನಾಳಿ ಚಂದ್ರ ಶೇಖರ್, ಸಂತೋಷ್ ಕಾಚಿನಕಟ್ಟೆ ಮೊದಲಾದವರು ಉಪಸ್ಥಿತರಿ ದ್ದರು.