ತಾಜಾ ಸುದ್ದಿಶಿಕ್ಷಣ

ಅ.2: ಶಾಂತಿ ನಡಿಗೆ ಜಾಥ…

Share Below Link

ಶಿವಮೊಗ್ಗ: ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಗೀತಾಗಾಯನ ಶಾಂತಿ ನಡಿಗೆ ಜಥಾವನ್ನು ಅ.೨ರ ನಾಳೆ ಬೆಳಗ್ಗೆ ೧೦ ಗಂಟೆಗೆ ಶಿವಮೊಗ್ಗ ತಾಲ್ಲೂಕ್ ಹೊಳಲೂರಿನ ಗಾಂಧಿ ಸರ್ಕಲ್‌ನಲ್ಲಿ ಏರ್ಪಡಿಸಲಾಗಿದೆ ಎಂದು ಪತಂಜಲಿ ಜೆ.ನಾಗರಾಜ್ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಪ್ರತಿವರ್ಷದಂತೆ ಈ ವರ್ಷವು ನಿರಂತರವಾಗಿ ಗಾಂಧಿ ಜಯಂತಿ ಯನ್ನು ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಸಹಾಯ ಸಂಘಗಳ ಒಕ್ಕೂಟದ್ತ ಆಶ್ರಯದಲ್ಲಿ ಏರ್ಪಡಿಸಲಾಗಿದೆ ಎಂದರು.
ಹೊಳಲೂರು ಗ್ರಾಪಂ ಅಧ್ಯಕ್ಷೆ ಸವಿತಾ ಅವರು ಮಹಾತ್ಮ ಗಾಂಧಿ ಪ್ರತಿಮೆಗೆ ಮಾರ್ಲಾಪಣೆ ಮಾಡಿ ಚಾಲನೆ ನೀಡುವರು. ಎ.ಪಿ.ಕೋಟ್ರೇಶ್ ಪರಮಶಿವ ಅಧ್ಯಕ್ಷತೆ ವಹಿಸುವರು.
ಪತಂಜಲಿ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪರಿಸರ ಸಿ.ರಮೇಶ್ ಮಾತನಾಡಿ, ಪತಂಜಲಿ ಕಲಾ ತಂಡದ ಕಲಾವಿದರಿಂದ ನಾಡು ನುಡಿಗೆ ಸಂಬಂಧಿಸಿದಂತೆ ದೇಶಭಕ್ತಿಗೀತೆ, ಜನಪದ ಗೀತೆ, ಪರಿಸರ ಗೀತೆ, ನಡೆಸಲಾಗುವುದು, ಸರ್ಕಾರಿ ಶಾಲಾ ಮಕ್ಕಳು ಹಾಗೂ ಗ್ರಾಮಸರಿಂದ ಪ್ರತಿeವಿಧಿ ಸ್ವೀಕಾರ ಶಾಂತಿ ನಡೆಗೆ ಜಥಾವನ್ನು ಏರ್ಪಡಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಂ. ಪೂವಯ್ಯ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *