ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

2ಎ ಮೀಸಲಾತಿ ಪಡೆಯಲು ಒಗ್ಗಟ್ಟಿನ ಹೊರಾಟ ನಡೆಸಬೇಕಾಗಿದೆ: ಸ್ವಾಮೀಜಿ

Share Below Link

ನ್ಯಾಮತಿ: ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣ ಉದ್ಯೋಗ ಹಾಗೂ ಮುಂದಿನ ಭವಿಷ್ಯಕ್ಕಾಗಿ ನಾವು ೨ಎ ಮೀಸಲಾತಿ ಪಡೆಯಲು ನಾವು ಒಗ್ಗಟ್ಟಿನಿಂದ ಹೊರಾಟ ನಡೆಸಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.


ಅವರು ನ್ಯಾಮತಿ ಪಟ್ಟಣದ ಶ್ರೀ ಬನಶಂಕರಿ ದೇವಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಪಂಚಮ ಸಾಲಿ ಮೀಸಲು ಹೋರಾಟದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಮಗೆ ೨ಎ ಮೀಸಲಾತಿ ನೀಡಿದರೆ ಮಾತ್ರ ನಾವು ಸಂತೃಪ್ತಿ. ಅದು ಲೋಕಸಭೆ ಚುನಾವಣೆ ಯೊಳಗೆ ಘೋಷಣೆ ಮಾಡಿದ್ರೆ ಸರಿ. ಅಂದಾಗ ಮಾತ್ರ ನಿಮ್ಮ ಮೇಲೆ ನಮ್ಮ ಸಮುದಾಯದ ವಿಶ್ವಾಸ ಮೂಡಲು ಸಾಧ್ಯ. ವಿಶ್ವಾಸ ಉಳಿಕೊಳ್ಳಬೇಕಾದರೆ ಮುಖ್ಯಮಂತ್ರಿಗಳು ಮೀಸಲಾತಿ ಘೋಷಣೆಗೆ ಮುನ್ನುಡಿ ಬರೆಯ ಬೇಕು, ಹಾಲುಮತ ಸಮುದಾಯವರಿಗೆ ಎಸ್ಟಿ ಮೀಸಲಾತಿಗೆ ಶಿಫಾರಸು ಮಾಡಿ, ಅಳಿದುಳಿದ ಸ್ಥಳಗಳಿಗೆ ಪಂಚಮ ಸಾಲಿಗಳಿಗೆ ನೀಡಿ, ಅಲ್ಲದೇ, ಅದೇ ರೀತಿ ಲಿಂಗಾಯತರಿಗೂ ಸೆಂಟ್ರಲ್ ಒಬಿಸಿ ಶಿಫಾರಸು ಮಾಡಿ. ಇದಕ್ಕೇನು ಕಾನೂನು ತೊಡಕುಗಳಿಲ್ಲ. ಶಿಫಾರಸು ಮಾಡುವುದಷ್ಟೆ, ಮಾಡಿ ನಮ್ಮ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಕೊಡಿ ಎಂದು ಸರಕಾರಕ್ಕೆ ಜಯಮೃತ್ಯುಂಜ ಶ್ರೀಗಳ ಆಗ್ರಹಿಸಿzರೆ.
ದಾವಣಗೆರೆ ನಗರ ಪಾಲಿಕೆಯ ಮಾಜಿ ಮೇಯರ್ ಜಿ.ಅಜಯ್ ಕುಮಾರ್ ಮಾತನಾಡಿ, ಕೂಡಲ ಸಂಗಮ ಶ್ರೀಗಳು ೨ಎ ಮೀಸಲಾತಿಗೆ ರಾಜದ್ಯಂತ ಪ್ರವಾಸಗೊಂಡು ಹಳ್ಳಿ ಹಳ್ಳಿಗೂ ಭೇಟಿ ನೀಡಿ ನಮ್ಮ ಸಮುದಾಯಕ್ಕೆ ಈ ಹೋರಾಟಕ್ಕೆ ಬೆಂಬಲ ನೀಡಬೇಕೆಂದರು.
ಹರಿಹರದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ಸುಮಾರು ೧೩ ವರ್ಷ ಗಳಿಂದ ರಾಜ್ಯದ ಉzಗಲಕ್ಕೂ ಸಂಚಾರ ಮಾಡುವ ಮೂಲಕ ಸಮಾಜಕ್ಕೆ ೨ಎ ಮೀಸಲಾತಿ ಕೊಡಿಸಬೇಕೆಂದು ಶ್ರೀಗಳು ಹೋರಾಟ ನಡೆಸುತ್ತಿzರೆ. ಯಾರು ಸಮಾಜವನ್ನು ಕಟ್ಟುವ ಪ್ರಯತ್ನ ಮಾಡುತ್ತಾರೆ ಅಂತವರಿಗೆ ಬೆಂಬಲ ನೀಡಿ, ನೀವೆಲ್ಲ ಗುಂಪುಗಾರಿಕೆ ಬಿಟ್ಟು ಸಹಕರಿಸುವ ಮೂಲಕ ಈ ಹೋರಾಟಕ್ಕೆ ತಾವೆಲ್ಲ ಬರಬೇಕೆಂದು ಹೇಳಿದರು.
ಪಂಚಮಸಾಲಿ ಜಿಧ್ಯಕ್ಷ ಅಶೋಕ್, ಈಶ್ವರಪ್ಪ, ಜಿ ಗೌರವಾಧ್ಯಕ್ಷ ಪಂಚಾಕ್ಷರಪ್ಪ, ನ್ಯಾಮತಿ ತಾಲೂಕು ಅಧ್ಯಕ್ಷ ಪೂಜರ್ ಚಂದ್ರಶೇಖರ್, ಪ್ರಭಾ ನುಚ್ಚಿನ, ವನಜಕ್ಷಮ್ಮ, ನಾಗರತ್ನ, ಹಾಲೇಶ್, ಮಂಜುನಾಥ, ನುಚ್ಚಿನ ವಾಗೀಶ್ , ಹಲಗೇರಿ ವೀರೇಶ್ , ರವಿ ಕುಂಭಾರ ಸಮಾಜದ ಕುಂಬಾರ ಮಲ್ಲಿಕಾರ್ಜುನ ಹೊಸಮನೆ ಇನ್ನಿತರರಿದ್ದರು.
ನ್ಯಾಮತಿ ತಾಲೂಕಿನ ಬಸವನಹಳ್ಳಿ, ಮಾದನಬಾವಿ, ಕುರುವ, ಒಡೆಯರಹತ್ತೂರು , ದೊಡ್ಡೇತ್ತಿನಹಳ್ಳಿ , ಹೊನ್ನಾಳಿ ತಾಲೂಕಿನ ಮಾರಿಕೊಪ್ಪ, ಹೊಳೆಹರಳಹಳ್ಳಿ, ಕೋಟೆ ಮಲ್ಲೂರು ಗ್ರಾಮಗಳಲ್ಲಿ ಪಂಚಮ ಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿಯವರು ಭೇಟಿ ನೀಡಿ ನ.೧೦ರ ಶುಕ್ರವಾರ ದಾವಣಗೆರೆ ನಗರದ ಹೊರವಲಯದಲ್ಲಿರುವ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ಮುಂಭಾಗದಲ್ಲಿ ನಡೆಯುವ ರಾಷ್ಟ್ರೀಯ ಹೆzರಿಯನ್ನು ಬಂದು ಮಾಡಿ ಇಷ್ಟಲಿಂಗ ಪೂಜೆಯೊಂದಿಗೆ ರಸ್ತೆ ತಡೆ ಹೋರಾಟಕ್ಕೆ ಭಾಗವಹಿಸಲು ಕೆರೆ ನೀಡಿದರು.