ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಪರೋಕ್ಷವಾಗಿ ಸಚಿವ ಮಧು ಬಂಗಾರಪ್ಪರನ್ನು ತಿವಿದ ಬಿವೈಆರ್

Share Below Link

ಶಿಕಾರಿಪುರ: ಕೆಲವರು ತಮ್ಮ ಪಾದಯಾತ್ರೆಯಿಂದಾಗಿಯೇ ತಾಲೂಕಿನ ನೀರಾವರಿ ಯೋಜನೆ ಗಳು ಅನುಷ್ಠಾನಗೊಂಡವು ಎಂದು ಹೇಳುತ್ತಿzರೆ. ಈ ಹಿಂದೆ ಇವರದೇ ಸರ್ಕಾರ ಇದ್ದು, ಇವರ ತಂದೆಯೇ ಮುಖ್ಯಮಂತ್ರಿ ಆಗಿದ್ದರು, ಲೋಕಸಭಾ ಸದಸ್ಯರೂ ಆಗಿದ್ದರು ಆದರೂ ಏಕೆ ನೀರಾವರಿ ಯೋಜನೆ ಗಳನ್ನು ಅನುಷ್ಠಾನಗೊಳಿಸಲಿಲ್ಲ ಎಂದು ಸಂಸದ ಬಿ ವೈ ರಾಘವೇಂದ್ರ ಪರೋಕ್ಷವಾಗಿ ಸಚಿವ ಮಧು ಬಂಗಾರಪ್ಪನವರನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಈಸೂರು, ಉಡುಗಣಿ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿ ಮಳೆ ಅಭಾವದಿಂದ ಹಾನಿಗೀಡಾದ ಫಸಲಿನ ಬಗ್ಗೆ ಅಧ್ಯಯನ ನಡೆಸಿ ನಂತರದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಬೇರೆಯವರ ಮನೆಯ ಒಲೆಯಲ್ಲಿ ಕೈಕಾಯಿಸಿಕೊಳ್ಳಬೇಡಿ ನಿಮ್ಮದೇ ಸರ್ಕಾರ, ಅಧಿಕಾರ ಇzಗ ಯೋಜನೆಗಳನ್ನು ಜರಿಗೊಳಿಸದೆ ಬಿಜೆಪಿ ಸರ್ಕಾರದ ಯೋಜನೆಗಳನ್ನು ನಾವು ಜರಿಗೊಳಿಸಿದ್ದು ಎಂದು ಜನರನ್ನು ತಪ್ಪು ದಾರಿಗೆ ಎಳೆಯಬೇಡಿ ಕುಟುಕಿದರು.
ಇದೀಗ ಏಳು ಗಂಟೆ ವಿದ್ಯುತ್ ಕೊಡುತ್ತೇವೆ ಎಂದು ಹೇಳುವ ಸಿಎಂ ಅವರು ಜುಲೈ, ಆಗಸ್ಟ್, ತಿಂಗಳಲ್ಲಿ ಏಳು ಗಂಟೆ ಸಮರ್ಪಕ ವಿದ್ಯುತ್ ಕೊಟ್ಟಿದ್ದರೆ ರೈತರು ಮೆಕ್ಕೆಜೋಳ ಹಾಗೂ ಭತ್ತದ ಬೆಳೆಯನ್ನು ಉಳಿಸಿಕೊಳ್ಳುತ್ತಿದ್ದರು ಆದರೆ ಸರ್ಕಾರದ ಅವೈeನಿಕ ನೀತಿಯಿಂದಾಗಿ ರೈತರು ಸಂಪೂರ್ಣ ಫಸಲನ್ನು ಹಾಳು ಮಾಡಿಕೊಳ್ಳುವಂತಾಯಿತು ಎಂದು ದೂರಿದರು.
ತಾಲೂಕಿನಲ್ಲಿ ೩೯೮೦ ಹೆಕ್ಟೆರ್ ಭತ್ತದ ಬೆಳೆ ಹಾಗೂ ೧೬೨೧೦ ಹೆಕ್ಟೆರ್ ಮೆಕ್ಕೆಜೋಳದ ಬೆಳೆಯು ಹಾಳಾಗಿದ್ದು ಒಟ್ಟಾರೆ ೨೦೧೯೦ ಹೆಕ್ಟೆರ್ ಬೆಳೆಯು ನಾಶವಾಗಿದೆ ಕೂಡಲೇ ರಾಜ್ಯ ಸರ್ಕಾರವು ಎಸ್ ಡಿ ಆರ್ ಎಫ್ ಹಣದಿಂದ ಜಿದಧಿಕಾರಿಗಳ ಮೂಲಕ ತಕ್ಷಣವೇ ಬೆಳೆ ಹಾನಿಯಾದ ರೈತರಿಗೆ ಪರಿಹಾರವನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಏನ್ ಡಿ ಆರ್ ಎಫ್ ಮೂಲಕ ಕೇಂದ್ರ ಸರ್ಕಾರವು ಶೀಘ್ರದ ಹಣವನ್ನು ಬಿಡುಗಡೆ ಮಾಡಲಿದ್ದು ಅದಕ್ಕೆ ಮ್ಯಾಚಿಂಗ್ ಗ್ರಾಂಟ್ ಆಗಿ ಎಸ್ಟಿಆರ್‌ಎಫ್ ಮೂಲಕ ಅಷ್ಟೇ ಮೊತ್ತದ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದ ಅವರು ಎನ್ ಡಿ ಆರ್ ಎಫ್ ಮೂಲಕ ೮೦೦೦೦ ಕೋಟಿ ಪರಿಹಾರಕ್ಕಾಗಿ ರಾಜ್ಯ ಸರ್ಕಾರವು ಮನವಿ ಸಲ್ಲಿಸಿದೆ.ಶೀಘ್ರವೇ ಕೇಂದ್ರ ಸರ್ಕಾರವು ಅನುದಾನವನ್ನು ಬಿಡುಗಡೆಗೊಳಿಸಲಿದೆ ಆದರೆ ಅಷ್ಟೇ ಪ್ರಮಾಣದ ಹಣವನ್ನು ರಾಜ್ಯ ಸರ್ಕಾರವು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ವಿಧಾನಸಭೆಯಲ್ಲಿ ವಿರೋಧ ಪಕ್ಷ ನಾಯಕನಿಲ್ಲದೆ ಬರ ಅಧ್ಯಯನ ನಡೆಸುತ್ತಿರುವುದು ಎಷ್ಟು ಪ್ರಸ್ತುತ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಂಸದರು ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷ ನಾಯಕನ ಸ್ಥಾನವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ಸಿಗೆ ಸಾಧ್ಯವಾಗಿಲ್ಲ, ಕಾಂಗ್ರೆಸ್ನವರು ತಮ್ಮ ತಟ್ಟೆಯಲ್ಲಿ ಬಿದ್ದ ಹೆಗ್ಗಣವನ್ನು ಮರೆತು ವಿರೋಧ ಪಕ್ಷದ ತಟ್ಟೆಯಲ್ಲಿನ ನೊಣವನ್ನು ಎತ್ತಿ ಹೇಳುತ್ತಿzರೆ ಎಂದು ಕಿಡಿಕಾರಿದರು.
ಬಿಜೆಪಿ ವತಿಯಿಂದ ನಡೆಸುತ್ತಿರುವ ಬರ ಅದ್ಯಯನದ ವರದಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದಾಗಿ ಸಂಸದರು ಹೇಳಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಶಾಸಕ ಚನ್ನಬಸಪ್ಪ,ಜಿ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್,ಮಾಜಿ ಶಾಸಕ ಅಶೋಕ್ ನಾಯ್ಕ್,ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ,ಸಾರೆಕೊಪ್ಪ ರಾಮಚಂದ್ರ,ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ಉಪಾಧ್ಯಕ್ಷ ಕೆ.ರೇವಣಪ್ಪ,ತಾಲೂಕು ರೈತ ಮೋರ್ಚಾ ಅಧ್ಯಕ್ಷ ಕುಮಾರ್ ಗೌಡ,ಕವಲಿ ಸುಬ್ರಹ್ಮಣ್ಯ,ನಿಂಬೆಗೊಂದಿ ಸಿದ್ದಲಿಂಗಪ್ಪ,ರಾಜಶೇಖರ್ ಗೌಡ ಮತ್ತಿತರರು ಉಪಸ್ಥಿತರಿದ್ದರು.