ಜಿಲ್ಲಾ ಸುದ್ದಿತಾಜಾ ಸುದ್ದಿ

ವಾಣಿಜ್ಯ ಸಂಘದಿಂದ ಬೃಹತ್ ಟ್ರೇಡ್ ಮೇಳ…

Share Below Link

ಶಿವಮೊಗ್ಗ: ನಗರದ ಉದ್ಯಮಿಗಳಿಗೆ ಅನುಕೂಲ ಕಲ್ಪಿಸು ವುದು ಹಾಗೂ ವ್ಯಾಪಾರದ ಲೈಸೆನ್ಸ್ ಪ್ರಕ್ರಿಯೆ ಸುಲಭಗೊಳಿ ಸುವ ಆಶಯದಿಂದ ಮೇಳ ಆಯೊ ಜಿಸಿದ್ದು, ಶಿವಮೊಗ್ಗ ನಗರದ ಉದ್ಯಮಿಗಳು ಸಂಪೂರ್ಣ ಸದು ಪಯೋಗ ಪಡೆದುಕೊಳ್ಳಬೇಕು ಎಂದು ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂ ಗಣದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಸಹಯೋಗದಲ್ಲಿ ಮೂರನೇ ಬಾರಿ ಆಯೋಜಿಸಿದ್ದ ಟ್ರೇಡ್ ಲೈಸೆನ್ಸ್ ಮೇಳ ಉದ್ಘಾಟಿಸಿ ಮಾತನಾಡಿ, ಲೈಸೆನ್ಸ್ ಪಡೆಯಲು ಉದ್ಯಮಿಗಳಿಗೆ ಆಗುವ ತೊಂದರೆ ಗಳನ್ನು ಪರಿಹರಿಸುವ ಆಶಯ ದಿಂದ ಮೇಳ ನಡೆಸುತ್ತಿದ್ದು, ದಾಖಲೆಗಳ ಜತೆಯಲ್ಲಿ ಅರ್ಜಿ ಸಲ್ಲಿಸಿ ಕೂಡಲೇ ಲೈಸೆನ್ಸ್ ಪಡೆಯ ಬೇಕು. ಇದರಿಂದ ಉದ್ಯಮಿಗಳಿಗೆ ಸಮಯ ಉಳಿತಾಯವಾಗಲಿದೆ ಎಂದು ತಿಳಿಸಿದರು.


ಶಿವಮೊಗ್ಗ ಮಹಾನಗರ ಪಾಲಿಕೆ ಎಇಇ ಅಮೋಘ್ ಮಾತ ನಾಡಿ, ಏಕಬಳಕೆಯ ಪ್ಲಾಸ್ಟಿಕ್ ಎಲ್ಲ ಕಡೆಗಳಲ್ಲಿ ನಿಷೇಧ ಮಾಡಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೂ ಸಾರ್ವಜನಿ ಕರು ಏಕಬಳಕೆ ಪ್ಲಾಸ್ಟಿಕ್ ಬಳಕೆ ಮಾಡಬಾರದು. ನಿಷೇಧಿತ ಪ್ಲಾಸ್ಟಿ ಕ್ ಬಳಸಿದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ್ ಹೋಬ ಳಿದಾರ್ ಮಾತನಾಡಿ, ಎರಡು ದಿನಗಳ ಕಾಲ ಟ್ರೇಡ್ ಲೈಸೆನ್ಸ್ ಮೇಳ ನಡೆಯುತ್ತಿದ್ದು, ವ್ಯಾಪಾರ ವಹಿವಾಟು ನಡೆಸುವವರು ಲೈಸೆನ್ಸ್ ಪಡೆದುಕೊಳ್ಳಬೇಕು. ಕಳೆದ ಸಾಲಿನಲ್ಲಿ ಸಾವಿರಕ್ಕೂ ಅಧಿಕ ವ್ಯಾಪಾರಸ್ಥರು ಮೇಳದ ಪ್ರಯೋ ಜನ ಪಡೆದಿದ್ದರು. ಪಾಲಿಕೆ ಸಹಯೋಗದಲ್ಲಿ ನಡೆಯುತ್ತಿರುವ ಮೇಳದ ಪ್ರಯೋಜನ ಪಡೆದುಕೊ ಳ್ಳಬೇಕು ಎಂದು ತಿಳಿಸಿದರು.
ಪಾಲಿಕೆ ಅಧಿಕಾರಿಗಳು, ಆರೋಗ್ಯ ನೀರಿಕ್ಷಕರು ಹಾಗೂ ಸಿಬ್ಬಂದಿ ಸ್ಥಳದಲ್ಲಿಯೇ ಅರ್ಜಿದಾ ರರಿಂದ ದಾಖಲೆಗಳನ್ನು ಪಡೆದು ಕೊಂಡು ಪರಿಶೀಲಿಸಿ ಲೈಸೆನ್ಸ್ ನೀಡುವ ಕೆಲಸ ಮಾಡುತ್ತಿzರೆ. ಎರಡು ದಿನ ( ಮಂಗಳವಾರ ಮತ್ತು ಬುಧವಾರ ) ನಡೆಯುವ ಮೇಳದ ಸದುಪಯೋಗ ವ್ಯಾಪಾ ರಸ್ಥರು ಪಡೆದುಕೊಳ್ಳುವಂತೆ ಪಾಲಿಕೆ ಅಧಿಕಾರಿಗಳು ಮನವಿ ಮಾಡಿzರೆ.
ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್‍ಯದರ್ಶಿ ಜಿ.ವಿಜಯ್ ಕುಮಾ ರ್, ನಿರ್ದೇಶಕರಾದ ಗಣೇಶ್ ಅಂಗಡಿ, ಮಂಜೇಗೌಡ, ಜವಳಿ ವರ್ತಕರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್, ಕಾರ್‍ಯದರ್ಶಿ ಪ್ರಭಾ ಕರ್, ಪಾಲಿಕೆ ಆರೋಗ್ಯ ನೀರಿ ಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.