ಜೂ.೨:ಪ್ರತಿಭಾ ಪುರಸ್ಕಾರ…
ಹೊನ್ನಾಳಿ: ತಾಲೂಕು ಪಂಚಮಸಾಲಿ ಸಮಾಜವು ಜೂ.೨ರ ಭಾನುವಾರ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿರುವ ಪಂಚಮಸಾಲಿ ಸಮಾಜದ ಎಸ್ಎಸ್ಎಲ್ಸಿ – ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ ಹೇಳಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಪಂಚಮಸಾಲಿ ಸಮಾಜದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾರಂಭಕ್ಕೆ ಪಂಚಮಸಾಲಿ ಜಗದ್ಗುರು ವಚನಾನಂದ ಸ್ವಾಮಿಜಿಗಳು ಪೀಠದ ಧರ್ಮದರ್ಶಿ ಬಿಸಿ ಉಮಾಪತಿ ಮಾಜಿ ಸಚಿವ ಮುರುಗೇಶ್ ನಿರಾಣಿ, ಪಂಚಮಸಾಲಿ ರಾಜ್ಯ ಕಾರ್ಯಧ್ಯಕ್ಷ ಸೋಮನಗೌಡ, ರಾಜ್ಯ ಗಡಿ ನಾಡು ಅಭಿವದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೆವಿನಮರದ್ ಅವರು ಆಗಮಿಸುವುದಾಗಿ ತಿಳಿಸಿದರು.
ಎಸ್ಎಸ್ಎಲ್ಸಿ ಹಾಗು ಪಿಯುಸಿ ಶೇ.೬೦ಕ್ಕೂ ಹೆಚ್ಚು ಅಂಕ ಪಡೆದವರನ್ನ ಹಾಗು ನಿವೃತ್ತ ನೌಕರರನ್ನು ಸನ್ಮಾನಿಸಲಾಗುವುದು.
ಸಮಾರಂಭದಲ್ಲಿ ಪಿಠದ ಆಡಳಿತಾಧಿಕಾರಿ ಡಾ. ರಾಜಕುಮಾರ, ಪಟ್ಟಣಶಟ್ಟಿ ಪರಮೇಶ, ಕುಂಕೊದ ಸೋಮಣ್ಣ ಕುಂಕೋದ್ ಹಾಲೇಶ, ಚನ್ನಮುಂಬಾಪುರದ ಚಂದ್ರಶೇಕರ, ಒಡೆರಹತ್ತೂರು ಅಶೋಕ್ ಮಾತನಾಡಿದರು.
ಪೇಟಿ ಮಶ್ ಮಠ ಬಸಣ್ಣ ಮೆಕ್ಕೆಜೋಳ ಚನ್ನೇಶ, ಕೆವಿ ಪ್ರಸನ್ನ, ಮತ್ಯುಂಜಯ ಪಾಟೀಲ್, ಪಲ್ಲವಿ ರಾಜು, ಗಮಕಿ ವಿಶ್ವಣ್ಣ ದಿವಾಕರ್, ಪಿ ವಿಜಯ್,ಹೊಟಲ್ ಗಿರಿ, ಮಲ್ಲೂರು ರಾಜು, ಗಿರೀಶ್ ನಾಡಿಗ್, ಮಹಿಳಾ ಸದಸ್ಯರಾದ ಶಿಲ್ಪಾರಾಜುಗೌಡ ,ಶಶಿ ದಿವಾಕರ್, ಸುಮಾರವಿ,ಕೊಮಲಾನಾಡಿಗ್ ಇನ್ನಿತರರಿದ್ದರು.
![](https://i0.wp.com/hosanavika.com/wp-content/uploads/2024/05/Arya-coll.gif?resize=800%2C666&ssl=1)
![](https://i0.wp.com/hosanavika.com/wp-content/uploads/2024/05/nes-add-new-3.gif?resize=644%2C1024&ssl=1)
![](https://i0.wp.com/hosanavika.com/wp-content/uploads/2024/04/JNNCE.gif?resize=800%2C953&ssl=1)