ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ವಿದ್ಯೆ ನಮ್ಮನ್ನು ಯಶಸ್ಸಿನ ದಡ ಮುಟ್ಟಿಸುತ್ತದೆ: ನೃಪತುಂಗ

Share Below Link

ಶಿವಮೊಗ್ಗ : ವಿದ್ಯಾರ್ಥಿಗಳು ವಾಸ್ತವತೆಯನ್ನು ವಿಮರ್ಶಿಸುವ ವೈeನಿಕ ಚಿಂತನೆ ಯೊಂದಿಗೆ ಬದುಕಿಗೆ ಸಾಹಿತ್ಯವೆಂಬ ಭಾವನೆಯ ಸ್ಪರ್ಶ ನೀಡಲು ಪ್ರಯತ್ನಿಸಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ಹೇಳಿದರು.
ನಗರದ ಜೆ.ಪಿ.ಎನ್ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಉಚಿತ ವಾಗಿ ನೀಡಲಾದ ಪಠ್ಯಪುಸ್ತಕ ವಿತರಿಸಿ ಅವರು ಮಾತನಾಡಿದರು.
ವೈeನಿಕ ಅರಿವಿನ ಜೊತೆಗೆ ಸಾಹಿತ್ಯಾತ್ಮಕ ಚಿಂತನೆ ಅತ್ಯವಶ್ಯಕ ವಿಚಾರವಾಗಿದೆ. ಹಾಗಾಗಿಯೇ ನಮ್ಮ ಶೈಕ್ಷಣಿಕ ಅಧ್ಯಯನ ಪಠ್ಯಕ್ರಮ ಗಳು ವಿವಿಧ ವಿಷಯಗಳನ್ನು ಒಳಗೊಂಡಿದೆ. ಪ್ರತಿಯೊಂದು ವಿಷಯಗಳನ್ನು ಆಸಕ್ತಿಯಿಂದ ಅಧ್ಯಯನ ನಡೆಸಿ ಎಂದರು.
ನಮ್ಮ ನಡುವೆ ಅನೇಕ ದುರಾಭ್ಯಾಸಗಳು ಆಕರ್ಷಣೀಯ ವಾಗಿ ಕಾಣುತ್ತದೆ. ಅಂತಹ ಆಕರ್ಷಣೆಗಳು ಅಲ್ಪ ಮಾತ್ರ ವಾಗಿದ್ದು, ನಾವು ಕಲಿತ ವಿದ್ಯೆ ಮತ್ತು ಸೃಜನಶೀಲ ಚಿಂತನೆಗಳೆ ನಮ್ಮನ್ನು ಯಶಸ್ಸಿನ ದಡಕ್ಕೆ ಮುಟ್ಟಿಸಲಿದೆ ಎಂದು ಹೇಳಿದರು.