ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಡಿಜಿಟಲ್ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ: ಬಿಜೆಪಿ ಕಾರ್ಯಕರ್ತರಿಗೆ ಕರೆ

Share Below Link

ಶಿವಮೊಗ್ಗ: ಪ್ರಸ್ತುತ ಸಾಮಾಜಿಕ ಜಲತಾಣ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮಾಹಿತಿ ತಂತ್ರeನ ಸಚಿವ ಅಶ್ವತ್ ನಾರಾಯಣ್ ಹೇಳಿದರು.
ಅವರು ಇಂದು ನಗರದ ಶುಭಮಂಗಳ ಸಮುದಾಯ ಭವನದಲ್ಲಿ ನಡೆದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನದಲ್ಲಿ ಮಾತನಾಡಿ, ೨೪೭ ಸಾಮಾಜಿಕ ಜಲತಾಣಗಳಲ್ಲಿ ನಮ್ಮ ಕಾರ್ಯ ಕರ್ತರು ದುಡಿಯುತ್ತಿzರೆ. ಅದ ರಲ್ಲೂ ಚುನಾವಣೆ ಸಮಯದಲ್ಲಿ ಬಹಳ ಪರಿಣಾಮಕಾರಿಯಾಗಿ ಬಿಂಬಿಸಬೇಕಾಗುತ್ತದೆ. ಹೊಸ ಹೊಸ ವಿಚಾರಗಳ ಮೂಲಕ ಜನರ ಗಮನ ಸೆಳೆಯಬೇಕಿದೆ ಎಂದರು.
ಪ್ರತಿಪಕ್ಷಗಳು ಕಡೆಗಣಿಸಿರುವ ವಿಚಾರವನ್ನು ನಾವು ಹೈಲೈಟ್ ಮಾಡಬೇಕಿದೆ. ನಮ್ಮ ವ್ಯವಸ್ಥೆ ಯಲ್ಲಿ ಡಿಜಿಟಲ್ ಮೂಲಕ ಹೆಚ್ಚು ಹೆಚ್ಚು ಜನರನ್ನು ಪರಿಣಾಮಕಾರಿ ಯಾಗಿ ತಲುಪಬೇ ಕಿದೆ. ಸಮಾ ಜದ ಸಮಸ್ಯೆಗಳನ್ನು ನಿವಾರಿಸುವ ದೃಷ್ಟಿಯಿಂದ ಸಾಮಾ ಜಿಕ ಜಲ ತಾಣಗಳನ್ನು ಸದ್ಭಳಕೆ ಮಾಡಿ ಕೊಳ್ಳಬೇಕಿದೆ ಎಂದರು.
ಸಾಮಾಜಿಕ ಜತಾಣದ ಮೂಲಕ ಪ್ರತಿಯೊಬ್ಬ ನಾಗರೀಕ ನನ್ನು ತಲುಪಲು ಸಾಧ್ಯವಿದೆ. ದೇಶ ಮತ್ತು ಸಮಾಜವನ್ನು ಕಾಪಾಡುವ ದೃಷ್ಟಿಯಿಂದ ಪ್ರತಿಯೊಬ್ಬ ವ್ಯಕ್ತಿ ಯಲ್ಲಿ ಜಗೃತಿ ಮೂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ಮೂಲಕ ಮೊಬೈಲ್ ಮೂಲಕ ಅವರನ್ನು ತಲುಪಿ ತಿಳುವಳಿಕೆ ಮೂ ಡಿಸುವ ಅಗತ್ಯವಿದೆ ಎಂದರು.
ನಾಗರಿಕರಿಗೆ ಹೆಚ್ಚು ಹೆಚ್ಚು ತಿಳುವಳಿಕೆ ನೀಡುವ ಮೂಲಕ ಚುನಾವಣೆಗೆ ತಯಾರಿ ನಡೆಸ ಬೇಕಿದೆ. ವ್ಯವಸ್ಥೆ ಸಡಿಲಗೊಳಿಸುವ ಬಗ್ಗೆ ಆದ್ಯತೆ ನೀಡಬೇಕಿದೆ. ಈ ಮೂಲಕ ಸುಲಭವಾಗಿ, ಸರಳ ವಾಗಿ ಆಡಳಿತ ನಡೆಸಲು ಬಿಜೆಪಿ ಸರ್ಕಾರ ಒತ್ತು ನೀಡಿದೆ ಎಂದರು.
ರಾಷ್ಟ್ರೀಯ ಹೆದ್ಧಾರಿಗಳು, ರೈಲ್ವೆ ಅಭಿವೃದ್ಧಿ ಸೇರಿದಂತೆ ಹಲ ವಾರು ಯೋಜನೆಗಳನ್ನು ಪೂರೈ ಸಿದೆ. ದೇಶದಲ್ಲಿ ಹಲವಾರು ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಮುಂದಾಗಿದೆ. ನಮ್ಮ ಸಂಸ್ಕತಿ, ಆಚಾರ, ವಿಚಾರ, ಧರ್ಮವನ್ನು ಉಳಿಸಿಕೊಳ್ಳುವ ಅಗತ್ಯವಿದ್ದು, ಇದಕ್ಕೆ ನಮ್ಮ ಪಕ್ಷ ಮುಂದಾಗಿದೆ. ಎಂದರು.
ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಿದರೆ, ಭಾರತಕ್ಕೆ ನೀಡಿದಂತೆ. ನಮ್ಮ ನಂಬಿಕೆಯ ಧಾರ್ಮಿಕ ಕೇಂದ್ರಗಳನ್ನು ಉಳಿಸಿ ಅಭಿವೃದ್ಧಿ ಮಾಡುತ್ತಿರುವ ಪಕ್ಷ ಬಿಜೆಪಿ. ನರೇಂದ್ರ ಮೋದಿಯ ವರು ಇಡೀ ವಿಶ್ವವೇ ಮೆಚ್ಚಿರುವ ನಾಯಕ. ಬೇರೆ ದೇಶಗಳಿಗೆ ನಮ್ಮ ದೇಶದ ಆರ್ಥಿಕ ಬೆಳವಣಿಗೆ ಉತ್ತ ಮವಾಗಿದೆ. ಆರ್ಥಿಕ ಬೆಳವಣಿಗೆ ಯಲ್ಲಿ ಇಡೀ ವಿಶ್ವದ ಭಾರತ ನಂ. ೧ ಸ್ಥಾನದಲ್ಲಿದೆ ಎಂದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದು, ಅಧಿಕಾರಕ್ಕೆ ಬರುವ ಗ್ಯಾರಂಟಿ ಇಲ್ಲದೆ ಭರವಸೆ ನೀಡುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸುಳ್ಳು ಭರವಸೆ ನೀಡುತ್ತಿವೆ. ಜನರು ಇವರನ್ನು ನಂಬುತ್ತಿಲ್ಲ. ಆದರೂ ಕೂಡ ಜನರು ಇವರ ಭರವಸೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದರು.
ಅಮೂಲ್ ಉತ್ಪನ್ನಗಳು ಕಳೆದ ಹಲವಾರು ವರ್ಷಗಳಿಂದ ರಾಜ್ಯ ದಲ್ಲಿ ಮಾರಾಟವಾಗುತ್ತಿವೆ. ಅಮೂಲ್ ರಾಜ್ಯಕ್ಕೆ ಹೊಸದೇನೂ ಅಲ್ಲ. ಅಮೂಲ್ ಉತ್ಪನ್ನಗಳಿಂದ ನಂದಿನಿ ಸಂಸ್ಥೆ ಮೇಲೆ ಯಾವುದೇ ಪರಿ ಣಾಮ ಬೀರಲ್ಲ. ನಮ್ಮ ನಂದಿನಿಗೆ ಉತ್ತೇಜನ ನೀಡಿ ಉತ್ತಮ ಬೆಳ ವಣಿಗೆಯಾಗಿದೆ. ಹೊರ ರಾಜ್ಯ ದಲ್ಲೂ ಕೂಡ ನಂದಿನಿ ಉತ್ಪನ್ನಗಳು ಮಾರಾಟವಾಗುತ್ತವೆ. ಡಿ.ಕೆ. ಶಿವಕುಮಾರ್‌ಗೆ ಇದ್ದಕ್ಕಿ ದ್ದಂತೆ ನಂದಿನಿ ನೆನಪಾಗಿದೆ. ನಂದಿನಿ ಬಗ್ಗೆ ಮಾತನಾಡುವ ಇವರ ಮನೆಯಲ್ಲಿ ಅಮೇಜನ್ ನಿಂದ, ಫ್ಲಿಪ್ ಕಾರ್ಟ್‌ನಿಂದ, ವಾಲ್ ಮಾರ್ಟ್ ನಿಂದ ಏನೇನು ತರಿಸಿಕೊಳ್ಳುತ್ತಾರೆ ಗೊತ್ತಾ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್ ಅರುಣ್, ಜಿ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಗಿರೀಶ್ ಪಟೇಲ್, ಮೋನಪ್ಪ ಭಂಡಾರಿ, ಮೇಯರ್ ಶಿವಕು ಮಾರ್, ವಿಕಾಸ್ ಪುತ್ತೂರು, ಮಹೇಶ್ ಪೂಜರಿ, ಶರತ್ ಕಲ್ಯಾಣಿ ಸೇರಿದಂತೆ ಇದ್ದರು.