ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ನಿಯಮ ಉಲ್ಲಂಘಿಸಿ ಸಿಎಂ ಪತ್ನಿ ಹೆಸರಿಗೆ ಮೂಡಾ ನಿವೇಶನ: ಮೇಘರಾಜ್

Share Below Link

ಶಿವಮೊಗ್ಗ : ನಿಯಮಗಳನ್ನೆಲ್ಲ ಉಲ್ಲಂಘಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಹೆಸರಿಗೆ ನಿವೇಶನಗಳನ್ನು ಮಂಜೂರು ಮಾಡಲಾಗಿದೆ ಎಂದು ಜಿ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಸುದ್ದಿಗೋಷ್ಟಿಯಲ್ಲಿ ಆರೋಪಿಸಿzರೆ.
ಸುಪ್ರೀಂ ಕೋರ್ಟ್ ತೀರ್ಪು, ಪಾರದರ್ಶಕ ಕಾಯ್ದೆ ಉಲ್ಲಂಘನೆ ಹಾಗೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸದೆ ಮೂಡಾ(ಮೈಸೂರು ನಗರಾಭಿವೃದ್ಧಿ ಪ್ರಾಕಾರ) ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮನವರ ಹೆಸರಿಗೆ ಮಂಜೂರು ಮಾಡಿ ಎ ನಿಯಮಗಳನ್ನು ಉಲ್ಲಂಘಿಸಿರು ವುದು ಸ್ಪಷ್ಟವಾಗಿದೆ ಎಂದರು.
ಸ್ವಾಧೀನ ಮಾಡಿಕೊಂಡ ಭೂಮಿಯಲ್ಲಿ ೫೦:೫೦ ಅನುಪಾತದಲ್ಲಿ ಭೂಮಾಲೀಕರಿಗೆ ನಿವೇಶನ ನೀಡಬೇಕೆಂಬ ನಿಯಮವನ್ನು ಉಲ್ಲಂಘಿಸಲಾಗಿದೆ. ಎಲ್ಲಿ ಭೂಸ್ವಾಧೀನ ಆಗಿದೆಯೋ ಅಲ್ಲಿಯೇ ನಿವೇಶನ ನೀಡಬೇಕು. ಆದರೆ ೧೯೮೩ರಲ್ಲಿ ಅಭಿವೃದ್ಧಿಪಡಿಸಿದ ವಿಜಯನಗರ ಬಡಾವಣೆಯಲ್ಲಿ ೧೪ ಬಿಡಿ ನಿವೇಶನಗಳನ್ನು ನೀಡಲಾಗಿದೆ ಎಂದರು.
ಭೂಸ್ವಾಧೀನಕ್ಕೆ ಸಂಬಂಸಿದಂತೆ ಸುಪ್ರೀಂ ಕೋರ್ಟ್ ೨೦೦೯ರಲ್ಲಿ ನೀಡಿದ ತೀರ್ಪಿನ ಉಲ್ಲಂಘಿಸಿ ಘಟನೆ ಮಾಡಲಾಗಿದೆ. ಪರಿಹಾರ ನೀಡಲು ಅಥವಾ ಬೇರೆ ಕಡೆ ಬದಲಿ ನಿವೇಶನ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಅಭಿವೃದ್ಧಿಪಡಿಸಲಾದ ಬಡಾವಣೆಯಲ್ಲಿ ಭೂಮಾಲೀಕರಿಗೆ ಕೊಟ್ಟು ಉಳಿದ ಬಿಡಿ ನಿವೇಶನಗಳನ್ನು ಹರಾಜು ಮಾಡಬೇಕು. ಉಳಿಕೆ ನಿವೇಶನಗಳನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ, ಪದ್ಮಶ್ರೀ, ಪದ್ಮಭೂಷಣ ಮೊದಲಾದ ಪುರಸ್ಕಾರಗಳನ್ನು ಪಡೆದವರಿಗೆ ನೀಡುವದು ನಿಯಮ. ಆದರೆ ಇಲ್ಲಿ ಪಾರ್ವತಮ್ಮನವರು ಅಂತಹ ಯಾವುದೇ ಸಾಧನೆ ಮಾಡಿಲ್ಲ ಎಂದರು.
ಭೈರತಿ ಸುರೇಶ್ ಸಿಎಂ ಆಪ್ತರಾಗಿದ್ದು, ಅವರ ಕೃಪ ಕಟಾಕ್ಷದಿಂದಲೇ ಮಂತ್ರಿ ಆಗಿzರೆ. ಅದರಲ್ಲೂ ನಗರಾಭಿವೃದ್ಧಿ ಖಾತೆಯನ್ನೇ ನೀಡಲಾಗಿದೆ. ಅದೇ ಕಾರಣಕ್ಕೆ ಸಿಎಂ ಋಣ ತೀರಿಸಲು ಭೈರತಿ ಸುರೇಶ್ ಮುಂದಾಗಿzರೆ. ಇದರಲ್ಲಿ ಸಿಎಂ ಸಿದ್ದರಾಮಯ್ಯನವರ ಪ್ರಭಾವ ಇರುವುದು ಸ್ಪಷ್ಟವಾಗಿದೆ ಎಂದರು.
ಮುಡಾ ಬಡಾವಣೆಗೆ ಹೊಂದಿಕೊಂಡಿರುವ ಅಕ್ರಮ ಲೇಔಟ್‌ಗೆ ಅಕ್ರಮ ರಸ್ತೆ ಸಂಪರ್ಕ ಮಾಡಲಾಗಿದೆ. ಇದಕ್ಕೆ ಮುಡಾದಿಂದ ಹಣ ಪಡೆಯಲಾಗಿದೆ. ಅಕ್ರಮ ಬಡಾವಣೆ ಅಭೀವೃದ್ಧಿಗೆ ಕೋಟ್ಯಂತರ ರೂ. ಹಣ ನೀಡಲಾಗಿದೆ. ಇದರಲ್ಲಿಯೂ ಸಿದ್ದರಾಮಯ್ಯನವರ ಪ್ರಭಾವ ನಿರುವುದು ಸ್ಪಷ್ಟವಾಗಿದೆ ಎಂದರು.
ಮುಡಾ ಹಗರಣ ತನಿಖೆಗೆ ಇಬ್ಬರು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಲು ತಂಡ ರಚಿಸಲಾಗಿದೆ. ಇದು ಕೂಡ ನೆಪ ಮಾತ್ರದ ತನಿಖಾ ತಂಡವಾಗಿದೆ. ತನಿಖೆ ಮೂಲಕ ಈಡೀ ಪ್ರಕರಣವನ್ನು ತಿಪ್ಪೆ ಸಾರಿಸುವ ಬದಲಾಗಿದೆ ಸಿಎಂ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಿಬಿಐ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಶಿವರಾಜ್, ಎಂ.ಬಿ.ಹರಿಕೃಷ್ಣ, ಕೆ.ವಿ.ಅಣ್ಣಪ್ಪ, ಚಂದ್ರಶೇಖರ್ ಇದ್ದರು.