ತಾಜಾ ಸುದ್ದಿ

ಶುಶ್ರುತ ಬೈಯೋಮೆಡಿಕಲ್ ಪ್ಲಾಂಟ್‌ಗೆ ಭೇಟಿ ನೀಡಿದ ಐಎಂಎ ವೈದ್ಯರ ತಂಡ

Share Below Link

ಶಿವಮೊಗ್ಗ: ಐಎಂಎ ಶಿವಮೊಗ್ಗದ ಸುಮಾರು ೩೫ ಸದಸ್ಯರು ಮತ್ತು ಪದಾಧಿಕಾರಿಗಳು ಮಾಚೇನಹಳ್ಳಿಯ ಶುಶ್ರುತ ಬಯೋ-ಮೆಡಿಕಲ್ ವೇಸ್ಟ್ ಮ್ಯಾನೇಜ್‌ಮೆಂಟ್ ಸೊಸೈಟಿ ನಿರ್ವಹಿಸುತ್ತಿರುವ ಬೈಯೋಮೆಡಿಕಲ್ ತ್ಯಾಜ್ಯ ಸೌಲಭ್ಯಕ್ಕೆ ಭೇಟಿ ನೀಡಿದರು.
ಈ ಘಟಕವು ಸುಮಾರು ೨೦ ವರ್ಷಗಳಿಂದ ಯಶಸ್ವಿಯಾಗಿ ಚಾಲನೆಯಲ್ಲಿರುವ ಆಸ್ಪತ್ರೆ ತ್ಯಾಜ್ಯ ವಿಲೇವಾರಿ , ಸಂಸ್ಕರಣೆ, ಪ್ರತ್ಯೇಕತೆ ಮತ್ತು ಚಿಕಿತ್ಸಾ ಸೌಲಭ್ಯದ ಸಂಸ್ಥೆಯಾಗಿದ್ದು ಇಡೀ ದೇಶದಲ್ಲಿ ವೈದ್ಯರೇ ಹುಟ್ಟುಹಾಕಿ ನಡೆಸುತ್ತಿ ರುವ ಬೆರಳೆಣಿಕೆಯ ಸಂಸ್ಥೆಗಳಂದಾಗಿದೆ . ಜೈವಿಕ ವೈದ್ಯಕೀಯ ತ್ಯಾಜ್ಯದ ನಿರ್ವಹಣೆ ಯನ್ನು ಶುಶ್ರುತ ಸಮಿತಿಯ ಅಧ್ಯಕ್ಷ ಡಾ. ಪ್ರಶಾಂತ್ ಇಸ್ಲೂರ್, ಕಾರ್ಯದರ್ಶಿ ಡಾ. ಗಿರೀಶ್ ಮತ್ತು ಡಾ. ವಿನಿತ್ ಆನಂದ್ ಅವರು ವಿವರವಾಗಿ ಎಲ್ಲ ಐಎಂಎ ಸದಸ್ಯರಿಗೆ ತಿಳಿಸಿದರು .
ತ್ಯಾಜ್ಯವನ್ನು ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಿರ್ವಹಣೆ ಮತ್ತು ಬೇಕಾದಲ್ಲಿ ಸಂಸ್ಕರಿಸಿದ ನೀರು ಹಾಗು ಪ್ಲಾಸ್ಟಿಕ್ ಮರುಬಳಕೆಯ ಪ್ರಕ್ರಿಯೆಯು ಬಹಳ ಚೆನ್ನಾಗಿ ಮೂಡಿಬರುತ್ತಿದ್ದು , ಸದಸ್ಯರಿಂದ ಮೆಚ್ಚುಗೆ ಪಡೆಯಿತು.
ಈ ಉಪಯುಕ್ತ ಚಟುವಟಿಕೆ ಯಲ್ಲಿ ಐಎಂಎ ಅಧ್ಯಕ್ಷ ಡಾ . ಅರುಣ್ ಎಂ ಎಸ್, ಕಾರ್ಯದರ್ಶಿ ಡಾ . ರಕ್ಷಾ ರಾವ್, ಉಪಾಧ್ಯಕ್ಷರಾದ ಡಾ.ರವೀಶ್ , ಡಾ| ಶಂಭುಲಿಂಗ ಹಾಗು ಸದಸ್ಯರು ಭಾಗಿಯಾಗಿದ್ದರು .