ಜಿಲ್ಲಾ ಸುದ್ದಿತಾಜಾ ಸುದ್ದಿ

ಕಾನೂನಿನ ಅರಿವಿನಿಂದ ಕೋರ್ಟ್ ಅಲೆದಾಟ ತಪ್ಪಿಸಬಹುದು…

Share Below Link

ಹೊನ್ನಾಳಿ: ಮನುಷ್ಯ ಹುಟ್ಟಿ ನಿಂದ ಸಾಯುವವರೆಗೆ ಕಾನೂನನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಲೇಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀ ಶರಾದ ಆರ್. ಮಂಜುನಾಥ್ ಅವರು ತಿಳಿಸಿದರು.
ಅವರು ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯ ಕ್ರಮದಲ್ಲಿ ಮಾತನಾಡಿದರು.
ಸಾರ್ವಜನಿಕರಲ್ಲಿ ಕಾನೂನಿನ ಅರಿವು ಮೂಡಿಸುವುದರ ಮೂಲಕ ಅಪರಾಧಗಳನ್ನು ತಡೆಗಟ್ಟಬಹುದು, ಈ ನಿಟ್ಟಿನಲ್ಲಿ ಉಚಿತವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿಯು ಕಾರ್ಯ ನಿರ್ವಹಿಸು ತ್ತಿದೆ ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳ ಬಹುದಾಗಿದೆ ಎಂದು ಸಲಹೆ ನೀಡಿದರು.
ಕೋರ್ಟ್‌ಗಳಲ್ಲಿ ಬಗೆಹರಿಯದ ಎಷ್ಟೋ ಪ್ರಕರಣ ಗಳು ರಾಜಿ ಸಂಧಾನದ ಮೂಲಕ ಲೋಕ ಅದಾಲತ್ ಕಾರ್ಯ ಕ್ರಮದಲ್ಲಿ ಬಗೆಹರಿಯುತ್ತವೆ ಇದರಿಂದ ಜನಸಾಮಾನ್ಯರ ಸಂಬಂಧ, ಹಣ ಮತ್ತು ಸಮಯದ ಉಳಿತಾಯವಾಗುತ್ತದೆ ಇಂತಹ ವಿಶೇಷ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ೨ ಚೆಕ್ ಅಮಾನ್ಯ ಪ್ರಕರಣ, ೨ ಹಣ ವಸೂಲಾತಿ , ೭ ಮರಳು ಸಾಗಾಣಿಕೆ ಮತ್ತು ಗಣಿಗಾರಿಕೆ ಪ್ರಕರಣಗಳು, ೧೦ ಪಾಲು ವಿಭಾಗ , ೬ ಇತರೆ ಸಿವಿಲ್ ಪ್ರಕರಣಗಳು, ೧೨ ಜೀವನಾಂಶ ಪ್ರಕರಣಗಳು, ೨ ಇತರೆ ಲಘು ಅಪರಾಧಿಕ ಪ್ರಕರಣಗಳು, ೨೬೦ ರಾಜಿಯಾಗಬಲ್ಲ ಐಪಿಸಿ ಪ್ರಕರಣಗಳು , ೧೬ ಜನನ ಮತ್ತು ಮರಣ ಪ್ರಕರಣಗಳು, ೧೨ ಒಟ್ಟು ೬೦೯ ಪ್ರಕರಣಗಳಲ್ಲಿ ೩೨೭ ಪ್ರಕರಣಗಳು ರಾಜೀ ಸಂಧಾನದ ಮೂಲಕ ಬಗೆಹರಿದವು.
ಈ ಸಂದರ್ಭದಲ್ಲಿ ಜೆಎಂಎಫ್‌ಸಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಚ್. ದೇವದಾಸ್, ಸರ್ಕಾರಿ ಸಹಾಯಕ ಅಭಿಯೋಜಕರಾದ ಕವಿತಾ, ವಾಣಿ, ವಕೀಲರ ಸಂಘದ ಅಧ್ಯಕ್ಷ ಉಮಾಕಾಂತ್ ಜೋಯ್ಸ್, ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ವೈ.ಜೆ. ರಾಮಚಂದ್ರಪ್ಪ, ಸಹಕಾರ್ಯದರ್ಶಿ ಬಿ.ಷಣ್ಮುಖ, ವಕೀಲರಾದ ಎಸ್.ಎನ್.ಪ್ರಕಾಶ್, ಸುನಿಲ್ ಕುಮಾರ್, ಹಳದಪ್ಪ, ನೀಲಕಂಠಸ್ವಾಮಿ, ಗಣೇಶ್ ಕುಮಾರ್, ಚಂದ್ರಪ್ಪ, ಗುಡ್ಡಪ್ಪ, ಮಡಿವಾಳ್ ಚಂದ್ರಪ್ಪ, ಚೇತನ್ ಕುಮಾರ್, ರವಿನಾಯ್ಕ್, ಪುರುಷೋತ್ತಮ್, ಮೇಘರಾಜ್, ಜಗದೀಶ್, ದೊರೆಸ್ವಾಮಿ, ಸತೀಶ್, ಜಿ.ಎಂ.ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.